Home / ಲೇಖನ / ವಿಜ್ಞಾನ / ಆಯುಷ್ಯ ವರ್ಧಕವಾದ ಮೊಸರು

ಆಯುಷ್ಯ ವರ್ಧಕವಾದ ಮೊಸರು

ಬಲ್ಗೇರಿಯಾ ದೇಶದಲ್ಲಿ ಶತಾಯುಷಿಗಳ ಆಯುಷ್ಯದ ಗುಟ್ಟೇನು? ಎಂದು ತಿಳಿಯಲು ವಯೋವೃದ್ದರನ್ನು (ನೂರಾರುಜನ) ಬೇಟಿ ಮಾಡಿ ಪರೀಕ್ಷಿಸಿದಾಗ ಅದರಲ್ಲಿ ಸೆ. ೯೦ ಭಾಗ ಮೊಸರನ್ನೇ ಹೇರಳವಾಗಿ ಉಪಯೋಗಿಸುತ್ತಿದ್ದರೆಂದು ತಿಳಿದು ಬಂದಿತು. ಇದರಿಂದಾಗಿ ಸರಳವಾಗಿ ಮೊಸರಿನಲ್ಲಿರುವ ಆಯುಷ್ಯವರ್‍ಧಕದ ಸತ್ಯ ಬೆಳಕಿಗೆ ಬಂದಿತು. ಇದರಂತೆ ರಷಿಯಾದ ಪ್ರಖ್ಯಾತ ಆಹಾರ ತಜ್ಞ ಹಾಗೂ ಸಂಶೋಧಕರೂ ಆದ ಡಾ|| ಮೆಜ್‌ನಿಕೋಫ್‌ರವರು ಮೊಸರಿನಿಂದ ಅಕಾಲ ಮುಪ್ಪನ್ನು ತಡೆಗಟ್ಟಬಹುದಲ್ಲದೇ ಕರುಳಿಗೆ ಸಂಬಂಧಿಸಿದ ರೋಗಗಳನ್ನು ನಿವಾರಿಸಬಹುದೆಂದು ವೈಜ್ಞಾನಿಕವಾಗಿ ಸಾಬೀತುಪಡಿಸಿದರು. ಮೊಸರಿಗೆ ಪ್ರಸಿದ್ಧಿ ಪಡೆದಿದ್ದ ಬಲ್ಗೇರಿಯಾ ನಂತರ ಇರಾನ್, ಇರಾಕ್ ರಷಿಯಾ, ಮತ್ತು ಯುರೋಪಿಗಳಿಗೆ ಈ ಪ್ರಸಿದ್ಧಿಯನ್ನು ಬಿಟ್ಟುಕೊಟ್ಟಿತು. ಸ್ವಾರಸ್ಯವೆಂದರೆ ರಷಿಯಾದಲ್ಲಿ ಹಸು, ಎಮ್ಮೆಗಳ ಹಾಲಿನಿಂದಲ್ಲದೇ ಕುರಿ, ಕತ್ತೆ ಮತ್ತು ಆಡುಗಳ ಹಾಲಿನಿಂದಲೂ ಈ ಮೊಸರನು ಹೇರಳವಾಗಿ ತಯಾರಿಸಲಾಗುತ್ತದೆ.

