Home / ಕವನ / ಕೋಲಾಟ / ಹರವಣ ಗುರುವಣ ಬಲಗೊಂಬೆ

ಹರವಣ ಗುರುವಣ ಬಲಗೊಂಬೆ

(ಶುಗ್ಗಿ ಕಟ್ಟೇಲಿ ಸುಗ್ಗಿ ಯೇಳಿಸುವಾಗ, ಮುಗಿಸುವಾಗ ಹೇಳೊ ಪದ)

ಹರವಣ ಗುರುವಣ ಬಲಗೊಂಬೆ
ಗುರವಣ ಗುರಪಾದಕೆ ಸರಣು || ೧ ||

ನನಮುನಗಮು ಮಾನೋ ಗೆಲ್ಲಾ
ನಂದಾಸೇತಿ ಪುಣ್ಣಿದಿಂದ || ೨ ||

ಹುಟ್ಟಪಾಪ ಪರಿಹಾರಂದ
ಸಲವನ ದೇವನೆ ಸಿಲವನಗೊಂಬ || ೩ ||

ಸಾರಂದೇವ್ರು ಕಾರನದಿಂದ
ಬಂದಾನಾಯೈನ ಕಾರನದಿಂದ || ೪ ||

ಚೆನ ಮೆನ ನನ ಮೇನ್ ಉಂಡ್ಲೆ ಕೋಳು
ಶಿವೂರ ಮಗಬೇನ್ ಕೊಳಬೈನಂದಾ || ೫ ||

ನಂದಾಸೀತಿ ಪುಣ್ನಾದಿಂದಾ
ಹುಟ್ದ ಪಾಪ ಪರಿಹಾರೆಂದ || ೬ ||

ಕೋಳೊಂದೆರಡು ಕಡದೀ ತಂದೀ
ಹಾಸರಬೀಸರ ಕೆಲ್ಗೆ ಕೋಲುಲ್ ಹೊಯ್ದಾರೆ || ೭ ||

ಪಾಂಡವ್ರ ಮಕಲು ಕುಂಚವೊಲೈ
ನಾರಂದೇವ್ರ ಕಾರಣದಿಂದಾ || ೮ ||

ಬಂದಾನಾಯ್ಕನ ಕಾರಣದಿಂದಾ
ಚೆನ ಮನ ನನ ಮೇನ್ ಉಂಡ್ಲೆ ಕೋಳು || ೯ ||

ದೇವದೇವರೂ ಹರಗಿರ ಕೋಳು
ನಂದಾಸೀತೆ ಪುಣ್ಯದಿಂದಾ || ೧೦ ||

ಹುಟ್ದಾ ಪಾಪ ಪರಿಹಾರಂದಾ
ಶೀತಾರಾಮನ ಪುಣ್ಯಾದಿಂದಾ || ೧೧ ||

ಹಾಸರಬೀಸರ ಗಿರಿಯಲ್ ಕಟ್ಟಿ
ಹುಟ್ದಲ್ ಮೆಟ್ದಲ್ ಸರ್ಪನ ಬಾನ || ೧೨ ||

ಯೆತ್ತರ ಸತ್ತರ ಕಾಕೀ ನಿನ್ನಾ
ಕಾಕೀ ನಂದಾ ನಾಡನಂದಾ || ೧೩ ||

ಬಾಡದ ಕಾಕೇ ಕಣಿಮನ ಕಪ್ಪು
ಹನಮಂತ ಹನ್ಮದ ರಕ್ಸಾನಂದ || ೧೪ ||

ಹೊಣ್ಣಾರ ಹನಮನ ತೇಮಾನಂದಾ
ವಂದಂಬ ಗೆರಿಯ ಬರದೇ ನಂದಾ || ೧೫ ||

ಗೆರಿಯ ದಾಟಿ ಹೋ ಗಬೇಡಂದಾ
ಯೆರಡಂಬ ಸೆರಿಯ ಬರದೇನಂದಾ || ೧೬ ||

