Home / ಲೇಖನ / ಇತರೆ / ಮತಸಂಪಾದನೆಗೆ ರಾಮಬಾಣ ಉಪಾಯ

ಮತಸಂಪಾದನೆಗೆ ರಾಮಬಾಣ ಉಪಾಯ

ಬರ್‍ರಿ, ಬರ್‍ರಿ ಗೋಪಾಳರಾವ ನಮ್ಮನ್ನಗ್ದಿ ಮರೇತ್ರಂತ ತಿಳಕೂಂಡಿದ್ದಿವಿ. ಬರ್ರಿ ಇಲ್ಲೆ ಕೂಡಬರ್ರಿ. ಅಕಡೆ ಕೂಡಬಾಡ್ರಿ ನಿಮ್ಮ ಕೂಡುವ ಸ್ಥಾನ ಈ ಗಾದಿಯ ಮೇಲೆ ಅದೆ. ನಿಮ್ಮನ್ನ ತೆಳಗ ಕೂಡ್ರಿಸಿ ನಾವೆಲ್ಲಿ ಕೂಡ್ರ ಬೇಕು. ಗಾದಿಯ ಮ್ಕಾಲಿ ಕೂಡ್ರಿ ರಾಯರೆ.

ಎಲಾ, ಅಲ್ಲಿ ಯಾರಿದೀರಿ ಎರಡು ಕಪ್ಪು ಉತ್ತಮ ಚಹಾ ಮಾಡಂತ ಹೇಳ್ರಿ. ಗೋಪಾಳರಾಯರಿಗೆ ಸ್ಟ್ರಾಂಗ ಚಹಾ ಬೇಕು ಗೊತ್ತದ ಇಲ್ಲೊ. ತಾಜಾ ಹಾಲು ಹಾಕಲಿಕ್ಕೆ ಹೇಳು.

ಇದ್ನೋಡ್ರಿ ಆನಂದರಾವ, ಗೋಪಾಳಾರಾವ ಅಂದ್ರ ಒಂದು ವ್ಯಕ್ತಿ ಅದ, ವ್ಯಕ್ತಿ. ಒಬ್ಬ ಮನುಷ್ಯ ತಮ್ಮವ ಅಂತ ಅಂದ್ರ ಜೀವ ಹೋದರು ಅವನ ಕೈ ಬಿಡುವದಿಲ್ಲ. ಬಹಳ ದಿವಸದಾಗ ಅವರ ಭೆಟ್ಟಿಯಾಗಿದ್ದಿಲ್ಲ ಎಂದು ತಿಳಿದು ನಿನ್ನೆ ಅವರ ಮನಿಗೆ ಹೋಗಿದ್ದೆ. ಗೋಪಾಳ್ರಾಯರು ಮನೆಯಾಗದ್ದಿಲ್ಲಂತ ಅವರ ಮನ್ಯಾಗ ಹೇಳಿಬಂದೆ. ಇಂದು ಬೆಳಗಾಗುವದರೂಳಗೆ ಗೋಪಾಳಾರಾವ ಇಲ್ಲಿ ಹಜರರಿದ್ದಾರ. ಋಣಾನಬಂಧ? ಅಂದ್ರ ಹೀಂಗ ಇರಬೇಕು. ನಮ್ಮದು ಅವರದು ಗೆಳತನ ಅಂತ ಅಂದ್ರ ನಮ್ಮ ಪೂರ್‍ತೆಕ್ಕ ಇಲ್ಲ ಅದು. ವಂಶಪರಂಪರಾಗಿದ್ದು ಅದು ಅವರ ತಂದಿ ನಮ್ಮ ತಂದಿ ಮನೂಗಳಿಯೊಳಗ ಸಾಲಿ ಕಲಿಯುವ ಮುಂದೆ ಇಬ್ಬರೂ ಕೂಡಿ ಸಾಲಿ ತಪ್ಪಿಸಿ ಗಿಡ ಮಂಗ್ಯಾನ ಆಟಾ ಆಡಲಿಕ್ಕೆ ಹೋಗುತ್ತಿದ್ದರು. ಅಂದಿನಿಂದ ಅವರದು ನಮ್ಮದು ಗೆಳೆತನ.

