Home / ಲೇಖನ / ಇತರೆ / ನಮಗೆ ನಿಮ್ಮ ಪ್ರೀತಿ ಸಾಕು

ನಮಗೆ ನಿಮ್ಮ ಪ್ರೀತಿ ಸಾಕು

‘ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು’ ಎಂದಿದ್ದಾರೆ ಡಿವಿಜಿ. ಆದರೆ ಇವತ್ತು ಹಳೆ ಬೇರು ಹೊಸ ಚಿಗುರಿಗೆ ಬೇಡ ಎನ್ನುವುದಕ್ಕೆ ಪೂರಕವಾಗಿ ಒಂದು ಉದಾಹರಣೆ. ಯಾರೋ ಒಬ್ಬ ಹುಡುಗ ಹೆಣ್ಣು ನೋಡಲು ಹೋಗಿದ್ದ ಸಂದರ್‍ಭದಲ್ಲಿ ಆ ಹುಡುಗಿ ಹೇಳಿದ್ದಂತೆ ‘ನಿಮಗೆ ನಿಮ್ಮ ಅಪ್ಪ, ಅಮ್ಮನ ಮೇಲೆ ಪ್ರೀತಿ ಇದ್ದರೆ ನನ್ನ ತಕರಾರಿಲ್ಲ. ಆದರೆ ಅವರ ಫೋಟೋಗೆ ಮಾಲೆ ಹಾಕಿರಬೇಕು.’ ಒಂದು ಕ್ಷಣ ತಬ್ಬಿಬ್ಬು ಮತ್ತು ಆಘಾತ ಉಂಟು ಮಾಡುವ ಮಾತು. ಹಿರಿಯರ ಮೇಲೆ ಕಿರಿಯರಿಗಿರುವ ಪ್ರೀತಿ ಅಭಿಮಾನ ಮಾಯವಾಗುತ್ತಿರುವುದಕ್ಕೆ ಇದಕ್ಕಿಂತ ಹೆಚ್ಚಿನ ಉದಾಹರಣೆ ಬೇಕಿಲ್ಲ. ಇದು ನೋವು ಕೊಡುವ ಸಂಗತಿಯಾದರೂ ಇವತ್ತಿನ ವಾಸ್ತವ.

ಬಾಲ್ಯದಲ್ಲಿ ತಂದೆ-ತಾಯಿಯ ಕೈಬೆರಳು ಹಿಡಿದು ಮಕ್ಕಳು ನಡುಗೆ ಕಲಿಯುತ್ತಾರೆ. ಬೆಳೆದು ದೊಡ್ಡವರಾಗುತ್ತಾ ತಮ್ಮ ಜೀವನದ ದಾರಿಯನ್ನು ಕಂಡುಕೊಂಡು ಹೆತ್ತವರ ಬೆಚ್ಚಗಿನ ಗೂಡಿನಿಂದ ದೂರ ಹಾರಿ ಹೋಗುತ್ತಾರೆ. ಹೀಗಿರುವಾಗ ಮಕ್ಕಳು ವೃದ್ಧಾಪ್ಯದ ಊರುಗೋಲು ಆಗಬೇಕು, ಕೊನೆಯ ಕಾಲದಲ್ಲಿ ಹತ್ತಿರವಿರಬೇಕು ಎನ್ನುವ ಒತ್ತಾಯ ಹೇರಿದರೆ ಕಿರಿಯರ ಸ್ವಾತಂತ್ರ್ಯವನ್ನು ಕಿತ್ತುಕೊಂಡಂತಾಗುತ್ತದೆ. ಈ ಸತ್ಯವನ್ನು ಒಪ್ಪಿಕೊಳ್ಳಲೇಬೇಕಾದ ಕಾಲ, ಪರಿಸರ ಇಂದು ನಿರ್‍ಮಾಣವಾಗಿದೆ. ಮಕ್ಕಳು ಹತ್ತಿರದಲ್ಲಿಲ್ಲ ಎನ್ನುವ ಕಹಿ ಭಾವನೆಯಿಂದ ಹಿರಿಯರು ಮುಕ್ತರಾಗಲೇಬೇಕು.

ಮುಪ್ಪಿನ ಕಾಲಕ್ಕೆ ಬೇಕಾದ ಆರ್‍ಥಿಕ ಭದ್ರತೆಯನ್ನು ಮಾಡಿಕೊಂಡು ಸ್ವತಂತ್ರವಾಗಿ ಜೀವನ ಸಾಗಿಸುವ ಆತ್ಮವಿಶ್ವಾಸವನ್ನು ಇವತ್ತಿನ ಹಿರಿಯರು ಬೆಳೆಸಿಕೊಂಡಿರುವುದರಿಂದ ಹಿಂದಿನಂತೆ ಮುಪ್ಪಿನಲ್ಲಿ ಮಕ್ಕಳಿಗೆ ಭಾರವಾಗಿರಲು ಇಷ್ಟಪಡುವುದಿಲ್ಲ. ಇದೊಂದು ಆರೋಗ್ಯಕರ ಬೆಳವಣಿಗೆ ಮಕ್ಕಳ ಮೇಲಿನ ಪ್ರೀತಿ ಅವರನ್ನು ಸೆಳೆಯುತ್ತಿದ್ದರೂ ಮಕ್ಕಳು ಎಲ್ಲಾದರೂ ಚೆನ್ನಾಗಿರಲಿ ಎನ್ನುವುದಷ್ಟೇ ಅವರ ಆಶಯವಾಗಿರುತ್ತದೆ.

