Home / ಕವನ / ಕೋಲಾಟ / ಹರವಣ ಗುರುವಣ ಬಲಗೊಂಬೆ

ಹರವಣ ಗುರುವಣ ಬಲಗೊಂಬೆ

(ಶುಗ್ಗಿ ಕಟ್ಟೇಲಿ ಸುಗ್ಗಿ ಯೇಳಿಸುವಾಗ, ಮುಗಿಸುವಾಗ ಹೇಳೊ ಪದ)

ಹರವಣ ಗುರುವಣ ಬಲಗೊಂಬೆ
ಗುರವಣ ಗುರಪಾದಕೆ ಸರಣು || ೧ ||

ನನಮುನಗಮು ಮಾನೋ ಗೆಲ್ಲಾ
ನಂದಾಸೇತಿ ಪುಣ್ಣಿದಿಂದ || ೨ ||

ಹುಟ್ಟಪಾಪ ಪರಿಹಾರಂದ
ಸಲವನ ದೇವನೆ ಸಿಲವನಗೊಂಬ || ೩ ||

ಸಾರಂದೇವ್ರು ಕಾರನದಿಂದ
ಬಂದಾನಾಯೈನ ಕಾರನದಿಂದ || ೪ ||

ಚೆನ ಮೆನ ನನ ಮೇನ್ ಉಂಡ್ಲೆ ಕೋಳು
ಶಿವೂರ ಮಗಬೇನ್ ಕೊಳಬೈನಂದಾ || ೫ ||

ನಂದಾಸೀತಿ ಪುಣ್ನಾದಿಂದಾ
ಹುಟ್ದ ಪಾಪ ಪರಿಹಾರೆಂದ || ೬ ||

ಕೋಳೊಂದೆರಡು ಕಡದೀ ತಂದೀ
ಹಾಸರಬೀಸರ ಕೆಲ್ಗೆ ಕೋಲುಲ್ ಹೊಯ್ದಾರೆ || ೭ ||

ಪಾಂಡವ್ರ ಮಕಲು ಕುಂಚವೊಲೈ
ನಾರಂದೇವ್ರ ಕಾರಣದಿಂದಾ || ೮ ||

ಬಂದಾನಾಯ್ಕನ ಕಾರಣದಿಂದಾ
ಚೆನ ಮನ ನನ ಮೇನ್ ಉಂಡ್ಲೆ ಕೋಳು || ೯ ||

ದೇವದೇವರೂ ಹರಗಿರ ಕೋಳು
ನಂದಾಸೀತೆ ಪುಣ್ಯದಿಂದಾ || ೧೦ ||

ಹುಟ್ದಾ ಪಾಪ ಪರಿಹಾರಂದಾ
ಶೀತಾರಾಮನ ಪುಣ್ಯಾದಿಂದಾ || ೧೧ ||

ಹಾಸರಬೀಸರ ಗಿರಿಯಲ್ ಕಟ್ಟಿ
ಹುಟ್ದಲ್ ಮೆಟ್ದಲ್ ಸರ್ಪನ ಬಾನ || ೧೨ ||

ಯೆತ್ತರ ಸತ್ತರ ಕಾಕೀ ನಿನ್ನಾ
ಕಾಕೀ ನಂದಾ ನಾಡನಂದಾ || ೧೩ ||

ಬಾಡದ ಕಾಕೇ ಕಣಿಮನ ಕಪ್ಪು
ಹನಮಂತ ಹನ್ಮದ ರಕ್ಸಾನಂದ || ೧೪ ||

ಹೊಣ್ಣಾರ ಹನಮನ ತೇಮಾನಂದಾ
ವಂದಂಬ ಗೆರಿಯ ಬರದೇ ನಂದಾ || ೧೫ ||

ಗೆರಿಯ ದಾಟಿ ಹೋ ಗಬೇಡಂದಾ
ಯೆರಡಂಬ ಸೆರಿಯ ಬರದೇನಂದಾ || ೧೬ ||

