Home / ಕಥೆ / ಕಾದಂಬರಿ / ಸುಭದ್ರೆ – ೧೮

ಸುಭದ್ರೆ – ೧೮

ಮಾಧವನು ಮುಖ್ಯ ವೈದ್ಯನೊಡನೆ ರೋಗಿಗಳಿರುವ ಸ್ಥಳಕ್ಕೆ ಹೋದನು. ಸುಬದ್ರೆಯು ಮಲಗಿದ್ದ ಕೊಠಡಿಯಬಳಿಗೆ ಬರುತ್ತಲೆ, ವೈದ್ಯನು ಮಾಧವನನ್ನು ಸ್ಕಲ್ತ. ಹೊತ್ತು ಮರೆಯಾಗಿರ ಹೇಳಿ ತಾನೊಬ್ಬನೆ ಒಳಗೆ ಹೋದನು. ಆಗ ಸುಭದ್ರೆಯು ಸಂಪೂ ರ್ಣವಾಗಿ ವಿಕಾಸವಾದ ಕಣ್ಣುಗಳಿಂದ ಮೇಲ್ಚಾವಣಿಯನ್ನು ನೋ ಡುತ್ತಾ ಮಲಗಿದ್ದಳು. ವೈದ್ಯನು “ಸುಭದ್ರಾಬಾಯಿ! ” ಎನ್ನುತ್ತಲೆ ಗಕ್ಕನೆ ತಿರುಗಿ ನೋಡಿದಳು. ಅಯ್ಯೊ! ನೀವೇ? ಅವರು ಬಂದರೇನೋ ಎಂದಿದ್ದೆ.“ ಎಂದು ತನ್ನಷ್ಟಕ್ಕೆ ತಾನೆ ಹೇಳಿಕೊಂಡಳು.

ವೈದ್ಯ– “ಅವರು ಎಂದರೆ ಯಾರು“

ಸುಭದ್ರೆ_-ಇನ್ನಾ ರು? ನನ್ನ ಕಣ್ಣೆದುರಿಗೆ ಇದುವರೆಗೂ ನಿಂತಿದ್ದವರು.

ವೈದ್ಯ_-ಅವರಾರು?

ಸುಭದ್ರೆ– ನಾನು ಹೇಗೆ ಹೇಳಲಿ?

ವೈದ್ಯ-ನಿಮ್ಮ ಭರ್ತನೆ ?

ಸುಭದ್ರೆ ಸುಮ್ಮನಿದ್ದಳು.

ವೈದ್ಯ – ಅವರ ಹೆಸರೇನು ?

ಸುಭದ್ರೆ–ಹೇಗೆ ಹೇಳಲಿ ?

ವೈದ್ಯ—ನಾನು ಹೇಳುತ್ತೇನೆ ಕೇಳಿ, “ಮಾಧವರಾಯರು. “?

ಸುಭದ್ರೆ- ಆಶ್ಚರ್ಯದಿಂದ) ನಿಮಗೆ ಯಾರುಹೇಳಿದರು?

ವೈದ್ಯನು —(ತನ್ನಷ್ಟಕ್ಕೆ ತಾನೆ) “ಇದುವರೆಗೂ ಕಾಣದ ನಗುವು ಈಗ ತೋರಿಬರುತ್ತಿದೆ. . ನಾನು. ಇಷ್ಟನ್ನು ಕಂಡು ಹಿಡಿಯಲಾರದೆ ಹೋದೆನಲ್ಲಾ –ಎಂತಹ ಮೂಢ!“ ಎಂದಂದುಕೊಂಡು. ಸುಭದ್ರೆಯ ಪ್ರಶ್ಕೆ ಗೆ ಉತ್ತರವಾಗಿ “ಅವರೇ” ಎಂದನು.

ಸುಭದ್ರೆ—ಅವರನ್ನೆಲ್ಲಿ ನೋಡಿದ್ದಿರಿ! “

ವೈದ್ಗ — ಇಲ್ಲಿಯೇ !

ಸುಭದ್ರೆ-ಅವರೇತಕ್ಕೆ ಇಲ್ಲಿಗೆ ಬರುವರು ? ಕುಚೋದ್ಯ ಮಾಡುತ್ತೀರಾ?

ವೈದ್ಯ—ಈಗ ಮಾಯಾಮಂತ್ರಮಾಡಿ ಅವರನ್ನು ನಿಮ್ಮೆ ದು ರಿಗೆ ಬರುವಂತೆಮಾಡಲೆ!

