Home / ಕವನ / ಅನುವಾದ / ನಾಟಕವೊಂದರ ಹಾಡುಗಳು – ೧

ನಾಟಕವೊಂದರ ಹಾಡುಗಳು – ೧

ಹಾಡು – ೧

ದಿಟ್ಟಿಸಿ ನೋಡುತಲಿದ್ದಳು ಕನ್ನಿಕೆ
ಡಯೋನಿಸಸ್ಸನು ಸತ್ತಾಗ,
ಅವನ ಮೈಯಿಂದ ಹೃದಯವ ಕಿತ್ತು
ಕೈಯೊಳು ಅದನ್ನು ಹಿಡಿದಾಗ,
ಹಾಡಿದರೆಲ್ಲಾ ಕಲಾದೇವಿಯರು
ಮಹಾಯುಗಾದಿಯ ಚೈತ್ರದಲಿ,
ದೇವರ ಸಾವೂ ಆಟ ಎಂಬಂತೆ
ಕೂಡಿ ಹಾಡಿದರು ಖುಷಿಯಲ್ಲಿ.

ಮೂಡಿ ಮುಳುಗುವುದು ಟ್ರಾಯ್ ಇನ್ನೊಮ್ಮೆ
ವೀರರುಣಿಸುವರು ನರಿಗಳಿಗೆ,
ಹೊನ್ನ ತುಪ್ಪಟಕ ಬಣ್ಣದ ಆರ್‍ಗೋ –
ದೋಣಿ ಹಾಯುವುವು ಸಾಗರಕೆ.
ರೋಮನ್ ರಾಜ್ಯ ಸ್ತಂಭಿತವಾಯಿತು
ಶಾಂತಿಯುದ್ಧ ಸೂತ್ರವ ಒಗೆದು,
ಮೂಲತಮದಿಂದ ಉಗ್ರಕನ್ನಿಕೆಯ
ಜೊತೆಗೇ ಚಿಕ್ಕೆಯು ಮೂಡಿರಲು
*****
ಮೂಲ: ವಿಲಿಯಂ ಬಟ್ಲರ್ ಏಟ್ಸ್

ಪೂರ್‍ಣವಾಗಿ ತಿಳಿಯದಾಗಲೂ ನಮ್ಮನ್ನು ಸೆಳೆಯಬಲ್ಲ ನಿಗೂಢ ಮೋಹಕತೆ ಈ ಹಾಡುಗಳಲ್ಲಿದೆ. ಈ ಎರಡು ಹಾಡುಗಳನ್ನು ಏಟ್ಸನ ‘ರಿಸರೆಕ್ಷನ್’ ಎಂಬ ನಾಟಕದಿಂದ
ಆರಿಸಲಾಗಿದೆ.
(೧) ದಿಟ್ಟಿಸಿ ನೋಡುವ ಕನ್ನಿಕೆ ಗ್ರೀಕ್‌ ದೇವತೆ ಅಥೀನಾ.
(೨) ಡಯೋನಿಸಸ್ ಮರ್‍ತ್ಯಾಮರ್‍ತ್ಯ ಶಕ್ತಿಗಳ ಮಿಲನದಿಂದ ಬಂದವನು. ಇವನ ತಂದೆ ದೇವತೆಗಳ ಒಡೆಯ ಸ್ಯೂಸ್, ತಾಯಿ ಮರ್‍ತ್ಯಳಾದ ಪರ್‍ಸೆಫೋನ್. ಸ್ಯೂಸನ ಹಿರಿಯ ಪತ್ನಿಯಾದ ಹೀರಾಳನ್ನು ಮೆಚ್ಚಿಸಲು ಶತ್ರುಗಳು ಅವನನ್ನು ಕತ್ತರಿಸಿ ಹಾಕುತ್ತಾರೆ. ಅಥೀನಾ ಡಯೋನಿಸಸ್ಸಿನ ಹೃದಯವನ್ನು ಅವರಿಂದ ಕಸಿದು ತಂದು ಸ್ಯೂಸನಿಗೆ ಕೊಡುತ್ತಾಳೆ, ಸ್ಯೂಸ್ ಅದನ್ನು ನುಂಗಿ ಪುನಃ ಅವನನ್ನು ಇಡಿಯಾಗಿ ಪಡೆಯುತ್ತಾನೆ. ಡಯೋನಿಸಸ್ ಋತುಶಕ್ತಿಯನ್ನು ಪ್ರತಿನಿಧಿಸುವ ದೇವತೆ. ಅವನ ಹುಟ್ಟು ಸಾವುಗಳೆರಡೂ ಋತುಚಕ್ರದ ಆರಂಭಕ್ಕೆ ಅಗತ್ಯವಾದವು. ಅವನು ಸತ್ತರೂ ಮತ್ತೆ ಹುಟ್ಟುತ್ತಾನೆನ್ನುವುದು ಗೊತ್ತಿರುವುದರಿಂದ ಕಲಾದೇವಿಯರು ಸಂತೋಷಚಿತ್ತರಾಗಿ ಹಾಡುತ್ತಾರೆ.
(೮-೧೨) ಹಿಂದೆ ನಡೆದ ಟ್ರೋಜನ್ ಯುದ್ಧ ಮತ್ತೆ ನಡೆಯುತ್ತದೆ. ಆರ್‍ಗೋದೋಣಿ= ಗ್ರೀಕ್‌ ದೋಣಿ, ಉಗ್ರಕನ್ನಿಕೆ ಮತ್ತು ಚಿಹ್ನೆಗಳು ಮೇರಿ ಹಾಗೂ ಕ್ರಿಸ್ತನನ್ನು ಸೂಚಿಸುತ್ತವೆ.

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...