ಮೊಸರಿನ ಸೇವನೆಯಿಂದ ಕರುಳಿನಲ್ಲಿನ ಬಹು ಅವಶ್ಯಕ ಜೀವಾಣುಗಳಾದ ಲೆಕ್ಟೋಬೆಸಿಲಿಸ್ ಹಾಗೂ ಎಫಿಡೋಫಿಲಸ್ ಬಲಗೊಳ್ಳುತ್ತವೆ. ಇವು ಕರುಳಿಗೆ ಬಂದು ತಲುಪುವ ಆಹಾರವನ್ನು ದೀರ್‍ಘಕಾಲ ಕೊಳೆಯದಂತೆ ಕಾಪಾಡುವುದಲ್ಲದೇ ಆಹಾರದಲ್ಲಿರಬಹುದಾದ ಮಾರಕ ಸೂಕ್ಷ್ಮ ಜೀವಿಗಳನ್ನು ನಾಶಪಡಿಸುವ ಗುಣ ಈ ಮೊಸರಿಗಿದೆ. ಪ್ರೊ. ಮೆಜ್‌ನಿಕೊಫ್‌ರವರ ಅಭಿಪ್ರಾಯದಂತೆ ಮನುಷ್ಯನ ದೊಡ್ಡ ಕರುಳಿನಲ್ಲಿರುವ ಕೆಲ ಜೀವಾಣುಗಳೇ ಅಕಾಲಮುಪ್ಪಿಗೆ ಹಾಗೂ ನಿಯಂತ್ರಣಕ್ಕೆ ಮೂಲ ಕಾರಣವಾಗುತ್ತವೆ. ಅದನ್ನು ಮೊಸರಿನ ಸೇವನೆಯಿಂದ ನಾಶಪಡಿಸಬಹುದು. ಕ್ಷಯರೋಗ, ಕಾಲರ, ವಿಷಮಸೀತಜ್ವರಗಳಿಗೆ ಕಾರಣವಾಗುವ ಅಂತಹ ಬ್ಯಾಕ್ಟಿರಿಯಾಗಳನ್ನು ಮೊಸರಿನಲ್ಲಿರಿಸಿದರೆ ಅವು ಸಾಯುತ್ತವೆ ಎಂಬುವುದನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.

ಇದು ಪೌಷ್ಟಿಕಾಂಶಗಳ ಆಹಾರ ಶುದ್ಧಮೊಸರಿನಲ್ಲಿ ಶೇ.೭ ರಷ್ಟು ಕೊಬ್ಬು ೩-೨ರಿಂದ ೩-೪ ರಷ್ಟು ಪ್ರೋಟಿನ್, ೫ ರಷ್ಟು ಲಾಕ್ಟಿಕ್ ಆಸಿಡ್, ೦.೧೪ ರಷ್ಟು ಕ್ಯಾಲ್ಸಿಯಂ, ೦.೦೯ ದಷ್ಟು ರಂಜಕ, ೦.೩ ರಷ್ಟು ಕಬ್ಬಿಣ ೫ ರಷ್ಟು ಲೆಕ್ಟೋಸ್ ಹಾಗೂ ೮೨ ರಿಂದ ೮೮ ಭಾಗ ನೀರು ಇರುತ್ತದೆ. ಡಾ || ವಿಲಿಯಂ ಮೈಕಿನ್ ಎಂಬ ಆಹಾರ ವಿಜ್ಞಾನಿಯು ಹಾಲಿಗಿಂತಲೂ ಮೊಸರಿನ ಸೇವನೆಯಿಂದ ಹೆಚ್ಚಿನ ಪಚನಶಕ್ತಿಯಾಗುತ್ತದೆಂದು ಹೇಳುತ್ತಾರೆ. ಇದು ಮೂತ್ರಪಿಂಡವು ಸಮರ್ಪಕವಾಗಿ ಕಾರ್‍ಯ ನಿರ್ವಹಿಸುವಂತೆಯೂ ನೋಡಿಕೊಳ್ಳುತ್ತದೆ.

ಚಳಿಗಾಲಕ್ಕಿಂತ ಬೇಸಿಗೆಯಲ್ಲಿ ಮೊಸರುಬೇಗನೇ ಹೆಪ್ಪು ಗಟ್ಟುತ್ತದೆ. ಚಾಳಿಗಾಲದಲ್ಲಿ ಮೊಸರನ್ನು ಪಾತ್ರೆಯೊಳಗೆ ಚನ್ನಾಗಿ ಲೇಪಿಸಿ ನಂತರ ಉಗುರುಬೆಚ್ಚಿಗಿನ ಹಾಲನ್ನು ಅದರೊಳಗೆ ಸುರಿದು ಸ್ವಲ್ಪ ಮೊಸರನ್ನು ಅದರ ಮೇಲೆ ಬೆರಸಬೇಕು. ಆ ನಂತರ ಪಾತ್ರೆಯ ಬಾಯಿಗೆ ಬಟ್ಟೆಯನ್ನು ಬಿಗಿಯಾಗಿಕಟ್ಟಿ ಬಿಸಿಲಿನಲ್ಲಿಡಬೇಕು. ಈ ಸುಧಾರಿತ ವಿಧಾನದಲ್ಲಿ ೨-೩ ತಾಸುಗಳಲ್ಲಿಯೇ ಹಾಲು ಹೆಪ್ಪುಗಟ್ಟಿ ಮೊಸರಾಗುತ್ತದೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...