Home / ಕವನ / ಕವಿತೆ / ಪದವೊಂದ ಹಾಡ್ತೀನಿ

ಪದವೊಂದ ಹಾಡ್ತೀನಿ

ಪದವೊಂದು ಹಾಡ್ತೀನಿ
ಎದೆಯ ಕದ ತೆರೆದು ಕೇಳು
ನೋವುಂಡ ಸ್ವರ ತೇಲಿ ಬಂದಾವ,
ನೀಡಲಾರವು ಮುದವ
ತುಟಿತನ ಬಂದು ಹರಳುಗಟ್ಟಾವ,
ಹಗುರವಾಗಲಿ ಎದೆ ಅಂತ
ಪದವೊಂದು ಹಾಡ್ತೀನಿ…

ನಡೆಯುತ್ತ ನಡೆಯುತ್ತ
ದಾರಿ ಸವೆಯಲಿ ಎಂದು
ಮುಳ್ಳು ಬೇಲಿಯ ಹಾದಿ,
ಕಲ್ಲುಗಳು ಬಹಳ
ಅಂಗಾಲ ಗಾಯಕ್ಕೆ
ಬಾಮು ಸವರಲು ನಾನು
ಪದವೊಂದ ಹಾಡ್ತೀನಿ…

ಕವಿದ ಕತ್ತಲೆಯೊಳಗ ಬೆಳಕು
ಮೂಡೀತೆಂಬ ಹುಚ್ಚು ಭರವಸೆಯಲ್ಲಿ
ಕಿವಿಯಲ್ಲಿ ನಿನ್ನ ಹೆಜ್ಜೆಯ
ತಾಳ ತಪ್ಪದೇ ಇರಲೆಂದು…
ತಿರುಗಿ ನೋಡದೆ ತಿರುವಿನೊಳಗ
ನೀ ಜಾರಿ ಹೋಗುವ ಮುನ್ನ
ಪದವೊಂದ ಹಾಡ್ತೀನಿ…

ಗಾಳಿಯಲಿ ತೇಲಿದ ಪದಗಳ
ಅಲಿಗಳ ಮ್ಯಾಲೆ ಸವಾರಿ ಮಾಡಿ
ಬದಲಾದಾಗ ನಮ್ಮ ದಿಕ್ಕು
ನಾನೊಂದು ಬದಿ ನೀನೊಂದು ಬದಿ
ನಡುವ ಹರದೈತಿ ಸಮಯದಾ ನದಿ
ಆದರೂ ತಾಳದೆ ಎದೆಗುದಿ
ನಾನು ಪದವೊಂದ…

ಅರಿವು ಮರೆವಿನ ನಡುವಣ
ಗೆರೆಯು ತಾ ಬಲು ತೆಳುವು
ಧಾಟಿ ಮರೆಯುವ ಮುನ್ನ
ಎಲ್ಲರೂ ಬಲ್ಲರು
ಕಲ್ಲು ಕರಗದು ಎಂದು
ಹುಲ್ಲು ಚಿಗುರೀತೆಂದು
ಹುಂಬ ಭರವಸೆಯಿಂದ
ಪದವೊಂದು…

ನಾನು ನಾನಾಗಿರದೆ
ನಾನೆ ಪದವಾಗುವ ತನಕ
ಬಾನ ಕಿರಣದ ತಂತಿಯ ಮೀಟಿ
ಭುವಿಯ ಮದ್ದಳೆಯ
ತಕಧಿಮಿಗೆ ಕುಣಿಯುತ್ತಾ
ನಿಮ್ಮ ಕರಣ ಸೇರುವ ತನಕ
ಪದವೊಂದ ಹಾಡ್ತೀನಿ,
ನಾನು ಪದವೊಂದ ಹಾಡ್ತೀನಿ…
*****

Tagged:

Leave a Reply

Your email address will not be published. Required fields are marked *

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...