ಯಾಕ್ರೀ ಗೋಪಾಳ ರಾವ, ಆಗಿನ ಗಿಡಮಾಗ್ಯಾನ ಆಟದ ದಿವಸ ಹೋದವು. ಈಗಿನ ಹುಡುಗರು ಖೋಡಿಗಳು ಕೆರಿಕೆಟ, ಹಾಕಿ, ಅಂತಾವ ದುಡ್ಡಿನ ಹೊರ್‍ತು ಕೆಲಸಿಲ್ಲ. ನಮ್ಮ ಆಟಗಳಿಗೆ ಒಂದು ದುಡ್ಡು ಸಹ ಖರ್‍ಚು ಹತ್ತುದಿಲ್ಲ.

ಎಲಾ, ಚಹ ಆಗಿದ್ದರ ತರ್‍ಯೋ ಸಂಗಡ ಎನರೆ ಖಾರ ತೊಗೊಂಬರ್‍ಯೋ ಆದರ ಹೊರ್‍ತಾಗಿ ಚಹಕ್ಕ ರುಚಿನೇ ಬರುವದಿಲ್ಲ. ಗೋಪಾಳ್ರಾವ ಅಂದರ ಚಹೆದ ಪಕ್ಕಾ ಸವಿಗಾರರು, ಹಳದೀ ಡಬ್ಬಿಯ ಹೊರ್‍ತು ಗೊತ್ತಿಲ್ಲ ಅವರಿಗೆ.

ನಾನು ಮ್ಯುನಿಸಿಪಾಲ್ಟಿಯ ಚುನಾವಣಿಗೆ ನಿಂತದ್ದು ಅರರಿಗೆ ಹೇಳಲಿಕ್ಕ ಬೇಡ, ನನ್ನ ಚುನಾವಣೆ ಅಂದ್ರ ಅನರ ಚುನಾವಣೆ ಇದ್ದಂಗ. ಗೋಪಾಳ್ರಾಯರಷ್ಟು ಆತ್ಮೀಯ ಭಾವನೆಯಿಂದ ಕಲಸ ಮಾಡನವರೆಂದರೆ ಕ್ವಚಿತ್‌ ಸಿಗುವರು. ಎಲಾ, ಎಲಿ ಅಡಕಿ ಡಬ್ಬಿ ತಗೊಳ್ಳಿರೋ, ವಿಳೇದೆಲಿ ಕೂಡಿಗಿವು ಅವ ಕೂಡಗಿವು, ಇನ್ನೇನು ಕೇಳಬೇಕ ನಿಮಗ, ಎಲ್ಲ ನೆನಪಿನಲ್ಲರಿಲ್ಲಿರಲಿ, ಅಂದ್ರ ಆತು ೨೮ ನೇ ತಾರೀಖು ಮಾತ್ರ ನೆನಪಿನಲ್ಲಿರಿಲಿ.

ಸ್ನಾನದ ವಾಳ್ಯಾ ಆದಂತೆ ತೋರತದ. ವಿನಾಕಾರಣ ನಿಮ್ಮ ಅನ್ಬೇಕಕ್ಕ ಯಾಕ ಹರಕತ್ತು ಮಾಡಬೇಕು ಹೋಗಿಬರ್ರಿ. ನಮಸ್ಕಾರ (ಹೊರಗೆ ಬಂದ ಮೇಲೆ ಗೋಪಾಳರಾಯರ) ೬ ತಿಂಗಳಿಗೊಮ್ಮೆ ಮ್ಯುನಸಿಪಾಲ್ಟಿಯ ಚುನಾವಣಿ ಇದ್ದರೆ ಎಷ್ಟು ಮಜಾ ಆಗುತ್ತಿತ್ತು ಎಂದರು!
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...