Home / ಕಥೆ / ಕಿರು ಕಥೆ / ಮತ್ಸ್ಯ ರಾಜ

ಮತ್ಸ್ಯ ರಾಜ

ಸಾಗರದ ರಾಣಿ ಮೀನೊಂದು ಮತ್ಸ್ಯರಾಜನಲ್ಲಿ ಬಂದು ಬಿನ್ನವಿಸಿಕೊಂಡಿತು.

“ನನ್ನ ಅಂತಃಪುರದಲ್ಲಿ ಸಂತೆಯ ಗದ್ದಲ. ಪುಟ್ಟ, ಚಿಕ್ಕ, ದೊಡ್ಡ ಮೀನುಗಳ ಕಾಟವೇ ಕಾಟ. ಈ ಸಹಸ್ರಾರು ಜಲಚರಗಳು, ಜಲ ಸಸ್ಯಗಳು ನನಗೆ ಉರುಳಾಗಿ ತಲೆನೋವನ್ನು ತರುತ್ತಿವೆ. ಸದಾ ಅಲೆಗಳ ಭೋರ್ಗರೆತ. ಬಿಳಿ ನೊರೆಯ ಒರೆತ. ಅಲ್ಲದೆ ಸಕಲ ಜಲಚರಗಳು ಅಶಿಸ್ತಿನಿಂದ ವರ್ತಿಸುತ್ತಿವೆ. ತಮ್ಮದೇ ಆದ ಸ್ವಚ್ಛಂದ ಜೀವನ ನಡೆಸುತ್ತಿವೆ. ಈ ಅರಾಜಕತೆ ನೋಡಿ ನೋಡಿ ನನಗೆ ಬಹಳ ಬೇಸರವಾಗಿದೆ, ಮತ್ಸ್ಯರಾಜ! ನನ್ನೊಲಿವಿನ ಸ್ವಾಮಿಯಾದ ನಿನ್ನೊಡನೆ ನನಗೆ ವಿಹಾರ ಮಾಡಲು ಇವು ಅಡ್ಡಿಯಾಗುತ್ತಿವೆ. ನನ್ನೊಡೆಯ! ಇದರ ಬಗ್ಗೆ ನನಗಾಗಿ ಏನಾದರೂ ಮಾಡಲು ಸಾಧ್ಯವೇ?” ಎಂದಿತು ರಾಣಿಮೀನು.

“ಇದೇನು ನಿನ್ನ ಇಚ್ಛೆ ಅಸಂಭದ್ದ. ಇದು ನಮ್ಮ ಜಲರಾಜ್ಯವಲ್ಲವೇ? ಜಲಚರಗಳು ನಮ್ಮ ಪ್ರಜೆಗಳಲ್ಲವೇ? ನಮ್ಮಿಂದ ಅವರು ಅವರಿಂದ ನಾವು ಅಲ್ಲವೇ? ನೀನು ನನ್ನ ಪ್ರಿಯೆ! ನಿನಗಾಗಿ ಈ ದಿನ ಕನಸಿನಲ್ಲಿ ಈ ಸಮುದ್ರವು ಅಲೆಗಳಿಂದ ಸ್ಥಗಿತವಾಗಿ ನರ್ತನ ನಿಲ್ಲಿಸುತ್ತವೆ. ಎಲ್ಲಾ ಮೀನುಗಳನ್ನು ಸಾಗರದಿಂದ ಹೊರದೂಡಲ್ಪಡುತ್ತವೆ. ಸಸ್ಯಗಳೂ ಕಿತ್ತೆಸೆಯಲ್ಪಡುತ್ತವೆ. ಮುತ್ತು ಹವಳ, ಚಿಪ್ಪುಗಳು ಬರಿದಾಗುತ್ತವೆ. ನಾನು ನೀನು ಮಾತ್ರ ದೊಡ್ಡ ಸಾಗರದಲ್ಲಿ ತೇಲುವಂಥ ಒಂದು ಕನಸನ್ನು ಇಂದು ನೀನು ಕಾಣು. ನಂತರ ನನಗೆ ಬಂದು ಹೇಳು ನಿನ್ನ ಇಚ್ಛೆ ಪೂರೈಸಬೇಕೆ?” ಎಂದು.

ರಾಣಿ ಮೀನು ಅಂದು ಅಲೆಯ ಹಾಸಿಗೆ ಮೇಲೆ ಮೈಚಾಚಿ ಮಲಗಿದೊಡನೆ ಕನಸು ಕವಲೊಡೆಯಿತು. ಅಲೆಗಳು ನಿಶಬ್ದವಾದವು. ನರ್ತನ ನಿಂತಿತು. ಸಾಗರದ ಭೋರ್ಗರೆತ ಮೂಕವಾಯಿತು. ಅಲೆಯ ನೊರೆ ಮಾಯವಾಯಿತು. ಮುತ್ತು ಹವಳ ಓಡಿಹೋದವು. ಸಸ್ಯ ಬಾಡಿ ಹೋದವು. ಪುಟ್ಟ ಮೀನುಗಳೊಂದಿಗೆ ಎಲ್ಲ ಮೀನುಗಳು ದಡಕ್ಕೆ ಬಂದು ಗೋಳೋ ಎಂದು ಅಳುತ್ತ ಪ್ರಾಣ ಬಿಟ್ಟವು. ಜಲಧಿಯಲ್ಲಿ ಒಂದೇ ಸ್ಮಶಾನ ಮೌನ ಆವರಿಸಿತು. ನೀರು ಹೆಪ್ಪು ಗಟ್ಟಿತು. ಹಿಮವಾಯಿತು. ರಾಣಿ ಮೀನಿಗೆ ಉಸಿರುಕಟ್ಟಿತು.

“ಪ್ರಿಯಾ!” ಎಂದು ಚೀರುತ್ತ ರಾಜ ಮೀನನ್ನು ಅಪ್ಪಿಕೊಂಡು “ಇದು ಎಂತಹ ಭಯಾನಕ ಕನಸು”- ಅದು ನನ್ನ ಪಾಲಿಗೆ ಪ್ರಳಯದಂತಿತ್ತು. ನನ್ನ ಇಚ್ಛೆಗೆ ನಾನೇ ನಾಚುತ್ತಿರುವೆ” ಎಂದು ಮತ್ಸ್ಯರಾಜನಲ್ಲಿ ಕ್ಷಮೆ ಬೇಡಿತು.

“ನನಗೆ ಗೊತ್ತಿತ್ತು. ನಿನ್ನ ಇಚ್ಛೆ ನನಸಾಗಿಸುವ ಮುನ್ನ ಅದಕ್ಕೆ ಕನಸು ಕಾಣಲು ಹೇಳಿದ್ದು” ಎಂದಿತು.
ರಾಣಿ ಮೀನು ತಲೆ ತಗ್ಗಿಸಿ ತನ್ನ ತಪ್ಪನ್ನು ಒಪ್ಪಿಕೊಂಡು, ಅರಿವನ್ನು ಪಡೆಯಿತು.
*****

Tagged:

Leave a Reply

Your email address will not be published. Required fields are marked *

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...