Home / ಕವನ / ಕವಿತೆ / ಬೆಳಕು ಬೆಳೆದ ಈ ಹಿತ

ಬೆಳಕು ಬೆಳೆದ ಈ ಹಿತ

ಮನೆಯ ತೊರೆದು ಹೊರಗೆ ಬಾರೆ
ಹುಣ್ಣಿಮೆಯನು ನೋಡಲು
ಇರುಳಿನೆದೆಯು ಹೂತು ಹರಿದ
ಹಾಲಿನಲ್ಲಿ ಮೀಯಲು.
ಹುಣ್ಣಿಮೆಯಿದು ಬಾನ ಬಾಳ
ಪೂರ್ಣಿಮೆಯೇ ಅಲ್ಲವೇ?
ಬುವಿಯ ಬಯಕೆ ಬಾಯಾರಿಕೆ
ಕಳೆವ ಗಂಗೆಯಲ್ಲವೆ?
ನಂದನಕ್ಕೆ ನೀರೆರೆಯುವ
ಸಂಜೀವಕ ವಾಹಿನಿ!
ದಿಕ್ತಟಗಳ ದಾಟಿ ಹರಿದ
ಅನುಪಮ ಸಂಮೋಹಿನಿ!
ಬಾಂದೇವಿಯ ಶೃಂಗಾರಕೆ
ಹೂತ ವತ್ಸಲತೆಯಿದು.
ಭೂದೇವಿಯ ಶೃಂಗಸ್ತನ
ತೊರೆದ ಒಲವು ಹಾಲಿದು,
ಬಾಂಗಡಲಿನ ನೀಲಿಮೆಯಲಿ
ಜನಿಸಿ ನೆಗೆದ ಸುರಭಿಯು
ಮದವೇರದ ಮುದಬೀರುವ
ಅತಿ ಮಾನವ ಪೇಯವು.
ಇಂಗಡಲಿದು ಉಡುಲೋಕವ
ಮುಳುಗಿಸುತ್ತ ಬೆಳೆದಿದೆ
ಮೂಲೋಕದ ಮೂಲೆ ಮೂಲೆ
ಯನ್ನು ಮುಟ್ಟಿ ಹರಿದಿದೆ.
ಮಣ್ಣಿನಲ್ಲಿ ಸುರಿದು ಅದಕೆ
ಮಲರ ಮಾಯೆ ಬೀರಿದೆ.
ಕೊಳೆಯೆಲ್ಲವ ಸುತ್ತಿ ಮುತ್ತಿ
ಚೆಲುವನಲ್ಲಿ ಬಿತ್ತಿದೆ.
ಶುಭ ಮಂಗಲ ಪಾವನತೆಯು
ಆಣುರೇಣುವಿಗಿಳಿದಿದೆ
ಪ್ರತಿ ಜೀವದಿ ನವ ಸ್ವಪ್ನದ
ಸಂಗೀತವು ತುಂಬಿದೆ.
ಅಂಗಳದಲಿ ರಂಗೋಲಿಯ
ಮಂಗಲವನು ಬರೆದಿದೆ.
ಹೊಸ್ತಿಲದಲಿ ಸ್ವಸ್ತಿಕವನು
ಬರೆದು ಶುಭವ ಕೋರಿದೆ!
ಅರೆಯಿಲ್ಲದ ತೆರೆಯಿಲ್ಲದ
ನಿಶ್ಚಲ ಚಿರ ಶಾಂತಿಯು
ಮಧು ಮಧುರವು ಅತಿ ಮೃದುಲವು
ಇದರೆ ದಿವ್ಯ ಕಾಂತಿಯು.
ಇಲ್ಲಿ ಬಾರೆ ಬೆಳುದಿಂಗಳ
ಈ ಮಂಗಲ ಜಲಧಿಗೆ
ಮೆಯನೊಡ್ಡು ಬೆಳಕಿಗಿದರ
ತೆರೆಯದನು ಶಾಂತಿಗೆ
ಹರಿದೋಡುತ ಹೊರಳಾಡುತ
ಮುಳುಗೇಳುತ ಎಲ್ಲೆಡೆ
ತೆರೆತೆರೆಗಳು ಸೆಳೆದಲ್ಲಿಗೆ
ಕರೆಕರೆಯುತ ಎಳೆದೆಡೆ.
ಈಸಾಡಲು ಮೀನವಾಗಿ
ಹಕ್ಕಿಯಾಗಿ ಹಾರಲು
ಜೊನ್ನ ಕುಡಿದು ಜ್ಯೋತಿಯಾಗಿ
ಬಾನಿನಲ್ಲಿ ಬೆರೆಯಲು.
ಬಾ ಗೆಳತಿಯೆ ಹುಣ್ಣಿಮೆಯಲಿ
ಪೂಣ್ದಾಶಿಷ ಪಡೆಯಲು
ಮನೆಯ ತೊರೆದು ಚಿಂತೆ ಜರೆದು
ಪ್ರೀತಿಗೀತ ಹಾಡಲು
ದೇವರನ್ನು ಕುಣಿಸಿದಂಥ
ಚೆಲುವು ಚಂದ್ರನಮೃತ
ದೀನರನ್ನು ತಣಿಸದಿಹುದೆ
ಬೆಳಕು ಬೆಳದ ಈ ಹಿತ.
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...