ಸುಭದ್ರೆ -ಎಲ್ಲಿ ನೋಡೋಣ

ವೈದ್ಯ —ನೀವು ಎದ್ದು ಕೂತುಕೊಳ್ಳಿ….ಸರಿ.. ಹಾಗೆ…. ಕಣ್ಣುಮುಚ್ಚಿಕೊಳ್ಳಿ ಈಗ ನಾನು ಮಂತ್ರಮಾಡುತ್ತೇನೆ. ಒಂದು, ಎರಡು, ಮೂರು,ಎಂದಕೂಡಲೆ ಕಣ್ಣುಬಿಡಬೇಕು ಅದಕ್ಕೆ ಮುಂಚೆ ಬಿಟ್ಟರೆ ಎಲ್ಲವೂ ಮಾಯವಾಗುವುದು.

ಸುಭದ್ರೆ_ಇದೇನೋ ಬ್ರಾಹ್ಮಣಿತಿಯು ಗಂಡನಿಗೆ ವಡೆ ಮಾಡಿಕೊಟ್ಟ ಕಥೆಯಂತಿದೆ.

ವೈದ್ಗ–ಒಂದು ಸಾರಿ ನನ್ನನ್ನು ಪರೀಕ್ಷೆ ಮಾಡಿ ನೋಡಿದರೆ ನನ್ನ ಮಂತ್ರದ ಮಹಿಮೆಯು ಗೊತ್ತಾಗುವುದು.

ಸುಭದ್ರೆಯುಎದ್ದು ದಿಂಬನ್ನೊರಗಿಳಕೊಂಡು ಕುಳಿತಳು, ಎರಡು ಕೈಗ ಳಿಂದಲೂಕಣ್ಣು ಗಳನ್ನು ಮುಚ್ಛಿ ಕೊಂಡಳು. ವೈದ್ಯನು, “ಹುಂ ! ಮಹಂಕಾಳಿ ! ಚಂಡಿ! ಚಾಮುಂಡಿ ” ಹ್ರೀಂ, ಹ್ರೂಂ, ಪಟಪಟ ಝುಂಕಾರಧ್ವನಿಭೈರವಿ, ನನ್ನ ಇಷ್ಠಾರ್ತವನ್ನು ನೆರವೇರಿಸು“ ಎಂದು, ಸುಭದ್ರೆಯನ್ನು ಕುರಿತು “ಸುಭದ್ರಾಬಾಯಿ! ಒಂದು, ಎರಡು, ಮೂರು. ಎಂದು ಚಿಟಿಕಿಯನ್ನು ಹೊಡೆದನು. ಸುಭದ್ರೆಯು ಕಣ್ದೆ ರೆಯಲಾಗಿ ತನ್ನ ಪ್ರಾಣಸ್ಕ್ರರೂಪನಾದವನೆ ಸ್ವಯಂ ನಿಂತಿದ್ದನು. ಸುಭದ್ರೆಯು ತನ್ನ ಕಣ್ಣನ್ನೆ ತಾನು ನಂಬಲಾರದೆ ಹೋದಳು. ಹಾಗೆಯೆ ಪತಿಯ ಬಾಹುಗಳು ಸ್ಪರ್ಶವಾದುದರಿಂದ ಕನಸಲ್ಲವೆಂದೂ ವ್ಯಕ್ತವಾ ಯಿತು. ದಂಪತಿಗಳಿಬ್ಬರೂ ಆನಂದಾತಿಶಯದಿಂದ ಅವಾಕಕ್ಕಾದರು. ಸುಭದ್ರೆಯು ಆಹಾರನಿದ್ರೆಗಳಿಲ್ಲದೆ ಬಹಳ ಬಡವಾಗಿದ್ದರೂ ಅವಳ ಸೌಂ ದರ್ಯವು ಸ್ನಲ್ಲವೂ ಕಡಿಮೆಯಾಗಿರಲಿಲ್ಲ. ತಲೆಯನ್ನು ಬಾಚಿಕೊಂಡು ಏಷ್ಲೋ ದಿನಗಳಾಗಿ ಹೋಗಿದ್ದುವು. ಹಳೆಯದಾದ ಮಾಸಲು ಬಣ್ಣದ ಸೀರೆಯನ್ನುಟ್ಟಿದ್ದಳು. ಆಭರಣದ, ಸೊಲ್ಲೇ ಇಲ್ಲ. ಹೀಗಿದ್ದ ರೂ ಆ ವಿಶಾಲವಾದ ಕಾಂತಿಯುಳ್ತವಾದ ನೇತ್ರದ್ವೆಯವೂ, ಶುಭ್ರ ವಾದ ದಂತ ಪಂಕ್ತಿಯೂ, ವಿಶಾಲವಾದ ಹಣೆಯೂ, ನಸುನೀಟ ವಾದ ಮೂಗೂ, ಮೇಲಾಗಿ, ಸ್ಕ್ರರ್ಣಕಾಂತಿಗೆ, ಸಮವಾದ ಶರೀರ ಕಾಂತಿಯೂ ಎಂತಹ ವಿರಕ್ತನನ್ನಾ ದರೂ ಮರುಳುಮಾಡುವಂತಿ ದ್ದುವು. ಮಾಧವನ್ನು ತಾನೇ ಧನ್ಯನೆಂದುಕೊಂಡನ್ನು ವೈದ್ಯನು “ನಾನೆಲ್ಲಿಯೂ ಇಂತಹ ಯುಗ್ಮವನ್ನು ನೋಡಲಿಲ್ಲ“ ಎಂದಂದು ಕೊಂಡು, ಮಾಧವನನ್ನು ಕುರಿತು , “ರಾಯರೆ ! ನಾನು ಇನ್ನು ಸ್ವಲ್ಪ ಹೊತ್ತು ಬಿಟ್ಟುಕೊಂಡು ಬರುತ್ತೇನೆ. ಇಲ್ಲಿಯೇ ಇರೋಣಾ ಗಲಿ“ ಎಂದು ಹೇಳಿ ಹೋದನು .

