Home / ಕವನ / ಕವಿತೆ / ಕುಬಸಾ ಮಾಡೂ ಹಾಡು

ಕುಬಸಾ ಮಾಡೂ ಹಾಡು

ಒಂದಂಬು ತಿಂಗಳಿಗಿ ಒಂದೇನ ಬಯಸ್ಯಾಳ|
ಅಂಗೈಯಲುಪ್ಪಾ ಎಳೆಹುಣಸಿ ||೧||

ಎರಡಂಬು ತಿಂಗಳಿಗಿ ಎರಡೇನ ಬಯಸ್ಯಾಳ|
ಎರಡೆಲಿಗೊಂಡ ಎಳಿಮಾವ ||೨||

ಮೂರಂಬು ತಿಂಗಳಿಗಿ ಮೂರೇನ ಬಯಸ್ಯಾಳ|
ಮೂಡಽಲ ದಿಕ್ಕಿಽನ ಮಗಿಮಾವ ||೩||

ನಾಕಂಬು ತಿಂಗಳಿಗಿ ನಾಕೇನ ಬಯಸ್ಯಾಳ|
ಕೊಯ್ದ ಹಣ್ಣು ಕೈತುಂಬಾ ||೪||

ಐದಂಬು ತಿಂಗಳಿಗಿ ಐದೇನ ಬಯಸ್ಯಾಳ|
ಕೊಯ್ದ ಮಲ್ಲೀಗಿ ನನಿದಂಡಿ ||೫||

ಆರೆಂಬು ತಿಂಗಳಿಗಿ ಆರೇನ ಬಯಸ್ಯಾಳ|
ಆರಾಕಿದ ಬಾನ ಕೆನಿ-ಮಸರ ||೬||

ಏಳಂಬು ತಿಂಗಳಿಗಿ ಏಳೇನ ಬಯಸ್ಯಾಳ|
ಹೇಳಿ ಕಳುವ್ಯಾಳ ತವರಿಗಿ ||೭||

ಎಂಟಂಬು ತಿಂಗಳಿಗಿ ಎಂಟೇನ ಬಯಸ್ಯಾಳ|
ಕಂಟಲ್ಯಾಲಕ್ಕಿ ಕೊಡ ತುಪ್ಪ ||೮||

ಒಂಬತ್ತು ತಿಂಗಳಿಗಿ ತುಂಬ್ಯಾವ ನವಮಾಸ|
ಸಂದು ಸಂದೆಲ್ಲ ಕಿರಿಬ್ಯಾನಿ ||೯||

ವ್ಯಾಳ್ಯವ್ಯಾಳ್ಯಕ್ಕೆ ಬ್ಯಾನಿ ತಾಳ ಬಾರಿಸಿದಂಗ|
ತಾಳಲಾರೆನೆ ನಿಲ್ಲಲಾರೆನವ್ವಾ| ತಾಯವ್ವನಿರಬೇಕು ಜನ್ಮಕ ||೧೦||

ಹೊತ್ತು ಹೊತ್ತಿಲೆ ಬ್ಯಾನಿ ಕತ್ತೀಲೆ ಕಡ್ದಂತೆ|
ಹೆತ್ತವ್ವನಿರಬೇಕ ಜನ್ಮಕ ||೧೧||

ಹತ್ತಂಬು ತಿಂಗಳಿಗಿ ಹೆತ್ತಾಳ ಹಸಗೂಸ|
ಸುತ್ತೆಲ್ಲ ನೆರದಾರ ಸುಮಂಗಲೇರು ||೧೨||
*****

ಮದುವೆ ಶೋಭನಗಳ ನಂತರ ಬರುವ ವಿಧಾನದ ಹಾಡುಗಳನ್ನೆಲ್ಲ ಈ ವಿಭಾಗದಲ್ಲಿ ಕೂಡಿಸಬೇಕೆಂದು ನಮ್ಮ ಇಚ್ಛೆ. ಹೆಣ್ಣುಮಕ್ಕಳು ಚೊಚ್ಚಿಲು ಬಸಿರಾದಾಗ ಐದನೆಯ ಇಲ್ಲವೇ ಏಳನೆಯ ತಿಂಗಳಲ್ಲಿ ಒಂದು ವಿಧಾನವು ಜರುಗಿಸಲ್ಪಡುತ್ತದೆ. ಮತ್ತು ಹಡೆದಾಗ ಕೂಸಿಗೆ ನಾಮಕರಣ ಮಾಡುವ ಕಾಲಕ್ಕೆ ಇನ್ನೊಂದು ವಿಧಾನವು ಜರುಗಿಸಲ್ಪಡುತ್ತದೆ. ಬಹುಶಃ ಇಲ್ಲಿಗೆ
ವಿಧಾನಗಳೆಲ್ಲ ಮುಗಿದಂತಾಗುವವು.

ಕುಬಸಾ ಮಾಡೂ ಹಾಡು

ಚೊಚ್ಚಿಲ ಬಸುರಿಗೆ ಐದನೆಯ ಇಲ್ಲವೆ ಏಳನೆಯ ತಿಂಗಳಲ್ಲಿ ಅಕ್ಕರತೆಯಿಂದ ಕುಪ್ಪಸದ ಉಡುಗೊರೆ ಮಾಡುತ್ತಾರೆ. ಆಗ ಹೇಳುವ ಹಾಡಿದು. ಇದರಲ್ಲಿ ಬಸುರಿಗೆ ಉಂಟಾಗುವ ಬಗೆಬಗೆಯ ಬಯಕೆಗಳು ಬಣ್ಣಿಸಲ್ಪಟ್ಟಿವೆ.

ಛಂದಸ್ಸು:- ತ್ರಿಪದಿಯ ಪೂರ್ವಾರ್ಧ.

ಶಬ್ದಪ್ರಯೋಗಗಳು:- ನೆನೆದಂಡಿ=ಮೊಗ್ಗೆಗಳ ದಂಡೆ. ಆರಾಕು=ಆರಲಿಕ್ಕೆ ಹಾಕು. ಕಂಟಲಿ ಎತ್ತು=ಮುಟ್ಟುಹಾಕಿದ ಎತ್ತು.

Tagged:

Leave a Reply

Your email address will not be published. Required fields are marked *

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...