Home / ಲೇಖನ / ವಿಜ್ಞಾನ / ಭವಿಷ್ಯದ ವಿಸ್ಮಯ ಆಸ್ಪತ್ರೆಗಳು

ಭವಿಷ್ಯದ ವಿಸ್ಮಯ ಆಸ್ಪತ್ರೆಗಳು

ಕಾಲಬದಲಾದಂತೆ ಎಲ್ಲ ರ೦ಗಗಳಲ್ಲೂ ಆವಿಷ್ಕಾರಗಳಾಗುತ್ತದೆ. ಇಂದಿನಂತೆ ತೊಳೆಯದ ಸಿರ೦ಜ್ ಚುಚ್ಚುವ ಕಾಲವಿರುವುದಿಲ್ಲ ಅನಾಮತ್ತಾಗಿ ಹಲ್ಲುಗಳನ್ನು ಕಿತ್ತಿಬಿಡುವ ಸ೦ದರ್ಭಗಳಿರುವುದೇ ಇಲ್ಲ ರೋಗ ನಿರೋಧಕ ಪರೀಕ್ಷೆಗಾಗಿ ರೋಗಿಯಾದವನು ಆಸ್ಪತ್ರೆಗೆ ಹೋದಾಗ ವೈದ್ಯರು ಆತನ ಶರೀರದಲ್ಲಿ ರೋಗಗ್ರಸ್ಥನಾದ ಭಾಗಗಳಲ್ಲಿರುವ ಜೀವಕೋಶ ಗಳನ್ನು ಕ೦ಪ್ಯೂಟರ್‌ಗೆ ಅಳವಡಿಸುತಾರೆ. ಒ೦ದು ಉಪಕರಣದ ಸಹಾಯದಿಂದ ಅದನ್ನು ಪರಿಶೀಲಿಸುತ್ತಾರೆ. ಆ ಉಪಕರಣವು ಆ ಜೀವಕೋಶವನ್ನು3 ಆಯಾಮಗಳಲ್ಲಿ (3D ಎಫೆಕ್ಟ್‌) ಮೂಲಕ ಅನಾವರಣಗೊಳಿಸುತ್ತದೆ. ಸ೦ಶೂ೬ಧಕರು ಆಯ್ಕೆ ಮಾಡಿದ ಕೋಶವು ವರ್ಚುವಲ್ ರಿಯಾಲಿಟಿ ಕನ್ನಡಕದ ಮೇಲೆ ಸೇರಿಕೊ೦ಡು ಅಲ್ಲಿ೦ದ ಸೈಬರ್ ಸ್ಪೇಸ ಒಳಗೆ ಪ್ರವೇಶಿಸುತ್ತದೆ. ಆಗ ವ್ಯಾಧಿಗ್ರಸ್ಥ ಕೋಶವು ಬೃಹದಾಕಾರದಲ್ಲಿ ಕಾಣಿಸುತ್ತದೆ. ವಿಜ್ಞಾನಿಗಳು ಅದನ್ನು ಕೂಲಂಕುಶವಾಗಿ ಪರಿಶೀಲನೆ ಮಾಡುತ್ತಾರೆ. ನ೦ತರ ಅದನ್ನು ಗುಣಪಡಿಸಬಹುದಾದ ಔಷಧಗಳನ್ನು ಅದರ ಮೇಲೆ ಪ್ರಯೋಗಿಸಿ ಅದರಲ್ಲಿ ನಡೆಯುವ ರಾಸಾಯನಿಕ ಕ್ರಿಯೆಯನ್ನು ಪರಿಶೀಲಿಸಿ ದಾಖಲಿಸುತ್ತಾರೆ. ವೈದ್ಯಕೀಯ ಸಂಶೋಧನೆಗಳಲ್ಲಿ ಸಿಸ್ಟಿಮ್ಸ್‌ ಕೇವಲ ಉಪಕರಣಗಳಾಗಿರದೇ ನಮ್ಮ ದೈನಂದಿನ ಜೀವನದಲ್ಲಿ ವಿಡಿಯೋಗೇಮ್ಸ್‌ನಿಂವ ಹಿಡಿದು ಡ್ರೈವಿ೦ಗ್ ಲೈಸನ್ಸ್ ಪಡೆದುಕೊಳ್ಳುವವರೆಗೂ ಪ್ರಮುಖ ಪಾತ್ರ ವಹಿಸುತ್ತದೆ. ಇ೦ತಹ ಆಸ್ಪತ್ರೆಗಳು ಉದಯವಾದರೆ ರೋಗಕಣಗಳು ನಿರ್ಮೂಲನೆಗೊ೦ಡು ಮನುಷ್ಯ ಸುಖಶಾ೦ತಿಯಿಂದ ಹೆಚ್ಚು ವಯೋಮಾನದವರೆಗೆ ಬದುಕಬಲ್ಲ ಇಂದಿನ ಆಸ್ಪತ್ರೆ ಯೊಳಗಿನ ನರಕದ ತಾಪತ್ರಯಗಳ ಅನುಭವವೇ ಇರುವುದಿಲ್ಲ ಇಂದು ದಾದಿ, ನಸ್೯, ವೈದ್ಯರು ಇತರೆ ಸಿಬ್ಬಂದಿಗಳು, ಮೇಜು, ಕುರ್ಚಿ, ಬೀರು ಹೀಗೆ ವೈದ್ಯಾಲಯವಾಗಿರದೇ ಎಲ್ಲವೂ ತ೦ತ್ರಜ್ಞಾನದ ಫಲವಾಗಿ ಕೇವಲ ವಿಜ್ಞಾನಿ ವೈದ್ಯರು ಮತ್ತು ಶೇ. 2 ರಷ್ಟು, ಕೆಲಸಗಾರರು ಇರಬಹುದು.

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...