ಸುಭದ್ರೆಯೂ ಮಾಧನನೂ ಏನೇನುಮಾತಾಡು ತ್ತಿದ್ದ ರೋ ನಾವರಿಯಿವು. ಸುಭದ್ರೆಯು ತನ್ನ ಕಷ್ಟಗಳನ್ನೆಲ್ಲಾ ಹೀಳಿಕೊಂಡಿರಬ ಹುದು. ಮಾಧವನೂ ತಾನು ಪಂಡರಾಪುರವನ್ನು ಬಿಟ್ಟು ಹೊರಟ ಮೇಲೆ ನಡೆದು ದೆಲ್ಲನನ್ನೂ ತಿಳಿಸಿರಬಹುದು. ಸ್ವಲ್ಪ ಹೊತ್ತು ಕಳೆದ ಅನಂತರ ಗಂಗಾಬಾಯಿ, ಶಂಕರರಾಯ, ನವಾಬ, ಈ ಮೂರು ಜನವೂ ಆಸ್ಪತ್ರೆಗೆ ಬಂದು ದಂಪತಿಗಳದುರಿಗೆ ನಿಂತರು. ಅವರನ್ನು ವೈದ್ಯನು ಕರೆಯಕಳುಹಿಸಿದ್ದನು. ಸುಭದ್ರೆಗೆ ಅವರನ್ನು ಕಂಡೊಡನೆಯೆ ಎಲ್ಲಿಂದ ಲೋ ಹೊಸ ಶಕ್ತಿಯುಂಟಾಯಿತು.. ಸರಾಗವಾ[\, ಎದ್ದುಕೂರಲಾರದವಳು ಮಂಚದಿಂದ ಕೆಳಗೆ ಜಗ್ಗನೆ ಇಳಿದು ಮೊದಲುಶಂಕರರಾಯ ನಿಗೂ, ಅನಂತರ ಗಂಗಾಬಾಯಿಗೂ ನಮಸ್ಥಾ ರ ಮಾಡಿದಳು. ಇದ ನ್ನೆ ಲ್ಲಾ ನೋಡುತ್ತಿದ್ದ ವೈದ್ಯನಿಗೆ ಪರಮಾಶ್ಚರ್ಯವುಂಟಾಯಿತು. “ಮನಸ್ಸಿನ ಶಕ್ತಿಯ ಮುಂದೆ ಔಷಧದ ಶಕ್ತಿ ಎಷ್ಟರದು?“ ಎಂದನು. ಶಂಕರರಾಯನು ಸುಭದ್ರೆಯ ರೂಪಲಾವಣ್ಯವನ್ನು ನೋಡಿ ಮುಗ್ಧ ನಾದನು. “ಮನೆಗೆ ಮಹಾಲಕ್ಸ್ಮೀ ಸ್ವರೂಪಳಾದವಳ ಮೇಲೆ ನಿಷ್ಕಾ ರಣವಾಗಿ ದ್ವೇಷಮಾಡಿ ಅಮೃತವನ್ನು ವಿಷಮಾಡಿಕೊಂಡಿ ದದೆನಲ್ಲಾ ! ಭಗವಂತನ . ಕರುಣೆಯು ಅಪರಿಮಿತವಾದುದು“ ಎಂದಂದುಕೊಂಡನು.

ಮುಖ್ಯವೈದ್ಗನು ಆಸ್ಪತ್ರೆಯಿಂದ ಸುಭದ್ರೆಯನ್ನು ಕರೆದು ಕೊಂಡು ಹೋಗಬಹುದಿಂದೂ, ಅಳೆಗೆ ಸ್ವಲ್ಪ ಸರಿಯಾದ ಆಹಾರ, ವಿಶ್ರಾಂತಿಗಳನ್ನು ಕೊಟ್ಟರೆ ಒಂದು ವಾರದೊಳಗೆ ಸಂಪೂರ್ಣವಾಗಿ ಗುಣವಾಗುವುದೆಂದೂ ಹೇಳಿದನು, ಅದರಂತೆಯೆ ಸುಭದ್ರೆಯನ್ನು ಕರದುಕೊಂಡುಹೋದರು.
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...