Home / ಲೇಖನ / ಇತರೆ / ತಬ್ಬಲಿ ಚೀನಾದ ಕತೆ

ತಬ್ಬಲಿ ಚೀನಾದ ಕತೆ

ಚೀನಾ ದೇಶ ನಮ್ಮ ಭವ್ಯ ಭಾರತದ ಮೇಲೆ ಮೇಲಿಂದಮೇಲೆ ಕಾಲು ಕೆದರಿ ಜಗಳ ತೆಗೆಯುತ್ತಿದೆ. “ಮಾರಿ ಕಣ್ಣು ಹೋರಿ ಮೇಲೆ” – ಎನ್ನುವಂತೆ ಚೀನಾದ ಕಣ್ಣು ನಮ್ಮ ಭವ್ಯ ಭಾರತದ ಮೇಲೆ.

ಚೀನಾ ದೇಶ ತನ್ನ ಮನೆಯನ್ನು ತಾನು ಸರಿಮಾಡಿಕೊಂಡು ಉನ್ನತಿ ಸಾಧಿಸಲು ಸಾಧ್ಯವಾಗುತ್ತಿಲ್ಲ! ದಿನದಿಂದ ದಿನಕ್ಕೆ ತಬ್ಬಲಿ ಚೀನಾವಾಗುತ್ತಿದೆ. ತಳ ಸೋರುವ ಮಡಿಕೆ ಕುಡಿಕೆಯಾಗುತ್ತಿದೆ.

ಇತ್ತೀಚಿನ ೨೦೧೫ರ ಅಂಕಿ ಅಂಶಗಳ ಪ್ರಕಾರ ಚೀನಾದಲ್ಲಿ ಉದ್ಯೋಗದ ಬೆನ್ನು ಹತ್ತಿದ ತಂದೆತಾಯಿ ಅಜ್ಜ‌ಅಜ್ಜಿಯರಿಂದ ತಬ್ಬಲಿಗೊಳಗಾದ ಸುಮಾರು ೬.೧ ಕೋಟಿ ಕೋಟಿ ಮಕ್ಕಳು ಚೀನಾದ ಗ್ರಾಮೀಣ ಭಾಗಗಳಲ್ಲಿದ್ದಾರೆಂಬಾ ಆಘಾತಕಾರಿ ಸುದ್ದಿಯೊಂದು ಸ್ಫೋಟಗೊಂಡಿದೆ.

ಇನ್ನೊಂದು ಧಾರುಣವಾದ ಸಂಗತಿಯೆಂದರೆ… ನೈರುತ್ಯ ಚೀನಾದ ತಬ್ಬಲಿ ಗ್ರಾಮವೊಂದು ಇತ್ತೀಚೆಗೆ ಬೆಳಕಿಗೆ ಬಂದಿದೆ! ಅಲ್ಲಿ ೧೩೨ ತಬ್ಬಲಿಯಾದ ಸಣ್ಣ ಪುಟ್ಟ ಕಂದಮ್ಮಗಳಿದ್ದಾರೆ!

ಹೆತ್ತ ಹೊತ್ತ ಅಪ್ಪ ಅಮ್ಮ ಸಂಬಂಧಿಕರಿಲ್ಲದೆ, ಈ ತಬ್ಬಲಿಗಳು ಲೈಂಗಿಕ ವೃತ್ತಿಗೆ ಬಳಕೆಯಾಗುವ ಅಪಾಯಗಳು ತೀರಾ ಹೆಚ್ಚು ಎಂದು ಆತಂಕಕಾರಿ ಸುದ್ದಿಯನ್ನು ಸ್ಥಳೀಯ ಪತ್ರಿಕೆಯಾದ “ಪೀಪಲ್ಸ್ ಡೈಲಿ”ಯು ಅಲ್ಲಿ ಬಹಿರಂಗ ಪಡಿಸಿರುವುದು.

