Home / ಕವನ / ಅನುವಾದ / ಧೂರ್‍ತ ಒರಟು ಮುದುಕ

ಧೂರ್‍ತ ಒರಟು ಮುದುಕ

ಮೂಲ: ವಿಲಿಯಂ ಬಟ್ಲರ್ ಏಟ್ಸ್

‘ಹೆಣ್ಣುಗಳ ವ್ಯಾಮೋಹ ಇದೆಯೆಂತಲೇ ನನಗೆ
ಮಲೆಗಳಲ್ಲೂ ಇಂಥ ಮೋಹ’
ದೈವ ಕಳಿಸಿದ ಜಾಗದಲ್ಲಿ ಅಲೆಯುವ ಒರಟು
ಮುದುಕ ನುಡಿದನು ಹೀಗೆ ಮನವ.
“ಸಾಯಲಾರೆನೆ ನಾನು ಮನೆಯ ಚಾಪೆಯ ಮೇಲೆ
ಮುಚ್ಚು ಕಣ್ಣನು ನಿನ್ನ ಕೈಯಿಂದಲೇ,
ಆಕಾಶದಲ್ಲಿರುವ ಆ ಮುದುಕನಿಂದ ನಾ
ಇಷ್ಟನ್ನೆ ಕೇಳುವುದು ನಲ್ಲೆ’
– ಬೆಳಗಾಯ್ತು, ಮುಂಬತ್ತಿ ಮುಗಿಯಿತು.

‘ಏನು ಹಿತವೇ ಚಿನ್ನ ನಿನ್ನ ಮಾತುಗಳೆಲ್ಲ
ಉಳಿದಿದ್ದ ಕೊಡದೆ ಇರಬೇಡೇ;
ಹತ್ತ ಮುದುಕನ ರಕ್ತ ಯಾವಾಗ ಆರೀತೊ
ತಿಳಿಯಬಲ್ಲವರಾರು ಹೇಳೆ?
ಭಾರಿ ಪ್ರೀತಿಸುವಂಥ ಯಾವ ಯುವಕಗೂ ಇರದ
ಬೇರೇನೊ ಇದೆ ನನ್ನ ಒಳಗೆ
ಬಹಳವೆಂದರೆ ಆತ ಸೋಕಬಲ್ಲನು, ನಾನೊ
ಮಾತಿನಲೆ ಹೃದಯವನ್ನಿರಿವೆ?
-ಬೆಳಗಾಯ್ತು, ಮುಂಬತ್ತಿ ಮುಗಿಯಿತು.

ಬಗಲಲ್ಲಿ ದಪ್ಪದೊಣ್ಣೆಯ ಊರಿ ನಿಂತಿದ್ದ
ಧೂರ್‍ತ ಮುದುಕನಿಗಾಕೆ ನುಡಿದಳು:
‘ಪ್ರೇಮವನು ಕೊಡುವುದೋ, ಇಲ್ಲ ಹೋಗೆನ್ನುವುದೊ
ನನ್ನದಾಗಿಲ್ಲ ನಾ ಆಳು.
ಮುಗಿಲಮನೆ ಮುದುಕನಿಗೆ, ನಿನಗಿಂತ ಹಿರಿಯನಿಗೆ
ಕೊಟ್ಟು ಬಿಟ್ಟೆನೊ ಎಲ್ಲವನ್ನ
ಅವನ ಜಪಮಣಿ ಹಿಡಿದ ಬೆರಳಿಗಿಲ್ಲವೊ
ಬಿಡುವು ಮುಚ್ಚಲಾರವು ಅವು ಕಣ್ಣ’.
– ಬೆಳಗಾಯ್ತು ಮುಂಬತ್ತಿ ಮುಗಿಯಿತು.

