Home / ಕವನ / ಕೋಲಾಟ / ಗೊಲ್ಲರ ಹುಡುಗ

ಗೊಲ್ಲರ ಹುಡುಗ

ಚಿನ್ನದ ಗುದುರೆ ಗೊಲ್ಲರ ಹುಡುಗಾ ಕೋಲೆನ್ನ ಕೋಲೇ
ವಳೆ ಲಾಗಲೇ ಲೇನು ಮಾಡ್ಯಾನಾ || ೧ ||

ಅರಸೂನ ವನಗೆ ಲಾದರೆ ನಡುದ್ಯಾ
ವಳ್ಳೆಲಾಗಲೇ ಲೇನು ಮಾಡ್ಯನು || ೨ ||

ವಳ್ಳೆಲಾಗಲೇ ಅರಸಗೆಲಾದರ್‍ಯೇನು ಹೇಳುದು?
“ನಿಮ್ಮಲೆ ಮನುಗೆ ಸಾನಲೆ ಉಳುತೇ” || ೩ ||

ಅಂದಿ ಅರಸಗೆ ಲಾದರೆ ನುಡುದನು ಗೊಲ್ಲಾರ ಹುಡುಗಾ
ಚಿನ್ನದ ಗುದುರೆ ಗೊಲ್ಲಾರ ಹುಡುಗಾ || ೪ ||

ಲಾಗಲೆ ಲೇನು ಕೇಳ್ಯಾನು ಅರಸ?
ಮರಮನೆಲೆ ಯಾವ ಲಕ್ಕಿಲಾಸೋ || ೫ ||

ಯಲಗೊತ್ತುಲೆ ಕೇಳಿದ ಅರಸ
ಯಾವರೆ ಕೆಲಸಾ ಬೇಕಲ ಸ್ವಾಮಿ || ೬ ||

ಯಾವರೆ ಕೆಲಸಾ ಮಾಡಲು ಎಲ್ಲೇ
ಲಾಗಲೆ ಲೇನೂ ಮಾಡನೆ ಹುಡುಗಾ || ೭ ||

ಲಡುಗೆಲೆ ಮನೆಗೆ ಲಾದರೆನೋಡಿ
ಲಡುಗೆಲೇ ಲಾದರೆ ಮಾಡುಲಿಕೆ ಹಾಕ್ಯಾ || ೮ ||

ಗೊಲ್ಲರ ಹುಡುಗಾ ಯೇನಾರೆ ಮಾಡ್ಯಾ?
ಬೇಕಾದ ಲಡುಗೆ ಮಾಡಿರಿ ಇನ್ನೇ || ೯ ||

ತಾಸೀನ ಲೊಳಗೆ ಮಾಡುತ್ಯಾನು ಹುಡುಗಾ
ಒಳ್ಳೆ ಲಡಗೆ ಲೂಟಕಾದರೆ ಕರದಾ || ೧೦ ||

ಒಳ್ಳೆ ಅರಶಗೆ ಲಡುಗೇ ಮಾಡಿದ
ನಿತ್ಯದಂತೆ ದೇವರ ಪೂಜ್ಯೇ || ೧೧ ||

ಪೂಜೆನಲಾದರೆ ಮಾಡ್ಯಾನ ಲರಸ
ಊಟಕೆಲಾದರೆ ನಡೆದನು ಲರಸ || ೧೨ ||

ನಡೆದನೋ ಲರಸ ನೋಡಿರಿ ಶಿವನೆ
ಚಿನ್ನದ ಗುದುರೇ ಗೊಲ್ಲರ ಹುಡುಗಾ || ೧೩ ||

ಲರಸಗೆ ನೋಡಿ ಹೇಳ್ಯಾ ನೆಲಾದರೆ
ಬಟ್ಟಲದೊಳಗೆ ಹಾಕ್ಯಾನು ಲಿನ್ನೆ || ೧೪ ||

ಊಟದ ರುಚಿಯೇ ನೋಡ್ಯಾನು ಲರಸಾ
ಪಕವನಲಾದರೆ ಆಗಿದೊಶೀವನೆ || ೧೫ ||

ಊಟಕೆ ಆದರೆ ಬೆರಗ್ಯಾನೋ ಲರಸು
ಚಿನ್ನದ ಗುದುರೆ ಗೊಲ್ಲರ ಹುಡುಗಾ
ಬೇಕಾದ ಊಟ ಉಪಚಾರ ಮಾಡುತ್ಯಾ || ೧೬ ||
*****
ಹೇಳಿದವರು: ಢಾಕು ದೇವು ನಾಯ್ಕ, ಅರಗಾ ತಾಲೂಕು, ಕಾರವಾರ

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...