Home / ಕವನ / ಕವಿತೆ / ಮನಗಳ್ಳನು

ಮನಗಳ್ಳನು

ಹಿಡಿಯಿರಿ, ಹಿಡಿಯಿರಿ, ಕಳ್ಳನ ಹಿಡಿಯಿರಿ, ಯೆನ್ನಯಮನ ಕದ್ದೊಡುತಿಹ|
ತಡೆಯಿರಿ ಅವನನು ಬಂಧಿಸಿಕೆಡಹಿರಿ ನಿಮ್ಮಯ ಮನದ ಬಂದಿಯಲಿ || ೧ ||

ಎಂದಿಗು ಕಳ್ಳನು ಗೊಲ್ಲಬಾಲನಿವ ಗೋಪಿಯ ಬೆಣ್ಣೆಯ ಕದ್ದಿಹೆನೂ |
ತಂದೆಯ ಮನೆಯಲಿ ಗೊಂದಲವೆಬ್ಬಿಸಿ ಸರುವರಮನನ ತಾ ಶೆಳೆದಾ || ೨ ||

ಮಾವನ ಕಂಸನ ಮೇಲಣ ಮೋಹವ ಬಿಸುಟುತ ಲಟ್ಟಿದಯಮಸದಕೆ |
ಕಾಮನಪಿತ ತಾ ಮೋಹಿತ ಭಕುತಗೆ ಕಾಮಿತಫಲಗಳ ನೀಡುವನೂ || ೩ ||

ಸಣ್ಣವನಿರೆ ತಾ ಮಣ್ಣತಿಂದನೆಂದಣ್ಣನು ಜನನಿಗೆ ಪುಸಿನುಡಿಯೆ |
ತನ್ನಬಾಯತೆರೆದೋರಿದ ಜನನಿಗೆ ವಿಶ್ವದ ವಿಸ್ತರವದರೊಳಗೇ || ೪ ||

ತುಂಟಗಳ್ಳನಿವ ತಂಟೆಯೊಡ್ಡುವ ಸಂತತ ದುರ್ಜನ ಪಥದೊಳಗೇ |
ಗಂಟೆಚವಡಿಯಿವ ಭಕ್ತಿಯಗಂಟನು ಸಂತತಕದಿಯುವ ಜಗದೊಳಗೆ || ೫ ||

ತನ್ನಮನೆಯದು ದೂರವಿರುತಿರೆ ಸರುವರ ಮನದಲಿ ತಾ ಸುಳಿವ |
ತನ್ನಯ ಭಕುತರ ನಿಲ್ಲಿಡದಲೆ ತಾ ತನ್ನೆಡೆ ಸಂತತ ಶೆಳೆಯುವನು || ೬ ||

ಕಾಟವನಿವನ ತಪ್ಪಿಸೆ ಪೋಗಲು ಸೋಟತನವ ನಾನಾಶ್ರಯಿಸೆ |
ನಾಟಕಿಯಿವ ತಾಮುಂದೆ ಸುಳಿಯುತೆ ಬಗ್ಗಿಪನೆನ್ನಯ ಮನವನ್ನೂ || ೭ ||

ಸಂಭಾವಿತೆಯನು ನಟಿಸುತೆಪೋದನು ಸಂಧಿಯ ಗೈಯ್ಯಲು ಕೌರವನಡೆಗೆ |
ಸಂಧಿಮುರಿಯಲವ ಕಟ್ಟಿದ ಟೊಂಕವ ಕೌರವಮದ ತಾನಿಳಿಸಲ್ಕೆ || ೮ ||

ಪಾರ್ಥನ ಮೇಲಣ ಪ್ರೇಮದಲವ ತಾ ಸಾರಥಿಯಾಗುತೆ ಯುದ್ಧದಲಿ|
ಪಾರ್ಥಗೆಗೆಲುವನು ತಂದನು ಕೆೊಲ್ಲುತೆ ಮೋಸದಿರಿಪುಗಳಸೈನ್ಯಗಳಾ || ೯ ||

ನಿಂದ್ಯಕರ್ಮ ತಾನೆಂದಿಗು ರುಚಿಸದು ನಮ್ಮೀ ಕಳ್ಳಗೆ ಜಗದೊಳಗೆ |
ಕಂದನೆಂದು ತಾನಪ್ಪುವ ಜನಗಳ ಹೊಂದಲು ತನ್ನಡಿ ಭಕುತಿಯಲಿ || ೧೦||
*****

Tagged:

Leave a Reply

Your email address will not be published. Required fields are marked *

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...