‘ನಿನ್ನ ದಾರಿಯ ಹಿಡಿದು ಹೋಗೆ ಹಾಗೇ ಹೆಣ್ಣೆ
ನನ್ನ ಗುರಿಯೇ ಬೇರೆ ಇದೆಯೆ,
ಕಡಲ ದಂಡೆಯ ಮೇಲೆ ಕತ್ತಲಿನರ್‍ಥ ತಿಳಿದು
ಸುಳಿವ ಹುಡುಗಿಯರ ಗುಂಪಿದೆಯ,
ಮೀನುಗಾರರ ಕೂಡ ಪೋಲಿಮಾತಿನ ಲಲ್ಲೆ
ಬೆಸ್ತ ಚಿಣ್ಣರಿಗಾಗಿ ಕುಣಿತ,
ಕತ್ತಲಿಳಿಯಿತೊ ಕಡಲಮೇಲೆ ಹೆಣ್ಣುಗಳಿಗೆ
ಹಾಸಿಗೆಯ ಅರಳಿಸುವ ತವಕ,’
– ಬೆಳಗಾಯ್ತು ಮುಂಬಡ್ತಿ ಮುಗಿಯಿತು.

‘ಒಡ್ಡು ಮಾತಿನ ಮುದುಕ ನಾನು ಹಗಲಲ್ಲಷ್ಟೆ
ಕತ್ತಲಾಯಿತೊ ಗಟ್ಟಿಯುವಕ,
ಬೆಕ್ಕ ನಗಿಸಲು ಬಲ್ಲೆ, ಗುಟ್ಟ ಕೂಗಿಸಬಲ್ಲೆ
ಜಾಣನುಡಿಯಲಿ ತೆಗೆದು ಚಿಲಕ.
ಮೊಡವೆ ಮೂಡಿದ ಮುಖದ ಎಳೆಯ ನುಡಿಸುವನೇನೆ
ನೆಣದೊಳಗೆ ಹುದುಗಿರುವ ಹಾಡ?
ಬದಿಗೆ ಮಲಗಿದ್ದ ಮಾತ್ರಕ್ಕೆ ದಕ್ಕೀತೇನು
ಕಾಲಪಾತಾಳಗಳ ಗೂಢ?’
– ಬೆಳಗಾಯ್ತು ಮುಂಬತ್ತಿ ಮುಗಿಯಿತು.

‘ಹುಟ್ಟುಹಾಕಲು ಮುಂದೆ ಬಾಗಿರುವ ಅಂಬಿಗನೊ,
ಮಗ್ಗದಲಿ ಬಗ್ಗಿರುವ ನೇಯ್ಗೆಯವನೊ,
ಎದೆಸೆಟಿಸಿ ಕೂತ ಅಶ್ವಾರೋಹಿಯೋ ಅಥವ
ಬಸಿರಿನಲಿ ಮುದುಡಿ ಮಲಗಿರುವ ಶಿಶುವೊ,
ಮೇಲಕೊಯ್ಯುವ ದಾರಿ ಹಿಡಿದವರೆ ಆಗಿರಲಿ
ಕೆಳನೆಲೆಯಲುಳಿದಂಥ ತೃಪ್ತರಿರಲಿ,
ನೋವಿನಲೆ ಬಾಳುವರು ಎಲ್ಲ ಮಾನವರೂ
ನನ್ನಂಥ ಕೆಲವರೇ ಇದ ಬಲ್ಲರು.’
– ಬೆಳಗಾಯ್ತು, ಮುಂಬತ್ತಿ ಮುಗಿಯಿತು.

‘ಬಲ್ಲ ಜನ ಯಾರೂ ಅಲ್ಲಗಳೆಯುವುದಿಲ್ಲ
ಮುಗಿಲಿನೊಳಗಿರುವ ಆ ಮುದುಕ
ಮಿಂಚಿನ ಧಾರೆ ಕಳಿಸಿ ಯಾತನೆಯ ಹರಿಸುವನು
ಎಂಬ ನಂಬಿಕೆಯ ಹಳೆಮಾತ.
ಆದರೂ ನಾ ಮಾತ್ರ ಬಲು ಒರಟು ಮುದುಕನೇ,
ನನಗಿರಲಿ ಎರಡನೆಯ ದಾರಿ,
ಹೆಣ್ಣಿನೆದೆ ಮೇಲೊರಗಿ ಮಲಗುವೆನು ಹಾಯಾಗಿ
ಯಾತನೆಯ ಮರವೆಯಲಿ ಹೂಳಿ.’
– ಬೆಳಗಾಯ್ತು, ಮುಂಬತ್ತಿ ಮುಗಿಯಿತು.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್‍ ಚಂದ್ರ