Home / ಕವನ / ಕವಿತೆ / ಕೂಡಿ ಕೆಳೆಯುವ ಆಟ

ಕೂಡಿ ಕೆಳೆಯುವ ಆಟ

ನನಗೆ ಅರವತ್ತು ವರ್ಷ
ನಮ್ಮವರಿಗೆ ಎಪ್ಪತ್ತು
ಏನೋ ಇಬ್ಬರಿಗೂ ಬೇಜಾರಾದಾಗೆಲ್ಲ
ನನ್ನ ಎಪ್ಪತ್ತರಲ್ಲಿ ನಿನ್ನ ಅರವತ್ತು ಕಳೆ
ಉಳಿದ ಹತ್ತರಲ್ಲಿ
ನೀನೈದು ವರ್ಷದವಳು ನಾನೈದು ವರ್ಷದವ
ಬಾ ಎಂದು ಕೈಹಿಡಿದು
ನನ್ನ ಮೊಮ್ಮಕ್ಕಳು ಸಾಕಿರುವ
ನಾಯಿಯ ಮರಿಯ ಹತ್ತಿರವೋ
ಬೆಕ್ಕಿನ ಮರಿಗಳ ಹತ್ತಿರವೋ ಒಯ್ದು
ಮರಿಗಳನ್ನು ನನ್ನ ಹೆಗಲ ಮೇಲೆಯೋ
ಕಾಲ ಹತ್ತಿರವೋ ಹಾಕಿದಾಗ
ಖುಷಿಯಾಗಿ ನನ್ನ ಕಣ್ಣಲ್ಲಿನೀರು ಬರುತ್ತದೆ
ಮೊಮ್ಮಕ್ಕಳು
‘ಹೋ ಅಜ್ಜಿ ಅಜ್ಜಿ ಅಳ್ತಾ ಇದೆ
ಎಂದು ಚಪ್ಪಾಳೆ ತಟ್ಟಿ ಆನಂದಿಸುವಾಗ
ನನ್ನವರು ಐದರಲ್ಲಿ ಇನ್ನೊ ಅರ್ಧವಾಗಿ
ಮೊಮ್ಮಕ್ಕಳ ಹಿಂದೆ ಓಡುತ್ತಾರೆ
ಸಂತೋಷದ ಕಣ್ಣೀರು ನನಗೆ ಉಕ್ಕಿ ಬಂದಾಗ
ಅಯ್ಯೋ ಪಾಪ ಅಜ್ಜಿ ಅಳ್ತಾ ಇದೆ, ಎಂದು
ಮೊಮ್ಮಕ್ಕಳೆಲ್ಲ ಮೆತ್ತಗೆ
ಒಳಗೆ ಒಯ್ದು
ಮೆತ್ತನೆಯ ಹಾಸಿಗೆಯ ಮೇಲೆ
ಮಲಗಿಸಿ
ಮಮ್ಮಿ
ಅಜ್ಜಾ- ಅಜ್ಜಿಗೆ ಬಿಸಿ ಕಾಫಿ
ಎಂದು ಆರ್ಡರ್ ಮಾಡಿದಾಗ
ನಾವು ಮೊಮ್ಮಕ್ಕಳಲ್ಲಿ
ಮರಿ ಮಕ್ಕಳಂತೆ ಕರಗಿ ಹೋಗಿದ್ದೆವು.
(ನಮ್ಮ ಪಕ್ಕದ ಮನೆಯ ಅಜ್ಜಿ ತನ್ನ ವಿಷಯವಾಗಿ ಒಂದು ಕವನ ಬರೆಯಲು ಹೇಳುತ್ತಿದ್ದರು. ಪ್ರತಿ ಸಲ ಬಂದಾಗ ವಿಚಾರಿಸುತ್ತಿದ್ದರು. ಅವರ ಅರವತ್ತರ ಹುಟ್ಟುಹಬ್ಬಕ್ಕೆ ಅವರ ವಿಷಯವೇ ಬರೆದುಕೊಟ್ಟಾಗ ನಿಜವಾಗಿಯೂ ಅವರ ಕಣ್ಣಲ್ಲಿ ಆನಂದ ಭಾಷ್ಪವು ಬಂದವು)
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...