Home / ಕವನ / ಅನುವಾದ / ನಾಟಕವೊಂದರ ಹಾಡುಗಳು – ೧

ನಾಟಕವೊಂದರ ಹಾಡುಗಳು – ೧

ಹಾಡು – ೧

ದಿಟ್ಟಿಸಿ ನೋಡುತಲಿದ್ದಳು ಕನ್ನಿಕೆ
ಡಯೋನಿಸಸ್ಸನು ಸತ್ತಾಗ,
ಅವನ ಮೈಯಿಂದ ಹೃದಯವ ಕಿತ್ತು
ಕೈಯೊಳು ಅದನ್ನು ಹಿಡಿದಾಗ,
ಹಾಡಿದರೆಲ್ಲಾ ಕಲಾದೇವಿಯರು
ಮಹಾಯುಗಾದಿಯ ಚೈತ್ರದಲಿ,
ದೇವರ ಸಾವೂ ಆಟ ಎಂಬಂತೆ
ಕೂಡಿ ಹಾಡಿದರು ಖುಷಿಯಲ್ಲಿ.

ಮೂಡಿ ಮುಳುಗುವುದು ಟ್ರಾಯ್ ಇನ್ನೊಮ್ಮೆ
ವೀರರುಣಿಸುವರು ನರಿಗಳಿಗೆ,
ಹೊನ್ನ ತುಪ್ಪಟಕ ಬಣ್ಣದ ಆರ್‍ಗೋ –
ದೋಣಿ ಹಾಯುವುವು ಸಾಗರಕೆ.
ರೋಮನ್ ರಾಜ್ಯ ಸ್ತಂಭಿತವಾಯಿತು
ಶಾಂತಿಯುದ್ಧ ಸೂತ್ರವ ಒಗೆದು,
ಮೂಲತಮದಿಂದ ಉಗ್ರಕನ್ನಿಕೆಯ
ಜೊತೆಗೇ ಚಿಕ್ಕೆಯು ಮೂಡಿರಲು
*****
ಮೂಲ: ವಿಲಿಯಂ ಬಟ್ಲರ್ ಏಟ್ಸ್

ಪೂರ್‍ಣವಾಗಿ ತಿಳಿಯದಾಗಲೂ ನಮ್ಮನ್ನು ಸೆಳೆಯಬಲ್ಲ ನಿಗೂಢ ಮೋಹಕತೆ ಈ ಹಾಡುಗಳಲ್ಲಿದೆ. ಈ ಎರಡು ಹಾಡುಗಳನ್ನು ಏಟ್ಸನ ‘ರಿಸರೆಕ್ಷನ್’ ಎಂಬ ನಾಟಕದಿಂದ
ಆರಿಸಲಾಗಿದೆ.
(೧) ದಿಟ್ಟಿಸಿ ನೋಡುವ ಕನ್ನಿಕೆ ಗ್ರೀಕ್‌ ದೇವತೆ ಅಥೀನಾ.
(೨) ಡಯೋನಿಸಸ್ ಮರ್‍ತ್ಯಾಮರ್‍ತ್ಯ ಶಕ್ತಿಗಳ ಮಿಲನದಿಂದ ಬಂದವನು. ಇವನ ತಂದೆ ದೇವತೆಗಳ ಒಡೆಯ ಸ್ಯೂಸ್, ತಾಯಿ ಮರ್‍ತ್ಯಳಾದ ಪರ್‍ಸೆಫೋನ್. ಸ್ಯೂಸನ ಹಿರಿಯ ಪತ್ನಿಯಾದ ಹೀರಾಳನ್ನು ಮೆಚ್ಚಿಸಲು ಶತ್ರುಗಳು ಅವನನ್ನು ಕತ್ತರಿಸಿ ಹಾಕುತ್ತಾರೆ. ಅಥೀನಾ ಡಯೋನಿಸಸ್ಸಿನ ಹೃದಯವನ್ನು ಅವರಿಂದ ಕಸಿದು ತಂದು ಸ್ಯೂಸನಿಗೆ ಕೊಡುತ್ತಾಳೆ, ಸ್ಯೂಸ್ ಅದನ್ನು ನುಂಗಿ ಪುನಃ ಅವನನ್ನು ಇಡಿಯಾಗಿ ಪಡೆಯುತ್ತಾನೆ. ಡಯೋನಿಸಸ್ ಋತುಶಕ್ತಿಯನ್ನು ಪ್ರತಿನಿಧಿಸುವ ದೇವತೆ. ಅವನ ಹುಟ್ಟು ಸಾವುಗಳೆರಡೂ ಋತುಚಕ್ರದ ಆರಂಭಕ್ಕೆ ಅಗತ್ಯವಾದವು. ಅವನು ಸತ್ತರೂ ಮತ್ತೆ ಹುಟ್ಟುತ್ತಾನೆನ್ನುವುದು ಗೊತ್ತಿರುವುದರಿಂದ ಕಲಾದೇವಿಯರು ಸಂತೋಷಚಿತ್ತರಾಗಿ ಹಾಡುತ್ತಾರೆ.
(೮-೧೨) ಹಿಂದೆ ನಡೆದ ಟ್ರೋಜನ್ ಯುದ್ಧ ಮತ್ತೆ ನಡೆಯುತ್ತದೆ. ಆರ್‍ಗೋದೋಣಿ= ಗ್ರೀಕ್‌ ದೋಣಿ, ಉಗ್ರಕನ್ನಿಕೆ ಮತ್ತು ಚಿಹ್ನೆಗಳು ಮೇರಿ ಹಾಗೂ ಕ್ರಿಸ್ತನನ್ನು ಸೂಚಿಸುತ್ತವೆ.

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...