ಗೊಲ್ಲರ ಹುಡುಗ

ಚಿನ್ನದ ಗುದುರೆ ಗೊಲ್ಲರ ಹುಡುಗಾ ಕೋಲೆನ್ನ ಕೋಲೇ
ವಳೆ ಲಾಗಲೇ ಲೇನು ಮಾಡ್ಯಾನಾ || ೧ ||

ಅರಸೂನ ವನಗೆ ಲಾದರೆ ನಡುದ್ಯಾ
ವಳ್ಳೆಲಾಗಲೇ ಲೇನು ಮಾಡ್ಯನು || ೨ ||

ವಳ್ಳೆಲಾಗಲೇ ಅರಸಗೆಲಾದರ್‍ಯೇನು ಹೇಳುದು?
“ನಿಮ್ಮಲೆ ಮನುಗೆ ಸಾನಲೆ ಉಳುತೇ” || ೩ ||

ಅಂದಿ ಅರಸಗೆ ಲಾದರೆ ನುಡುದನು ಗೊಲ್ಲಾರ ಹುಡುಗಾ
ಚಿನ್ನದ ಗುದುರೆ ಗೊಲ್ಲಾರ ಹುಡುಗಾ || ೪ ||

ಲಾಗಲೆ ಲೇನು ಕೇಳ್ಯಾನು ಅರಸ?
ಮರಮನೆಲೆ ಯಾವ ಲಕ್ಕಿಲಾಸೋ || ೫ ||

ಯಲಗೊತ್ತುಲೆ ಕೇಳಿದ ಅರಸ
ಯಾವರೆ ಕೆಲಸಾ ಬೇಕಲ ಸ್ವಾಮಿ || ೬ ||

ಯಾವರೆ ಕೆಲಸಾ ಮಾಡಲು ಎಲ್ಲೇ
ಲಾಗಲೆ ಲೇನೂ ಮಾಡನೆ ಹುಡುಗಾ || ೭ ||

ಲಡುಗೆಲೆ ಮನೆಗೆ ಲಾದರೆನೋಡಿ
ಲಡುಗೆಲೇ ಲಾದರೆ ಮಾಡುಲಿಕೆ ಹಾಕ್ಯಾ || ೮ ||

ಗೊಲ್ಲರ ಹುಡುಗಾ ಯೇನಾರೆ ಮಾಡ್ಯಾ?
ಬೇಕಾದ ಲಡುಗೆ ಮಾಡಿರಿ ಇನ್ನೇ || ೯ ||

ತಾಸೀನ ಲೊಳಗೆ ಮಾಡುತ್ಯಾನು ಹುಡುಗಾ
ಒಳ್ಳೆ ಲಡಗೆ ಲೂಟಕಾದರೆ ಕರದಾ || ೧೦ ||

ಒಳ್ಳೆ ಅರಶಗೆ ಲಡುಗೇ ಮಾಡಿದ
ನಿತ್ಯದಂತೆ ದೇವರ ಪೂಜ್ಯೇ || ೧೧ ||

ಪೂಜೆನಲಾದರೆ ಮಾಡ್ಯಾನ ಲರಸ
ಊಟಕೆಲಾದರೆ ನಡೆದನು ಲರಸ || ೧೨ ||

ನಡೆದನೋ ಲರಸ ನೋಡಿರಿ ಶಿವನೆ
ಚಿನ್ನದ ಗುದುರೇ ಗೊಲ್ಲರ ಹುಡುಗಾ || ೧೩ ||

ಲರಸಗೆ ನೋಡಿ ಹೇಳ್ಯಾ ನೆಲಾದರೆ
ಬಟ್ಟಲದೊಳಗೆ ಹಾಕ್ಯಾನು ಲಿನ್ನೆ || ೧೪ ||

ಊಟದ ರುಚಿಯೇ ನೋಡ್ಯಾನು ಲರಸಾ
ಪಕವನಲಾದರೆ ಆಗಿದೊಶೀವನೆ || ೧೫ ||

ಊಟಕೆ ಆದರೆ ಬೆರಗ್ಯಾನೋ ಲರಸು
ಚಿನ್ನದ ಗುದುರೆ ಗೊಲ್ಲರ ಹುಡುಗಾ
ಬೇಕಾದ ಊಟ ಉಪಚಾರ ಮಾಡುತ್ಯಾ || ೧೬ ||
*****
ಹೇಳಿದವರು: ಢಾಕು ದೇವು ನಾಯ್ಕ, ಅರಗಾ ತಾಲೂಕು, ಕಾರವಾರ

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಲ್ಲಿ – ೨೬
Next post ತಾನಾಗಿರ್‍ಪ ದರ್‍ಪ ಸಾಲದೇ? ನಾವಾಗಿ ಬೆಳೆಸಬೇಕೇ?

ಸಣ್ಣ ಕತೆ

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಎಪ್ರಿಲ್ ಒಂದು

    ಒಮ್ಮೆಲೇ ಅವನಿಗೆ ಮದುವೆಯಾಗಿಬಿಡಬೇಕೆಂಬ ವಿಚಾರ ಬಂತು. ಮದುವೆಯಾಗುವದೆಂದರೆ ಒಂದು ಸಹಜವಾದ ವಿಚಾರವೆಂದು ಕೆಲವರಿಗೆ ಅನಿಸಬಹುದು. ಆದರೆ ಅವನದು ಮಾತ್ರ ಹಾಗಿರಲಿಲ್ಲ. ಎಲ್ಲರೂ ಅವನಿಗೆ ‘ಆಜನ್ಮ ಬ್ರಹ್ಮಚಾರಿ’ ಎಂಬ… Read more…