Home / ಕವನ / ಕವಿತೆ / ‘ಸೂಟ್‌ಕೇಸ್ ಸ್ಟೆಟಲಾನಾ’

‘ಸೂಟ್‌ಕೇಸ್ ಸ್ಟೆಟಲಾನಾ’

ವರ್ಷಕ್ಕೂಮ್ಮೆ ರಜೆ ಬರುತ್ತದೆ (ಬರುತ್ತಾನೆ)
ನಮ್ಮ ಸೂಟ್‌ಕೇಸ್ ಬಸಿರಾಗುತ್ತದೆ (ಬಸಿರಾಗುತ್ತಾಳೆ)
ನೂರಾರು ಮಕ್ಕಳ ಗರ್ಭ
ಧರಿಸುವ ಸಡಗರ
ವರ್ಷವಿಡೀ bedrest
ಮೇಲಂತಸ್ತಿನ shelf ದಿಂದೆದ್ದು
ಮೈ ಕೊಡವಿಕೊಂಡು ರಜೆ ಬಂದನೆಂದು
ಬಸಿರಾಗಲು ಇಳಿದು ಬರುತ್ತಾಳೆ.
ಒದ್ದೆ ಬಟ್ಟೆಯ ಸ್ನಾನ
ಗರಿಗರಿಯಾದ ಪೇಪರ ಸೀರೆ
ಸುತ್ತಿಕೊಂಡು ಖುಷಿ ಪಡುವಳು
ದಿನ ದಿನಕ್ಕೆ ಹೊಸ ಹೊಸ ತಿಂಡಿ ತಿನಿಸುಗಳು
ಪೇಟೆಯ ಫ್ಯಾನ್ಸಿ ವಸ್ತುಗಳೆಲ್ಲ
ಬೇಕು ಬೇಕೆಂದು ಹೊಟ್ಟೆಗೆ ಹಾಕುತ್ತ
ಉಬ್ಬುಬ್ಬುತ್ತಾ ಖುಷಿಪಟ್ಟು ವಿಮಾನವೇರಿ
ಹೊರಡುತ್ತಾಳೆ ತವರಿಗೆ ಪ್ರಸವಿಸಲು.
ನಮ್ಮ ಸ್ಪೆಟಲಾನಾ ಈಗ ತುಂಬು ಬಸುರಿ
ಹೆಚ್ಚು ನಡೆಯಲಾರಳು
ಟ್ರಾಲಿ ಮೇಲೆಯೇ ಕುಳಿತು
ಮೆತ್ತಗೆ ವಿಮಾನ ಏರಿಳಿಯುವಳು
ಬಾಂಬೆ ಕಸ್ಟಮ್‌ ಚೆಕ್ಕಿಂಗದಲ್ಲಿ
ಬಾಡಿ ಸ್ಕ್ಯಾನಿಂಗ
ಸ್ಕ್ರೀನ್ ಮೇಲೆ ನೂರಾರು ಮಕ್ಕಳು
ಅಧಿಕಾರಿ ಬರೆಯುತ್ತಾನೆ ಕೇಳುತ್ತಾನೆ
Mini operationಮಾಡೋಣವೇ ?
ಬೇಡ, Natural ಆಗಿಯೇ delivery
ಆಗಬೇಕೆನ್ನುತ್ತೇವೆ.
ಒಂದಿಷ್ಟು ಔಷಧ ಕೊಡಿ duty bill ಬರುತ್ತದೆ
ಡಾಕ್ಟರ್ ಬಿಲ್ ಕೊಡುತ್ತೇವೆ.
ಸ್ಪೆಟಲಾನಾ ಜೊತೆ ನಾವೂ ಸುಸ್ತಾಗಿ
ಮನೆ ಸೇರುತ್ತಿದ್ದಂತೆಯೇ,
ನಮಗಿಂತಲೂ ಬಸುರಿಯ ಮೇಲೆಯೇ
ಎಲ್ಲರ ಕಣ್ಣು
ದುಡು ದುಡು ಓಡಿ ಬಂದು
ಮೆತ್ತಗೆ ಅವಳನ್ನು ಇಳಿಸಿ
ಕೈಭುಜ ಹಿಡಿದು ಒಳಗೊಯ್ಯುವರು
ಅವಳ ಹೊಟ್ಟೆಯ ಮೇಲೆಲ್ಲ ಕೈಯಾಡಿಸಿ
ಗಂಡು ಮಗುವೋ, ಹೆಣ್ಣುಮಗುವೋ
8- 10 ಮಕ್ಕಳ ಮಹಾತಾಯಿಯೋ
ಎಲ್ಲರೂ ನಗೆಯಾಡುವರು
ಕಾಫಿ ಕುಡಿಯುತ್ತಿದ್ದಂತೆಯೇ
ಪ್ರವಾಸದ ಆಯಾಸ ಸೂಟ್‌ಕೇಸ್‌ಗೆ
ಬೇನೆ
ಪ್ರಸವವೇದನೆ Operationಗೆ ತಯಾರಿ –
ಚೆಂದದ ಹೆಸರಿನ (National, Philips, Rado, Rolex,
canon, Minolta, ಪ್ಯಾರಿಸ್ ಪರಫ್ಯೂಮ್ಸ್
ಅರೇಬಿಯನ್ dry fruits, ಸಿಂಗಪೂರ Toys,
U.S.A.Cosmetics. Japanesees ಬಟ್ಟೆಗಳು)
ಅಂದದ ಮಕ್ಕಳು ಕಿಲಕಿಲನೆ ಹುಟ್ಟುತ್ತವೆ
ಎಲ್ಲರೂ ಎತ್ತಿಕೊಳ್ಳುವವರೇ, ಮುದ್ದಿಸುವವರೇ,
ಈ ಮುದ್ದಿನ ಮರಿಗಳನ್ನು
ತನಗೆ ನನಗೆಂದು ಎತ್ತಿಕೊಂಡು ಹೊರಟೇ ಬಿಡುವರು
ಸೂಟ್‌ಕೇಸ್ ಸ್ಟೆಟಲಾನಾ ಸುಸ್ತು ಹೊಡೆದು
ಬೀಳುತ್ತಾಳೆ
ಕೊನೆ ಪಕ್ಷ ಒಂದು ವರ್ಷವಾದರೂ
bedrest ಬೇಕೆಂದು ಮೇಲಂತಸ್ತಿನ
Shelf roomಗೇ ಸೇರಿಬಿಡುತ್ತಾಳೆ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...