ಮುಪ್ಪಿನಲ್ಲಿ ಹಿರಿಯರಿಗೆ ಮುಖ್ಯವಾಗಿ ಬೇಕಾಗಿರುವುದು ಸಮಾಧಾನ ಹಾಗೂ ಮಾನಸಿಕ ನೆಮ್ಮದಿ. ಮಕ್ಕಳು ದೂರದಲ್ಲಿದ್ದರೂ ಮಾನಸಿಕ ಸಾಮೀಪ್ಯವನ್ನು ಬೆಳೆಸಿಕೊಂಡಿದ್ದರೆ ಅದರಲ್ಲೇ ಹೆತ್ತವರಿಗೆ ಸಮಾಧಾನ ಸಿಗುತ್ತದೆ. ಆದರೆ ಇಂದಿನ ಕ್ಲಿಷ್ಟಕರ ಜೀವನದಲ್ಲಿ ಹಿರಿಯರಿಗೆ ಅದೇ ಸಿಗುತ್ತಿಲ್ಲ. ಇದು ದುರ್‍ದೈವ.

ಹಿರಿಯರು, ಕಿರಿಯರು ಎಲ್ಲರೂ ಒಟ್ಟಾಗಿ ಒಂದೇ ಸೂರಿನಡಿಯಲ್ಲಿ ಜೀವಿಸುತ್ತಿದ್ದ ಕಾಲದಲ್ಲಿ ಹಿರಿಯರಿಗೂ, ಕಿರಿಯರಿಗೂ ಜೀವನ ಸುಲಭವಾಗಿತ್ತು. ಹಿರಿಯರು ಮುಪ್ಪಿಗೆ ಜಾರಿದಾಗ ಕಿರಿಯರು ಅವರನ್ನು ಹೆಚ್ಚಿನ ಪ್ರೀತಿಯಿಂದ, ಮುತುವರ್‍ಜಿಯಿಂದ ನೋಡಿಕೊಳ್ಳುತ್ತಿದ್ದರು. ಆದರೆ ಆಧುನಿಕ ಜಗತ್ತಿನ ಬದಲಾಗುತ್ತಿರುವ ಮೌಲ್ಯಗಳನ್ನು ಒಪ್ಪಿಕೊಂಡು ಬದುಕುತ್ತಿರುವ ಹೆಚ್ಚಿನ ಮಕ್ಕಳಿಗೆ ಹಿರಿಯರು ತಮ್ಮೊಂದಿಗಿರುವುದು ಇಷ್ಟವಿಲ್ಲ. ಮಕ್ಕಳಿಂದ ದೂರವಾಗಿ ಒಬ್ಬಂಟಿಗರಾಗಿಯೋ, ವೃದ್ಧಾಶ್ರಮದಲ್ಲೋ ಇರುವ ಬಹುಪಾಲು ಹಿರಿಯರಿಗೆ ಮುಪ್ಪು ಒಂದು ಶಾಪ ವಾಗುತ್ತಿರುವುದನ್ನು ಸುತ್ತಲೂ ನೋಡುತ್ತೇವೆ. ಇದನ್ನು ಮೀರಿ ಮುಪ್ಪಿನ ಜತೆಗೆ ಬದುಕಲು ಕಲಿತಾಗ ಮಕ್ಕಳೇ ಆಧಾರ ಎನ್ನುವ ಭಾವದಿಂದ ಮುಕ್ತರಾಗಿ ಸಮಾಧಾನದಿಂದ ಜೀವಿಸಬಹುದು.

ಜಗವಿಡೀ ಹಬ್ಬಿರುವ ಇವತ್ತಿನ ಮಕ್ಕಳಿಗೆ ಹಿರಿಯರು ಹೊರೆಯಾಗುತ್ತಿರುವ ಪರಿಸರದಲ್ಲಿ ವಿಶ್ವ ಹಿರಿಯರ ದಿನವನ್ನು ಆಚರಿಸುವ ಸಂದರ್‍ಭದಲ್ಲಿ ಹಿರಿಯರು ಇದನ್ನು ಅರಿತುಕೊಂಡು ಕಿರಿಯರಿಗೆ ಭಾರವಾಗದೆ ಜೀವಿಸಬಲ್ಲೆವು ನಮಗೆ ನಿಮ್ಮ ಪ್ರೀತಿ ಮಾತ್ರ ಸಾಕು ಎನ್ನುವ ಅರಿವುಂಟುಮಾಡುವುದು ಹೆಚ್ಚು ಸೂಕ್ತ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...