Home / ಕವನ / ಕವಿತೆ / ದುಡಿಮೆಯೆ ದೇವರು

ದುಡಿಮೆಯೆ ದೇವರು

ದುಡಿಮೆಯೆ ದೇವರು ದುಡೀ ದುಡೀ
ಅಕ್ಷರ ಬ್ರಹ್ಮನ ಪಡೀ ಪಡೀ ||ಪ||

ಭೂಮಿ ತಾಯಿಯು ದುಡಿತಾಳೆ
ಸೂರ್ಯ ಚಂದ್ರರು ದುಡಿತಾವೆ
ಗಾಳಿ ಬೀಸುತಾ ನೀರು ಹರಿಯುತಾ
ಬೆಂಕಿ ಉರಿಯುತಾ ದುಡಿತಾವೆ ||೧||

ದುಡಿಮೆಯಿಂದಲೇ ಕೋಟೆ ಕೊತ್ತಲ
ವೈಭವ ರಾಜ್ಯವು ಮೆರೆದಾವೆ
ಗುಡಿ ಗೋಪುರಗಳು ಮಠಮಾನ್ಯಗಳು
ದುಡಿಮೆಯಿಂದಲೇ ಬೆಳೆದಾವೆ ||೨||

ಕಾರು ಲಾರಿಗಳು ಓಡುವ ರಸ್ತೆಯು
ದುಡಿಮೆಯಿಂದಲೇ ಓಡುತಿವೆ
ಮಂತ್ರಿ ಮಹಾಜನರಾಳುವಂತಹ
ವಿಧಾನ ಭವನಗಳಾಗುತಿವೆ ||೩||

ಚಳಿ ಬಿಸಿಲೆನ್ನದೆ ದುಡಿಯುವ ರೈತನು
ದೇಶಕೆ ಅನ್ನವ ಬೆಳಿತಾನೆ
ಕಾರಖಾನೆಗಳ ಮನೆ ಅರಮನೆಗಳ
ಕಾರ್ಮಿಕ ಕಟ್ಟುತ ನಿಲಿಸ್ಯಾನೆ ||೪||

ಹಾಡು ಕಟ್ಟುವವು ಕಾವ್ಯ ಮೊಳೆಯುವುವು
ದುಡಿಮೆಯೆ ಬಾಳಿನ ಬಟ್ಟೆಯಲಿ
ಕಲೆಗಳರಳುವುವು ನಾಟ್ಯವಾಡುವುವು
ದುಡಿಮೆಯೆ ದಾರಿಯ ಕಟ್ಟೆಯಲಿ ||೫||

ವಿದ್ಯ ಬುದ್ದಿಗಳು ನೀತಿನೇಮಗಳು
ಚೆನ್ನುಡಿ ಚೆನ್ನಡೆ ದುಡಿಮೆಯಲೆ
ದುಡಿಯುವ ಜನಗಳೆ ನಾಡಿನ ಬುನಾದಿ
ವಿಜ್ಞಾಗಳಿಗು ಅದೇ ನೆಲೆ ||೬||

ದುಡಿಯುವ ಜನರನು ಹೀರುತ ಬಂದಿವೆ
ಒಡೆತನ ಮಾಡುವ ಜಿಗಣೆಗಳು
ಕೆಚ್ಚಲ ಹಾಲದು ಕರುವಿಗೆ ದಕ್ಕದೆ
ರಕ್ತವ ಕುಡಿಯುವ ಉಣ್ಣೆಗಳು ||೭||

ಅಕ್ಷರ ಬಲ್ಲವ ರಕ್ಕಸನಾದರೆ
ದುಡಿಯುವ ಬಡವಗೆ ಉಳಿವಿಲ್ಲ
ಓದುತ ಬರೆಯುತ ಎಲ್ಲವನರಿತರೆ
ದೋಚುವರ್ಯಾರು ಉಳಿಯಲ್ಲ ||೮||

ದುಡಿಮೆಯೆ ಬದುಕಿನ ಹಣತೆಗೆ ಎಣ್ಣೆ
ವಿದ್ಯೆಯು ಉರಿಯುವ ಬತ್ತಿ
ಎರಡೂ ಸೇರಲು ಕಾಂತಿಯು ಶಾಂತಿಯು
ದುಡಿವವ ದೇಶದ ಶಕ್ತಿ ||೯||

*****

Tagged:

Leave a Reply

Your email address will not be published. Required fields are marked *

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...