Home / ಕಥೆ / ಕಿರು ಕಥೆ / ಮತ್ಸ್ಯ ರಾಜ

ಮತ್ಸ್ಯ ರಾಜ

ಸಾಗರದ ರಾಣಿ ಮೀನೊಂದು ಮತ್ಸ್ಯರಾಜನಲ್ಲಿ ಬಂದು ಬಿನ್ನವಿಸಿಕೊಂಡಿತು.

“ನನ್ನ ಅಂತಃಪುರದಲ್ಲಿ ಸಂತೆಯ ಗದ್ದಲ. ಪುಟ್ಟ, ಚಿಕ್ಕ, ದೊಡ್ಡ ಮೀನುಗಳ ಕಾಟವೇ ಕಾಟ. ಈ ಸಹಸ್ರಾರು ಜಲಚರಗಳು, ಜಲ ಸಸ್ಯಗಳು ನನಗೆ ಉರುಳಾಗಿ ತಲೆನೋವನ್ನು ತರುತ್ತಿವೆ. ಸದಾ ಅಲೆಗಳ ಭೋರ್ಗರೆತ. ಬಿಳಿ ನೊರೆಯ ಒರೆತ. ಅಲ್ಲದೆ ಸಕಲ ಜಲಚರಗಳು ಅಶಿಸ್ತಿನಿಂದ ವರ್ತಿಸುತ್ತಿವೆ. ತಮ್ಮದೇ ಆದ ಸ್ವಚ್ಛಂದ ಜೀವನ ನಡೆಸುತ್ತಿವೆ. ಈ ಅರಾಜಕತೆ ನೋಡಿ ನೋಡಿ ನನಗೆ ಬಹಳ ಬೇಸರವಾಗಿದೆ, ಮತ್ಸ್ಯರಾಜ! ನನ್ನೊಲಿವಿನ ಸ್ವಾಮಿಯಾದ ನಿನ್ನೊಡನೆ ನನಗೆ ವಿಹಾರ ಮಾಡಲು ಇವು ಅಡ್ಡಿಯಾಗುತ್ತಿವೆ. ನನ್ನೊಡೆಯ! ಇದರ ಬಗ್ಗೆ ನನಗಾಗಿ ಏನಾದರೂ ಮಾಡಲು ಸಾಧ್ಯವೇ?” ಎಂದಿತು ರಾಣಿಮೀನು.

“ಇದೇನು ನಿನ್ನ ಇಚ್ಛೆ ಅಸಂಭದ್ದ. ಇದು ನಮ್ಮ ಜಲರಾಜ್ಯವಲ್ಲವೇ? ಜಲಚರಗಳು ನಮ್ಮ ಪ್ರಜೆಗಳಲ್ಲವೇ? ನಮ್ಮಿಂದ ಅವರು ಅವರಿಂದ ನಾವು ಅಲ್ಲವೇ? ನೀನು ನನ್ನ ಪ್ರಿಯೆ! ನಿನಗಾಗಿ ಈ ದಿನ ಕನಸಿನಲ್ಲಿ ಈ ಸಮುದ್ರವು ಅಲೆಗಳಿಂದ ಸ್ಥಗಿತವಾಗಿ ನರ್ತನ ನಿಲ್ಲಿಸುತ್ತವೆ. ಎಲ್ಲಾ ಮೀನುಗಳನ್ನು ಸಾಗರದಿಂದ ಹೊರದೂಡಲ್ಪಡುತ್ತವೆ. ಸಸ್ಯಗಳೂ ಕಿತ್ತೆಸೆಯಲ್ಪಡುತ್ತವೆ. ಮುತ್ತು ಹವಳ, ಚಿಪ್ಪುಗಳು ಬರಿದಾಗುತ್ತವೆ. ನಾನು ನೀನು ಮಾತ್ರ ದೊಡ್ಡ ಸಾಗರದಲ್ಲಿ ತೇಲುವಂಥ ಒಂದು ಕನಸನ್ನು ಇಂದು ನೀನು ಕಾಣು. ನಂತರ ನನಗೆ ಬಂದು ಹೇಳು ನಿನ್ನ ಇಚ್ಛೆ ಪೂರೈಸಬೇಕೆ?” ಎಂದು.

ರಾಣಿ ಮೀನು ಅಂದು ಅಲೆಯ ಹಾಸಿಗೆ ಮೇಲೆ ಮೈಚಾಚಿ ಮಲಗಿದೊಡನೆ ಕನಸು ಕವಲೊಡೆಯಿತು. ಅಲೆಗಳು ನಿಶಬ್ದವಾದವು. ನರ್ತನ ನಿಂತಿತು. ಸಾಗರದ ಭೋರ್ಗರೆತ ಮೂಕವಾಯಿತು. ಅಲೆಯ ನೊರೆ ಮಾಯವಾಯಿತು. ಮುತ್ತು ಹವಳ ಓಡಿಹೋದವು. ಸಸ್ಯ ಬಾಡಿ ಹೋದವು. ಪುಟ್ಟ ಮೀನುಗಳೊಂದಿಗೆ ಎಲ್ಲ ಮೀನುಗಳು ದಡಕ್ಕೆ ಬಂದು ಗೋಳೋ ಎಂದು ಅಳುತ್ತ ಪ್ರಾಣ ಬಿಟ್ಟವು. ಜಲಧಿಯಲ್ಲಿ ಒಂದೇ ಸ್ಮಶಾನ ಮೌನ ಆವರಿಸಿತು. ನೀರು ಹೆಪ್ಪು ಗಟ್ಟಿತು. ಹಿಮವಾಯಿತು. ರಾಣಿ ಮೀನಿಗೆ ಉಸಿರುಕಟ್ಟಿತು.

“ಪ್ರಿಯಾ!” ಎಂದು ಚೀರುತ್ತ ರಾಜ ಮೀನನ್ನು ಅಪ್ಪಿಕೊಂಡು “ಇದು ಎಂತಹ ಭಯಾನಕ ಕನಸು”- ಅದು ನನ್ನ ಪಾಲಿಗೆ ಪ್ರಳಯದಂತಿತ್ತು. ನನ್ನ ಇಚ್ಛೆಗೆ ನಾನೇ ನಾಚುತ್ತಿರುವೆ” ಎಂದು ಮತ್ಸ್ಯರಾಜನಲ್ಲಿ ಕ್ಷಮೆ ಬೇಡಿತು.

“ನನಗೆ ಗೊತ್ತಿತ್ತು. ನಿನ್ನ ಇಚ್ಛೆ ನನಸಾಗಿಸುವ ಮುನ್ನ ಅದಕ್ಕೆ ಕನಸು ಕಾಣಲು ಹೇಳಿದ್ದು” ಎಂದಿತು.
ರಾಣಿ ಮೀನು ತಲೆ ತಗ್ಗಿಸಿ ತನ್ನ ತಪ್ಪನ್ನು ಒಪ್ಪಿಕೊಂಡು, ಅರಿವನ್ನು ಪಡೆಯಿತು.
*****

Tagged:

Leave a Reply

Your email address will not be published. Required fields are marked *

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...