Home / ಕವನ / ಕವಿತೆ / ವಿದ್ಯಾರಣ್ಯ

ವಿದ್ಯಾರಣ್ಯ

ಪರಶಿವನು ವರತಪವನೆಸಗಿದನು ವನದಲ್ಲಿ
ಗಿರಿಕನ್ಯೆ ಪಾರ್ವತಿಯ ಶುಶ್ರೂಷೆಯಲ್ಲಿ!
ಚಿರಕಾಲ ಸಾಗದೆಯೆ ಮನಸೋತ ವನಿತೆಯಲಿ
ಜಗವ ಮುಳುಗಿಸಿದ ಬೆಂಕಿ ಬೇಗುದಿಯಲ್ಲಿ ೧

ಯತಿಯೆ! ವಿದ್ಯಾರಣ್ಯ! ಕುಳಿತಿರುವೆ ತಪದಲ್ಲಿ
ತರುಣಿಮಣಿ ತುಂಗಭದ್ರೆಯ ಸೇವೆಯಲ್ಲಿ!
ಮನವಿನಿತು ಚಲಿಸದೆಯೆ ವರಯೋಗ ಮೌನದಲಿ
ಸಾಧಿಸಲು ಮುಕ್ತಿಯನು ಸ್ವಾತಂತ್ರ್ಯದಲ್ಲಿ ೨

ತುಂಗಭದ್ರೆಯ ತೆರೆಯ ಮಂಜುಳದ ನಾದದಲಿ
ಗಿಳಿವಿಂಡಿನಾ ಚಿಲಿಮಿಲಿಯ ಮೆಲ್ಲುಲಿಯಲಿ
ಕೋಗಿಲೆಯ ಕಲಕಂಠ ಮಧುರತರ ಗಾನದಲಿ
ವೈರಾಗ್ಯ ಸಾಧನೆಯ ಹಿಡಿದೆ ಯೋಗದಲ್ಲಿ ೩

ನದಿಯ ಕಲರವ ನಿನ್ನ ಜಪಮಾಲೆ ಮಂತ್ರಗಳು
ಅರಗಿಣಿಯ ಸವಿನುಡಿಯೆ ವೇದಘೋಷಗಳು
ಕೋಗಿಲೆಯ ಸವಿಗಾನ ಮೊರೆಯುತಿಹ ಓಂಕಾರ
ಸಂನ್ಯಾಸಿ ನಿನ್ನ ಮನವೇ ನಿರ್ವಿಕಾರ! ೪

ಹಿಂದಲ್ಲಿ ಪರಶಿವನು ತಪಗೆಟ್ಟ ಕತದಿಂದ
ಬಂದಿಹರೊ! ವಿದ್ಯಾರಣ್ಯ ರೂಪದಲಿಂದು!
ತಪಗೆಯ್ದು ಪರಿಪೂರ್ಣ ಸಿದ್ಧಿಯನು ಪಡೆಯಲೆಂದು
ಕರ್ಣಾಟದೇಕೀಕರಣವೇ ಗುರಿಯೆಂದು. ೫

ಪಂಪಾಸರಸಿನಲಿ ಈಜುತಿರುವಾ ಕಲಹಂಸ
ಪದಗತಿಯ ವೈಖರಿಯ ನರಿಯೆ ಪರಮಹಂಸ!
ನಿನ್ನ ವೈರಾಗ್ಯ ಗುರಿಯೇನೊ! ಯತಿರಾಜಹಂಸ!
ರಾಜಯೋಗವ ಹಿಡಿದೆ ಯತಿಕುಲೋತ್ತಂಸ! ೬

ಹುಕ್ಕ ಬಕ್ಕರ ಹೂಡಿದೆಯ ರಾಜ್ಯರಥದಲ್ಲಿ!
ಸಂನ್ಯಾಸಿ ಸಾರಥಿಯು ನೀನೆ ಜಗದಲ್ಲಿ!
ಒಕ್ಕಲಿಕ್ಕಿದೆ ಧರ್ಮದ್ರೋಹಿಗಳ ಛಲದಲ್ಲಿ
ಕನ್ನಡದ ಸಾಮ್ರಾಜ್ಯ ದೇವಿಯಡಿಯಲ್ಲಿ ೭

ರಾಜಯೋಗವು ಭಕ್ತಿಯೋಗವು ಕರ್ಮಯೋಗವು
ಕೂಡಿದಾ ಬ್ರಹ್ಮತೇಜೋಮೂರ್ತಿ ನಮಿಪೆ!
ಹರಸು ಕನ್ನಡನಾಡಿನೇಳ್ಗೆಯನು ಯತಿವರನೆ!
ಶಿರಬಾಗಿ ನಮಿಸುವೆನು ವೈರಾಗ್ಯಮೂರ್ತಿಯೇ ೮
*****

Tagged:

Leave a Reply

Your email address will not be published. Required fields are marked *

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...