Home / ಕವನ / ಕವಿತೆ / ದುಡಿಮೆಯೆ ದೇವರು

ದುಡಿಮೆಯೆ ದೇವರು

ದುಡಿಮೆಯೆ ದೇವರು ದುಡೀ ದುಡೀ
ಅಕ್ಷರ ಬ್ರಹ್ಮನ ಪಡೀ ಪಡೀ ||ಪ||

ಭೂಮಿ ತಾಯಿಯು ದುಡಿತಾಳೆ
ಸೂರ್ಯ ಚಂದ್ರರು ದುಡಿತಾವೆ
ಗಾಳಿ ಬೀಸುತಾ ನೀರು ಹರಿಯುತಾ
ಬೆಂಕಿ ಉರಿಯುತಾ ದುಡಿತಾವೆ ||೧||

ದುಡಿಮೆಯಿಂದಲೇ ಕೋಟೆ ಕೊತ್ತಲ
ವೈಭವ ರಾಜ್ಯವು ಮೆರೆದಾವೆ
ಗುಡಿ ಗೋಪುರಗಳು ಮಠಮಾನ್ಯಗಳು
ದುಡಿಮೆಯಿಂದಲೇ ಬೆಳೆದಾವೆ ||೨||

ಕಾರು ಲಾರಿಗಳು ಓಡುವ ರಸ್ತೆಯು
ದುಡಿಮೆಯಿಂದಲೇ ಓಡುತಿವೆ
ಮಂತ್ರಿ ಮಹಾಜನರಾಳುವಂತಹ
ವಿಧಾನ ಭವನಗಳಾಗುತಿವೆ ||೩||

ಚಳಿ ಬಿಸಿಲೆನ್ನದೆ ದುಡಿಯುವ ರೈತನು
ದೇಶಕೆ ಅನ್ನವ ಬೆಳಿತಾನೆ
ಕಾರಖಾನೆಗಳ ಮನೆ ಅರಮನೆಗಳ
ಕಾರ್ಮಿಕ ಕಟ್ಟುತ ನಿಲಿಸ್ಯಾನೆ ||೪||

ಹಾಡು ಕಟ್ಟುವವು ಕಾವ್ಯ ಮೊಳೆಯುವುವು
ದುಡಿಮೆಯೆ ಬಾಳಿನ ಬಟ್ಟೆಯಲಿ
ಕಲೆಗಳರಳುವುವು ನಾಟ್ಯವಾಡುವುವು
ದುಡಿಮೆಯೆ ದಾರಿಯ ಕಟ್ಟೆಯಲಿ ||೫||

ವಿದ್ಯ ಬುದ್ದಿಗಳು ನೀತಿನೇಮಗಳು
ಚೆನ್ನುಡಿ ಚೆನ್ನಡೆ ದುಡಿಮೆಯಲೆ
ದುಡಿಯುವ ಜನಗಳೆ ನಾಡಿನ ಬುನಾದಿ
ವಿಜ್ಞಾಗಳಿಗು ಅದೇ ನೆಲೆ ||೬||

ದುಡಿಯುವ ಜನರನು ಹೀರುತ ಬಂದಿವೆ
ಒಡೆತನ ಮಾಡುವ ಜಿಗಣೆಗಳು
ಕೆಚ್ಚಲ ಹಾಲದು ಕರುವಿಗೆ ದಕ್ಕದೆ
ರಕ್ತವ ಕುಡಿಯುವ ಉಣ್ಣೆಗಳು ||೭||

ಅಕ್ಷರ ಬಲ್ಲವ ರಕ್ಕಸನಾದರೆ
ದುಡಿಯುವ ಬಡವಗೆ ಉಳಿವಿಲ್ಲ
ಓದುತ ಬರೆಯುತ ಎಲ್ಲವನರಿತರೆ
ದೋಚುವರ್ಯಾರು ಉಳಿಯಲ್ಲ ||೮||

ದುಡಿಮೆಯೆ ಬದುಕಿನ ಹಣತೆಗೆ ಎಣ್ಣೆ
ವಿದ್ಯೆಯು ಉರಿಯುವ ಬತ್ತಿ
ಎರಡೂ ಸೇರಲು ಕಾಂತಿಯು ಶಾಂತಿಯು
ದುಡಿವವ ದೇಶದ ಶಕ್ತಿ ||೯||

*****

Tagged:

Leave a Reply

Your email address will not be published. Required fields are marked *

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...