ಅಲ್ಲಿ ವಿಶೇಷವಾಗಿ ಚೀನಾದ ಕೇಂದ್ರ ಭಾಗದಲ್ಲೇ ಇರುವ ಹುನಾನ್ ಪ್ರಾಂತ್ಯದ ಹುವಾಂಗ್ ಜಿಂಗ್ ಗ್ರಾಮ ವ್ಯಾಪ್ತಿಯ ಶಾವೊಯಾಂಗ್ ಕೌಂಟಿ ಎಂಬ ಗ್ರಾಮದಲ್ಲಿರುವ ೧೩೨ ತಬ್ಬಲಿ ಮಕ್ಕಳ ಕಥೆ ಅರಣ್ಯ ರೋದನವಾಗಿದೆ!! ಇದನ್ನು ತಬ್ಬಲಿ ಗ್ರಾಮ ಎಂಬ ಕುಖ್ಯಾತಿಗಳಿಸಿದೆ.

ಇಲ್ಲಿನ ೧೩೨ ಮಕ್ಕಳಲ್ಲಿ ೧೧೬ ಮಕ್ಕಳು ತಾಯಂದಿರನ್ನು ಕಳೆದುಕೊಂಡಿದ್ದಾರೆ. ಮರು ಮದುವೆ, ಮನೆ ಬಿಟ್ಟು ಓಡಿ ಹೋದವರು, ಮೃತ ಪಟ್ಟಿರುವುದು… ಕೆಲಸದಲ್ಲಿರುವುದು ಇತ್ಯಾದಿ ಕಾರಣಗಳೆಂದು ವರದಿಯು ಖಚಿತಪಡಿಸಿದೆ.

ಇಡೀ ವಿಶ್ವದಲ್ಲೇ ತೀರಾ ಬೃಹತ್ ಆರ್ಥಿಕ, ಸಮಾಜಿಕ, ರಾಜಕೀಯ ಶಕ್ತಿಯೆನಿಸಿರುವ ಬೃಹತ್ ರಾಷ್ಟ್ರ ಚೀನಾದಲ್ಲಿ ಈಗಾಗಲೇ ಸುಮಾರು ೨೬ ಕೋಟಿ ಕೋಟಿ ವಲಸೆ ಕೂಲಿ ಕಾರ್ಮಿಕರಿರುವರೆಂದು ಅಲ್ಲಿನ ಘನ ಸರ್ಕಾರ ೨೦೧೪ ರ ಸಾಲಿನಲ್ಲಿ ಅಧಿಕೃತವಾಗಿ ಅಂಕಿ ಅಂಶ ಹೊರಗೆಡವಿದೆ.

ಇಲ್ಲಿನ ಬಲು ವಿಚಿತ್ರವಾದ ಸಮಸ್ಯೆಯೆಂದರೆ, ತನ್ನಮ್ಮ ತನ್ನಪ್ಪ ಹೇಗಿದ್ದರೆಂದು ಯಾವ ಮಕ್ಕಳಿಗೂ ನೆನಪಿಲ್ಲ. ಭಾವನಾತ್ಮಕ ನಂಟಿನ ಅಂಟು ಅಲ್ಲಿಲ್ಲದೆ ವಿಲಿವಿಲಿ ಒದ್ದಾಡುತ್ತಿರುವರೆಂಬ ಸತ್ಯ ಸಂಗತಿಯನ್ನು ಸ್ಥಳೀಯ ಪತ್ರಿಕೆ ಆತಂಕ ವ್ಯಕ್ತಪಡಿಸಿದೆ.

ಇದೇ ನಗರದಲ್ಲಿ ಕೆಲಸ ಅರಸಿ ತನ್ನ ನಾಲ್ಕು ಮಕ್ಕಳನ್ನು ತೊರೆದು ಗ್ಯುಜೋವ್ ಪ್ರಾಂತ್ಯದ ತಾಯಿಯೊಬ್ಬಳು ಹೋದಾಗ ದಿಕ್ಕು ತೋಚದೆ ಇವರೆಲ್ಲ ಏಕಕಾಲಕ್ಕೆ ಜುಲೈ ತಿಂಗಳು ೨೦೧೫ ರಲ್ಲಿ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆಯೊಂದು ಜರುಗಿದೆ.

ಇಂಥಾ ದುಃಸ್ಥಿತಿ ಭವ್ಯ ಭಾರತಕ್ಕೆ ಎಂದೂ ಭಾರದಿರಲಿ ಅಲ್ಲವೇ??
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...