Home / ಲೇಖನ / ಇತರೆ / ನವಿಲುಗರಿ..

ನವಿಲುಗರಿ..

* ಹಲವರು ನಡೆದು ನಡೆದು ದಾರಿ.

* ಸಿನಿಮಾ ನಟರಾಗುವ ಗುರಿ ಹೊಂದಿ, ಅದಕ್ಕಾಗಿ ಇಂದಿನಿಂದಲೇ ಒಳ್ಳೆಯ ಮೈಕಟ್ಟು, ಮಾತು, ಹಾಸ್ಯ, ಅನುಕರಣೆ ಇತ್ಯಾದಿ ಅಭ್ಯಾಸ ಮಾಡಿ.

* ಹಸಿಶುಂಠಿ, ಒಣ ಶುಂಠಿಯಿಂದ ಆರೋಗ್ಯ, ಸೌಂದರ್‍ಯ ವೃದ್ಧಿಗಾಗಿ, ನಿತ್ಯ ಆಹಾರದಲ್ಲಿ ಬಳಸಿ.

* ತಿರುಪತಿ ತಿಮ್ಮಪ್ಪನ ಹೆಸರಿನಲ್ಲಿ ೫,೫೦೦ ಕೇಜಿ ಚಿನ್ನವಿದೆ. ಅದನ್ನು ವಿವಿಧ ಬ್ಯಾಂಕಿನಲ್ಲಿಟ್ಟಿರುವರು. ವರ್ಷಕ್ಕೆ ೮೦ ಕೇಜಿ ಚಿನ್ನ ಬಡ್ಡಿಯಾಗಿ ಬರುವುದು.

* ಕ್ರಿಸ್ತ ಶಕ ೫ನೆಯ ಶತಮಾನದಲ್ಲಿ ಚೀನಾದ ತತ್ವಜ್ಞಾನಿಗಳಾದ ಗೊಂಗುಬನ್ (ಲುಬನ್) ಮೋದಿ (ಮೋಝಿ) ಅವರು ಗಾಳಿ ಪಟವನ್ನು ಕಂಡು ಹಿಡಿದರು.

* ಶುಂಠಿ ಸುವಾಸನೆ, ರುಚಿ, ಹಸಿವು ವೃದ್ಧಿಸುವುದು.

* ದಿನಾಂಕ ೦೨-೦೮-೧೭೧೫ರಂದು ಪ್ರಸಾದವೆಂದು ಲಡ್ಡು ನೀಡುವ ಸಂಪ್ರದಾಯವು ತಿರುಪತಿ ದೇವಸ್ಥಾನದಲ್ಲಿ ಮೊದಲಾಯಿತು. ಈ ಸಂಪ್ರದಾಯಕ್ಕೆ ಈಗ ೩೦೦ ವರ್ಷಗಳು ವರ್ಷಕ್ಕೆ ಬರೀ ಲಡ್ಡಿನಿಂದಲೇ ೧೯೦ ಕೋಟಿ ರೂಪಾಯಿ ಬರುತ್ತಿದೆ.

* ಕನ್ನಡಕ್ಕೊಬ್ಬರೇ ಕೈಲಾಸಂ ಅವರು ದಿನಾಂಕ ೨೯-೦೭-೧೮೮೫ರಂದು ಮೈಸೂರಿನಲ್ಲಿ ಹುಟ್ಟಿದರು. ಇವರ ತಂದೆ-ತಮಿಳುನಾಡಿನ ಜಸ್ಟೀಸ್ ತ್ಯಾಗರಾಜ ಪರಮಶಿವ ಅಯ್ಯರ್, ತಾಯಿ- ಕಮಲಮ್ಮ.

* ಒಣ ಶುಂಠಿ ಹಾಲಿನಲ್ಲಿ ಹಾಕಿ ಕುದಿಸಿ, ಬೆಲ್ಲದೊಂದಿಗೆ ಕಲಿಸಿ ನಿತ್ಯ ಕುಡಿಯುವುದರಿಂದ ಗಂಟಲು ನೋವು, ಕೆಮ್ಮು, ಕಫ, ನಿವಾರಣೆಯಾಗುವುದು.

* ಕಳ್ಳಿ ಗಿಡಕ್ಕೆ ಎಲೆಗಳಿಲ್ಲ!

* ಸೋಡಿಯಂನಿಂದ ಕಂದು- ಕಬ್ಬಿಣದಿಂದ ಕೆಂಪು ಬಣ್ಣ ಪೊಟಾಸಿಯಂನಿಂದ ಹಳದಿ- ಮ್ಯಾಂಗನೀಸ್‌ನಿಂದ ಗುಲಾಬಿ ಬಣ್ಣ… ಹೀಗೆ ವಿವಿಧ ಬಣ್ಣಗಳಿಂದ ಶಿಲೆಗಳು ರೂಪುಗೊಳ್ಳಲಿದೆ.

* ಆಲ್ಬೇನಿಯಾದಲ್ಲಿ ಶೇಕಡ ೭೦% ರಷ್ಟು ಟರ್‍ಕಿಯಲ್ಲಿ ಶೇಕಡ ೯೮% ರಷ್ಟು ಮುಸ್ಲಿಮರಿದ್ದಾರೆ. ಇವು ಎರಡು ದೇಶಗಳೂ ಯುರೋಪ್‌ನಲ್ಲಿವೆ.

* ಜನಪ್ರಿಯ ಹಾಡುಗಾರ ಮನ್ನಾಡೆ ದಿನಾಂಕ ೦೧-೦೫-೧೯೧೯ ರಲ್ಲಿ ಕೋಲ್ಕತ್ತದಲ್ಲಿ ಜನಿಸಿದರು. ಇವರ ಹೆಸರು- ಪ್ರಬೋಧ ಚಂದ್ರ ಅಡ್ಡ ಹೆಸರು- ಮನ್ನಾ ಎಂದು. ೩,೫೦೦ ಹಾಡುಗಳನ್ನು ಸಿನಿಮಾದಲ್ಲಿ ಹಾಡಿದ್ದಾರೆ. ೨೦೦೭ರಲ್ಲಿ ಇವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿತು. “ಜಿಮೊನೆರ್ ಜುಲ್ಲಾ ಘೋರೆ” ಎನ್ನುವುದು ಇವರ ಬಂಗಾಳಿ ಆತ್ಮಕಥೆ ಇದನ್ನು “ಮೆಮೊರೀಸ್ ಕಮ್ ಆಲೈವ್” ಎಂದು ಇಂಗ್ಲೀಷ್‌ಗೆ ಅನುವಾದಗೊಂಡಿದೆಯಲ್ಲದೆ ಹಿಂದಿ-ಮರಾಠಿಗೂ ಅನುವಾದವಾಗಿದೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...