Home / ಕವನ / ಕವಿತೆ / ಮರಣಂ ಶರಣಂ

ಮರಣಂ ಶರಣಂ

ದಿನಪತ್ರಿಕೆಯ ಪುಟವ ತಿರುಗಿಸಲು
ಕಾಣುತಿಹವು ಸಾವು
ರೈತರ ಆತ್ಮಹತ್ಯೆ ಸಾವು
ಅಲ್ಲಿ ಸಾಯುವನು ಇಲ್ಲಿ ಸಾಯುವನು
ದಿನವು ಸಾಯುವರು ಮಣ್ಣಿನ ಮಕ್ಕಳು
ದಿನವು ಸಾಯುತಿದೆ ದೇಶದೊಕ್ಕಲು
ಬೆನ್ನೆಲುಬು ಬಾನು ಬಿಕ್ಕಲು
ಬೀಜ ಬಂಜೆಯಾಯಿತೋ ರೋಗ ಮುತ್ತಿತೋ
ಮಳೆಯು ಬಾರದೆ ಒಣಗಿ ಹೋಯಿತೋ
ಅಂತೂ ಇಂತೂ ನೆಲದ ಕಂದರಿಗೆ ಉಳಿವಿಲ್ಲವಾಯಿತೋ
ಸಣ್ಣ ಮಕ್ಕಳಿಗೆ ಕೂಳು ಇಲ್ಲವೋ
ಮನೆಯಲೆಲ್ಲರಿಗೆ ಕಾಳು ಇಲ್ಲವೋ
ಹರಕು ಬಟ್ಟೆಗಳೊ ಮುರುಕು ಜೋಪಡಿಯೋ
ಹೇಗೋ ಏನೊ ರೂಢಿಯಾಯಿತೊ
ಸಾಲ ಶೂಲವದು ಬಂದು ಇರಿವಾಗ
ಹೇಗಿದ್ದರೇನು ಸತ್ತರೇನು
ಸರಿ ಮರಣಂ ಶರಣಂ ಗಚ್ಛಾಮಿ

ಕೇಳದಾಗಿದೆ ಕಿವುಡು ಸರಕಾರ
ಕಾಣದಾಗಿದೆ ಕುರುಡು ದರಬಾರ
ಕೋಟಿಗಟ್ಟಲೆ ಬರ ಪರಿಹಾರ
ಹರಿದು ಬರುತಿದೆ ಯಾರ ಬಾಯಿಗೊ ಯಾರ ಜೇಬಿಗೊ
ಎಲ್ಲಿ ಹೋಗುವುದೊ ಯಾರು ಬಲ್ಲರು?
ಬೆವರ ಹನಿ ಹನಿ ಆವಿಯಾಯಿತು
ಸಾಯುವ ಜೀವಕೆ ಬಾಯಿಯೆ ಇಲ್ಲ
ಅಳುವ ಬಾಯಿಗೆ ದನಿಯೆ ಇಲ್ಲ
ರಾಜಧಾನಿಯಲ್ಲಿ ಹವಾನಿಯಂತ್ರದಿ
ನಿದ್ದೆ ಹೋಗಿಹರು ಮಂತ್ರಿ ದಾನವರು
ದಿನವೂ ಸಾರುತಿದೆ ಪತ್ರಿಕೆ
ರೈತನ ಸಾವು, ಸಾಯುವರು ಸಾಯುವರು

ನೆಲದ ನಿಟ್ಟುಸಿರು ಭೋರೆಂಬ ಗಾಳಿ
ಬರಿದೆ ಬೀಸೇ ಬೀಸುತಿರುವುದು
ಮೋಡದೊಡಲು ಗಡಬಡಿಸುತಿದೆ
ಒಂದೆರಡು ಹನಿ ಉದುರಿಸುತಿದೆ
ಅಶ್ರುತರ್ಪಣ ನಿಷ್ಕಾರಣ |
ಸುದ್ದಿ ಸಾರುವುದು ಪತ್ರಿಕೆ
ಮರುದಿನ ರದ್ದಿ ಅದೇ ಹಳೆ ಸುದ್ದಿ
ದಿನವೂ ಸಾಯುವವರಿಗೆ ಅಳುವವರು ಯಾರು
ಯಾರು ಕೆಡಿಸಿಕೊಳ್ಳುತ್ತಾರೆ ನಿದ್ದಿ
ಮರಣಂ ಶರಣಂ ಗಚ್ಛಾಮಿ

*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...