Home / ಲೇಖನ / ಇತರೆ / ಏಕಲವ್ಯನ ಕತೆ

ಏಕಲವ್ಯನ ಕತೆ

‘ಏಕಲವ್ಯ – ಗುರು ದ್ರೋಣರಿಗೆ ಗುರು ಕಾಣಿಕೆಯೆಂದು ಬಲಗೈ ಹೆಬ್ಬೆಟ್ಟನ್ನು ನೀಡಬಾರದಿತ್ತು ಕಂದಾಽ…’ ಎಂದು ಏಕಲವ್ಯನ ತಾಯಿ ಮಗನ ಕೈಗೆ ಬಟ್ಟೆ ಸುತ್ತಿ ಹಾರೈಕೆ ಮಾಡುತ್ತಾ ಕಣ್ಣೀರಿಟ್ಟಳು.

ಏಕಲವ್ಯನ ತಂದೆ- ‘ನೀ ಬೇಡ ಕುಲದಲ್ಲಿ ಹುಟ್ಟಿ ಎಲ್ಲರಿಗೂ ಬೇಡಾದೆ ಮಗು! ನಿನ್ನ ಬಿಲ್ಲು ವಿದ್ಯೆಗೆ ಶಬ್ದವೇದಿ ವಿದ್ಯೆಗೆ ಯಾವುದೋ ಆಳರಸರ ಕೈಯಲ್ಲಿ ಮೆರೆಯಬೇಕಾಗಿತ್ತು! ಆದರೆ ಈ ಜನರು ನಿನ್ನ ಶ್ರೇಯಸ್ಸು ಸಹಿಸಲಿಲ್ಲ. ನಿನ್ನ ಅವನತಿ ಕೋರಿದರು’ ಎಂದು ಕಣ್ಣೀರಿಟ್ಟ.

‘ನೀವ್ಯಾರು ಕಣ್ಣೀರು ಸುರಿಸದಿರಿ. ನನ್ನ ಹಣೆ ಬರಹಕೆ ಗುರು ದ್ರೋಣರೇನು ಮಾಡಿಯಾರು? ಇಲ್ಲಿ ಅರ್‍ಜುನ ನಿಮಿತ್ತ ಮಾತ್ರ ಎಲ್ಲ ನನ್ನ ವಿಧಿ ವಿಪರೀತ! ನನಗೆ ಒಳ್ಳೆಯದಾಗಲಿಲ್ಲವೆಂದು ನನ್ನ ಬೇಡ ಜಾತಿಯನ್ನು, ಅರ್‍ಜುನ, ಗುರುದ್ರೋಣರನ್ನು ಬೈದು ಫಲವೇನು ? ಜಾತಕ ಪಕ್ಷಿಯು ಮಳೆ ಬರುವಾಗ ಮಳೆ ಹನಿ ಬೀಳಲಿ ಎಂದು ಬಾಯಿ ತೆರೆದಿದ್ದರೂ ತೊಟ್ಟು ಹನಿ ಬೀಳದಿದ್ದರೆ ಮೋಡದ ದೋಷವೆನ್ನುವಿರೇನು? ಕರೀಲ ಮರದಲ್ಲಿ ಎಲೆಗಳಿಲ್ಲವೆಂದು ಮಾತ್ರಕ್ಕೆ ವಸಂತ ಋತುವನ್ನು ಅಳಿದರೇನು ಫಲ? ಗೂಬೆಗೆ ಹಗಲು ಹೊತ್ತಿನಲ್ಲಿ ದೃಷ್ಟಿ ಗೋಚರಿಸದಿದ್ದರೆ ಸೂರ್‍ಯದೇವನ ತಪ್ಪೇನಿದೆ? ನನ್ನ ಅದೃಷ್ಟ ಸರಿಯಾಗಿಲ್ಲವೆಂದ ಮೇಲೆ ಯಾರನ್ನು ಏನನ್ನು ದೂಷಿಸಿ ಪ್ರಯೋಜನವೇನು? ನನ್ನಲ್ಲಿರುವ ಬ್ರಹ್ಮವಿದ್ಯೆಯು ಕೋತಿ ವಿದ್ಯೆಯಾಗಿ ಹೋಯಿತು’ ಎಂದು ಏಕಲವ್ಯ ತನ್ನ ತಂದೆ ತಾಯಿ ಪರಿವಾರದವರನ್ನು ಸಂತೈಸಿದನಲ್ಲದೆ, ಧೈರ್‍ಯ ತುಂಬಿದನು.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...