Home / ಕವನ / ಕವಿತೆ / ಪದವೊಂದ ಹಾಡ್ತೀನಿ

ಪದವೊಂದ ಹಾಡ್ತೀನಿ

ಪದವೊಂದು ಹಾಡ್ತೀನಿ
ಎದೆಯ ಕದ ತೆರೆದು ಕೇಳು
ನೋವುಂಡ ಸ್ವರ ತೇಲಿ ಬಂದಾವ,
ನೀಡಲಾರವು ಮುದವ
ತುಟಿತನ ಬಂದು ಹರಳುಗಟ್ಟಾವ,
ಹಗುರವಾಗಲಿ ಎದೆ ಅಂತ
ಪದವೊಂದು ಹಾಡ್ತೀನಿ…

ನಡೆಯುತ್ತ ನಡೆಯುತ್ತ
ದಾರಿ ಸವೆಯಲಿ ಎಂದು
ಮುಳ್ಳು ಬೇಲಿಯ ಹಾದಿ,
ಕಲ್ಲುಗಳು ಬಹಳ
ಅಂಗಾಲ ಗಾಯಕ್ಕೆ
ಬಾಮು ಸವರಲು ನಾನು
ಪದವೊಂದ ಹಾಡ್ತೀನಿ…

ಕವಿದ ಕತ್ತಲೆಯೊಳಗ ಬೆಳಕು
ಮೂಡೀತೆಂಬ ಹುಚ್ಚು ಭರವಸೆಯಲ್ಲಿ
ಕಿವಿಯಲ್ಲಿ ನಿನ್ನ ಹೆಜ್ಜೆಯ
ತಾಳ ತಪ್ಪದೇ ಇರಲೆಂದು…
ತಿರುಗಿ ನೋಡದೆ ತಿರುವಿನೊಳಗ
ನೀ ಜಾರಿ ಹೋಗುವ ಮುನ್ನ
ಪದವೊಂದ ಹಾಡ್ತೀನಿ…

ಗಾಳಿಯಲಿ ತೇಲಿದ ಪದಗಳ
ಅಲಿಗಳ ಮ್ಯಾಲೆ ಸವಾರಿ ಮಾಡಿ
ಬದಲಾದಾಗ ನಮ್ಮ ದಿಕ್ಕು
ನಾನೊಂದು ಬದಿ ನೀನೊಂದು ಬದಿ
ನಡುವ ಹರದೈತಿ ಸಮಯದಾ ನದಿ
ಆದರೂ ತಾಳದೆ ಎದೆಗುದಿ
ನಾನು ಪದವೊಂದ…

ಅರಿವು ಮರೆವಿನ ನಡುವಣ
ಗೆರೆಯು ತಾ ಬಲು ತೆಳುವು
ಧಾಟಿ ಮರೆಯುವ ಮುನ್ನ
ಎಲ್ಲರೂ ಬಲ್ಲರು
ಕಲ್ಲು ಕರಗದು ಎಂದು
ಹುಲ್ಲು ಚಿಗುರೀತೆಂದು
ಹುಂಬ ಭರವಸೆಯಿಂದ
ಪದವೊಂದು…

ನಾನು ನಾನಾಗಿರದೆ
ನಾನೆ ಪದವಾಗುವ ತನಕ
ಬಾನ ಕಿರಣದ ತಂತಿಯ ಮೀಟಿ
ಭುವಿಯ ಮದ್ದಳೆಯ
ತಕಧಿಮಿಗೆ ಕುಣಿಯುತ್ತಾ
ನಿಮ್ಮ ಕರಣ ಸೇರುವ ತನಕ
ಪದವೊಂದ ಹಾಡ್ತೀನಿ,
ನಾನು ಪದವೊಂದ ಹಾಡ್ತೀನಿ…
*****

Tagged:

Leave a Reply

Your email address will not be published. Required fields are marked *

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...