ಗುರುಗಳು ಶಿಷ್ಯರಲ್ಲಿ ವ್ಯಾಖ್ಯಾನ ಮಾಡುತ್ತ ಹೇಳಿದರು. ಪ್ರತಿ ಮಾನವನಲ್ಲಿ, ಒಂದು ವಾಚ್ ಟವರ್ ದೇವರು ಕಟ್ಟಿದ್ದಾನೆ. ಅಲ್ಲಿ ಒಂದು ವಾಕಿಟಾಕಿ ಇದೆ. ಇದರ ಮುಂದೆ ಒಬ್ಬ ವಾಚ್ಮ್ಯಾನ್ ಇರುತ್ತಾನೆ ಎಂದರು.
ಶಿಷ್ಯರಿಗೆ ಒಗಟು ಬಿಡಿಸಲಾಗಲಿಲ್ಲ. ಗುರುವಿನಲ್ಲಿ ಒಗಟು ಬಿಡಿಸಿ ಹೇಳಲು ಬಿನ್ನವಿಸಿಕೊಂಡರು.
“ಮಾನವನ ತಲೆ ಒಂದು ವಾಚ್ ಟವರ್, ಇಲ್ಲಿ ಇರುವುದು ವಾಚ್ ಮಾಡುವ ಕಣ್ಣುಗಳು, ಕೆಟ್ಟದ್ದಕ್ಕೆ ಕಣ್ಣು ಮುಚ್ಚಿದ ಮಂಗನಂತೆ. ಒಳ್ಳೆಯದಕ್ಕೆ ತೆರೆದ ಕಣ್ಣಿನ ಬುದ್ಧನ ನೋಟದಂತೆ, ಮನದಾಳದ ಪ್ರಜ್ಞೆಯಂತೆ” ಎಂದರು.
ಇನ್ನು ವಾಕಿಟಾಕಿ-ಮಾನವ ಮನಸ್ಸಿಗೆ ಬಂದಂತೆ ಆಡುವ ಬಾಯಿ. ವಟಗುಟ್ಟುವ ಕಪ್ಪೆಯಂತೆ. ಇದು ಕೆಟ್ಟದ್ದನ್ನು ಆಡದ ಬಾಯಿಮುಚ್ಚಿಕೊಂಡ ಕೋತಿಯಂತೆ ಇರಬೇಕು. ಒಳ್ಳೆಯದನ್ನು ಸಾರುವ ಸಾಧನವಾಗಬೇಕು.
“ಇನ್ನು ಉಳಿದಿದ್ದು ವಾಚ್ ಮ್ಯಾನ್. ಅದು ಬುದ್ದಿ, ವಿವೇಚನೆ, ವಿವೇಕವನ್ನು ಕೇಳುವ ಕಿವಿಗಳು, ಕೆಟ್ಟದ್ದಕ್ಕೆ ಕಿವಿಮುಚ್ಚಿಕೊಂಡ ಕೋತಿಯಂತೆ ಇರಬೇಕು. ವಾಚ್ ಟವರ್ ಪ್ರಜ್ಞೆಯಲಿ ಮನಸ್ಸಿನ ವಾಕಿಟಾಕಿಯ ಮೌನಗೊಳಿಸಿ, ಬುದ್ದಿ ಎಂಬ ವಾಚ್ ಮ್ಯಾನ್ನು ನಮ್ಮ ಬಾಳ್ವೆಯ ಹಾದಿಗೆ ದಾರಿ ದರ್ಶನ ನೀಡಬೇಕು.” ಎಂದರು ಗುರುಗಳು.
ಶಿಷ್ಯಂದರಿಗೆ ಜೀವನಕ್ಕೊಂದು ದೀವಟಿಗೆ ಹಿಡಿದಂತೆನಿಸಿತು.
*****