Home / ಕವನ / ಕವಿತೆ / ನನ್‌ ಲಚ್ಮಿ

ನನ್‌ ಲಚ್ಮಿ

ಹಾಗೇ ನೋಡ್ತಾ ನೋಡ್ತಾ ಹೋದ್ರೆ
ನನ್ ಲಚ್ಮೀನೆ ಒಳ್ಳ್ಯೋಳು |
ಘಟ್ಟ್ಯಾಗೇನೊ ಮಾತಾಡ್ತಾಳೆ
ಆದ್ರೂನೂವೆ ಒಳ್ಳ್ಯೋಳು ||

ಅವ್ಳೂ ಬಂದು ಸಿದ್ದೇ ಎಡ್ವಿ
ಹದ್ನಾರ್ ವರ್ಷ ಹಾರ್ಹೋಯ್ತು |
ಸೇತ್ವೇ ಕೆಳ್ಗೆ ಕಲ್ಮಣ್ ಮುಚ್ಚಿ
ಹೊನ್ನೀರ್ ಕಾಲ್ವೆ ತುಂಬ್ಹೋಯ್ತು||

ತುಂಬಿದ್ ಕಾಲ್ವೆ ತೋಟಿಕ್ ನುಗ್ಗಿ
ಚಿನ್ನದ್ ಸೊಪ್ನಾ ಸುರ್ದಿತ್ತು |
ಬೇಲೀ ಸುತ್ತಾ ಹೂವಿನ್ ಸುಗ್ಗಿ
ಜೀವದ್ ಕಣ್ಣೇ ತೆರ್ದಿತ್ತು ||

ಹಳ್ಳ್ಯೋಳೂಂತಾ ಅನ್ನೋರನ್ಲಿ
ಒಳ್ಳೇ ಹೆಂಡ್ತಿ ನನ್ ಲಚ್ಮಿ|
ಬೆಳ್‌ಬೆಳ್‌ಗಿದ್ದೋರ್‌ ಬೆಳ್ಕೊಂಡ್‌ಬರ್ಲಿ
ಪಚ್ಚೇ ಬಳ್ಳಿ ನನ್ ಲಚ್ಮಿ ||

ತೊಟ್ಲೂ ಬಟ್ಲೂ ತಂದೋರ್ಯಾರು
ಅವ್ಳೇ ತಾನೆ ನನ್ ಲಚ್ಮಿ|
ಬಿಸ್ಲಲ್ ಮಳೇಲ್ ನಕ್ಕೋರ್ಯಾರು
ನೊಂದೋರ್ಯಾರು ನನ್ ಲಚ್ಮಿ||

ಹನ್ನೊಂದ್‌ ಘಂಟೇಗನ್ನಾ ಹಾಕಿ
ಕಾಪಾಡೋಳೇ ನನ್ ಲಚ್ಮಿ|
ಮಕ್ಕಳ್ನೆಲ್ಲಾ ತೂಗಿ ಸಾಕಿ
ಬೆಳ್ಸೋ ದೇವ್ರೆ ನನ್ ಲಚ್ಮಿ ||

ಜೊತೇಲ್‌ಬಂದು ಮರೇಲ್‌ನಿಂತು
ನನ್ನೇ ನೋಡ್ತಾಳ್ ನನ್‌ಲಚ್ಮಿ|
ಮೋಡದ್‌ಮರೇಲ್ ಮುಂಗಾರ್‌ಮಿಂಚು
ಹಾಡಿನ್ ತುಂಬಾ ನನ್ ಲಚ್ಮಿ ||
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...