ಮೂರಂಬ ಗೆರಿಯ ಬರದೇನಂದಾ
ಗೆರಿಯ ದಾಟಿ ಹೋಗಬೇಡಂದಾ || ೧೭ ||

ಯೆರಡಂಬ ಸೆರಿಯ ಬರದೇನಂದಾ
ಮೂರೆಂಬ ಗೆರಿಯ ಬರದೇನಂದಾ || ೧೮ ||

ಗೆರಿಯ ದಾಟಿ ಹೋ ಗಬೇಡಾಂದಾ
ಬೇವೋನಾಗಿ ಬಿದ್ರೊ ಬಾವಾ || ೧೯ ||

ಬಿಲಿಮನ ಬಿಲ್ಲಿಂದ ಹೊಡೆದಾ ನೋಡು
ಮಿಗನ ಬನಕೇ ಹೋದೋ ನೋಡೂ || ೨೦ ||

ವಂದೆಂಬ ಬಾನ್ದಲ್ ಹೊಡದ್ನೋ ನೋಡು
ಆ ಬಾನವಿಲಾ ಆಕಾಸ್ಕೆ ಹೋಯ್ತು || ೨೧ ||

ಮತ್ತೊಂದ್ ಬಾನಾ ಹೊಡ್ದಾ ನೋಡೂ
ಲಾ ಬಾನಾ ಪಾತಾಲ್ಕೆ ಹೋಯ್ತು || ೨೨ ||

ಮತ್ತಂದ ಬಾನಾ ಹೋಡ್ದಾ ನೋಡು
ಕೋಡ್ನ ಮರ್‍ಗಗಲು ಬಿದ್ದೋ ನೋಡು

ಪಕ್ಕರ ಪಕ್ಕರ ಆಮಟ್ಟಗಾರಗೆ
ಪಕ್ಕರ ಪಕ್ಕರ ಹರದೂ ಬಾಣಾ || ೨೪ ||

ಕಲ್ಲೂ ಹಾಂದಿಗಳು ಹಯದೋ ನೋಡು
ಹೊಣ್ಣಾರ ಹನ್ಮಂತ ತೇಮಾನಂದಾ || ೨೫ ||

ಕಲ್ಲದ ಕೈಕರ ಬಲವೆನಂದಾ
ಕಲ್ಲರ ಗುತ್ತಾ ಬಲ್ಲೇನಂದಾ || ೨೬ ||

ಊಸಡುಂಗ್ಲ ಕೈಲ್ ಕೊಟ್ಟ
ದರ್ಬೆವಳ ಮಂತ್ರನೆ ಕಂಡೀ
ಒಡ್ಲಕ್ಕೇ ಪಡ್ಲಕ್ಕೇನಂದಾ || ೨೭ ||

ಶೀತೇರಾಮರ ಪಾಳಗದಿಂದಾ
ಶೀತೇ ಕಟ್ಕಂಡ ಕಡಿಬೇಕಂದ || ೨೮ ||

ಹೇಲ ಸಂಗ್ರ ಮಾಡಬೇಕಂದಾ
ಕೋಜ ಬುತ್ತೀ ಕಟ್ಟೆನಂದಾ || ೨೯ ||

ಕೈಲ ಕತ್ತಿ ತಾರೇನಂದಾ
ಶೀತೆ ಕಟ್ಕಂದ ಕಡ್ದೇನಂದಾ || ೩೦ ||

ಶೀತೇ ತಕ್ಕಂಡ ಇಲ್ಲೇ ಬಂದಾ
ಹೋ ರಾಮಣ್ಣಾ ರಾಯರ ಪಾದಕ ಬಿದ್ದಣ್ಣ || ೩೧ ||
*****
ಹೇಳಿದವರು: ನಾಗಪ್ಪ ಶಿವಪ್ಪ ಗೌಡ, ತಲಗೊಡು

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...