ಮೂರಂಬ ಗೆರಿಯ ಬರದೇನಂದಾ
ಗೆರಿಯ ದಾಟಿ ಹೋಗಬೇಡಂದಾ || ೧೭ ||

ಯೆರಡಂಬ ಸೆರಿಯ ಬರದೇನಂದಾ
ಮೂರೆಂಬ ಗೆರಿಯ ಬರದೇನಂದಾ || ೧೮ ||

ಗೆರಿಯ ದಾಟಿ ಹೋ ಗಬೇಡಾಂದಾ
ಬೇವೋನಾಗಿ ಬಿದ್ರೊ ಬಾವಾ || ೧೯ ||

ಬಿಲಿಮನ ಬಿಲ್ಲಿಂದ ಹೊಡೆದಾ ನೋಡು
ಮಿಗನ ಬನಕೇ ಹೋದೋ ನೋಡೂ || ೨೦ ||

ವಂದೆಂಬ ಬಾನ್ದಲ್ ಹೊಡದ್ನೋ ನೋಡು
ಆ ಬಾನವಿಲಾ ಆಕಾಸ್ಕೆ ಹೋಯ್ತು || ೨೧ ||

ಮತ್ತೊಂದ್ ಬಾನಾ ಹೊಡ್ದಾ ನೋಡೂ
ಲಾ ಬಾನಾ ಪಾತಾಲ್ಕೆ ಹೋಯ್ತು || ೨೨ ||

ಮತ್ತಂದ ಬಾನಾ ಹೋಡ್ದಾ ನೋಡು
ಕೋಡ್ನ ಮರ್‍ಗಗಲು ಬಿದ್ದೋ ನೋಡು

ಪಕ್ಕರ ಪಕ್ಕರ ಆಮಟ್ಟಗಾರಗೆ
ಪಕ್ಕರ ಪಕ್ಕರ ಹರದೂ ಬಾಣಾ || ೨೪ ||

ಕಲ್ಲೂ ಹಾಂದಿಗಳು ಹಯದೋ ನೋಡು
ಹೊಣ್ಣಾರ ಹನ್ಮಂತ ತೇಮಾನಂದಾ || ೨೫ ||

ಕಲ್ಲದ ಕೈಕರ ಬಲವೆನಂದಾ
ಕಲ್ಲರ ಗುತ್ತಾ ಬಲ್ಲೇನಂದಾ || ೨೬ ||

ಊಸಡುಂಗ್ಲ ಕೈಲ್ ಕೊಟ್ಟ
ದರ್ಬೆವಳ ಮಂತ್ರನೆ ಕಂಡೀ
ಒಡ್ಲಕ್ಕೇ ಪಡ್ಲಕ್ಕೇನಂದಾ || ೨೭ ||

ಶೀತೇರಾಮರ ಪಾಳಗದಿಂದಾ
ಶೀತೇ ಕಟ್ಕಂಡ ಕಡಿಬೇಕಂದ || ೨೮ ||

ಹೇಲ ಸಂಗ್ರ ಮಾಡಬೇಕಂದಾ
ಕೋಜ ಬುತ್ತೀ ಕಟ್ಟೆನಂದಾ || ೨೯ ||

ಕೈಲ ಕತ್ತಿ ತಾರೇನಂದಾ
ಶೀತೆ ಕಟ್ಕಂದ ಕಡ್ದೇನಂದಾ || ೩೦ ||

ಶೀತೇ ತಕ್ಕಂಡ ಇಲ್ಲೇ ಬಂದಾ
ಹೋ ರಾಮಣ್ಣಾ ರಾಯರ ಪಾದಕ ಬಿದ್ದಣ್ಣ || ೩೧ ||
*****
ಹೇಳಿದವರು: ನಾಗಪ್ಪ ಶಿವಪ್ಪ ಗೌಡ, ತಲಗೊಡು

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...