Home / ಕಥೆ / ಕಾದಂಬರಿ / ಸುಭದ್ರೆ – ೪

ಸುಭದ್ರೆ – ೪

ರಾಮರಾಯನು ರಾಮವುರದಲ್ಲಿ ಅಗ್ರಗಣ್ಯನಾದ ಮನುಷ್ಯ ; ದೊಡ್ಡ ಮನೆತನಕ್ವೆ ಸೇರಿದವನು. ತನ್ನ ಮಗಳನ್ನು ಅನುರೂಪನಾದ ವರನಿಗೆ ಕೊಟ್ಟು ಮದುವೆ ಮಾಡಬೇಕೆಂಬ ಆಶೆ ಯಿದ್ದಿತು. ಶಂಕರರಾಯನಿಗೂ ರಾಮರಾಯನಿಗೂ ಪೂರ್ವದಿಂದ ಲೂ ಸ್ನೇಹ, ಅಲ್ಲದೆ ಸ್ವಲ್ಪ ಬಂಧುತ್ವವೂ ಇದ್ದಿತು. ಆದುದರಿಂದ ಕಮಲೆಯನ್ನು ಮಾಧವನಿಗೆ ತಂದುಕೊಳ್ಳಬೇಕೆಂದು ೩-೪ ವರ್ಷಗಳ ಹಿಂದೆಯೆ ಶಂಕರರಾಯನಿಗೆ ಕಾಗದ ಬರೆದಿರಲಾಗಿ ಆತನು, ನಮ್ಮ ಹುಡುಗನಿಗೆ ೨೦ ವರ್ಷ ತುಂಬಿದಲ್ಲದೆ. ಮದುವೆಮಾಡುವುದಿಲ್ಲ ವೆಂದು ಉತ್ತರಕೊಟ್ಟಿದ್ದನು. ಆಗ್ಗೆ ರಾಮರಾಯನು ಸುಮ್ಮನಿದ್ಧು ಬಿಟ್ಟನು. ಹುಡುಗಿಗೆ ೧೨ ವರ್ಷವಾಗಲು, ಇನ್ಸು ‘ನಿಲ್ಲಿಸುವುದ ಕ್ಕಾಗುವುದಿಲ್ಲ, ಈ ವರ್ಷ ಖಂಡಿತವಾಗಿಯೂ ವಿವಾಹವನ್ನು ನೆರ ವೇರಿಸಲೇಬೇಕು` ಎಂದು ತಿರಿಗಿ, ಬರೆದನು. ಶಂಕರರಾಯನಿಗೆ ಸಕಾ ಲವಾಗಿ, ಕಂಡುದರಿಂದಲೂ, ರಾಮರಾಯನಿಗಿಂತ ಯೋಗ್ಯರೂ, ಕುಲೀನರೂ ಸಿಕ್ಕುವುದು ಕಷ್ಟವಾಗಿದ್ದುದರಿಂದಲೂ – “ನಮ್ಮ ಹುಡುಗನು ರಾಮ ಪುರಕ್ವೆ ಬಂದಿದ್ದಾನೆ, ಅವನಿಗೆ ವಯಸ್ಸಾಗಿರು ವುದರಿಂದ ಕನ್ಯೆಯನ್ನೊವ ಭಾರವು ಅವನದಾಗಿದೆ, ಅವನೊ ಪ್ಪಿದರೆ ನನ್ನ ಅಡ್ಡಿಯೇನೂ ಇಲ್ಲ. ನಕ್ಷತ್ರಾನುಕೂಲವಾದರೆ ಸರಿ“. ಎಂದು ಪ್ರತ್ಯುತ್ತರವನ್ನು ಬರೆದನು. ಅದು ಮಾಧವನು ರಾಮ ಪು ರಕ್ಕೆ ಬಂದ ಮಾರನೆಯದಿನ ರಾಮರಾಯನ ಕೈಸೇರಿತು, ಆ˜ಕಾಗದ ವನ್ನು, ತೆಗೆದುಕೊಂಡು ರಾಮರಾಯನು ಮಾಧವನನ್ನು ನೋಡುವು ದಕ್ಕೋಸ್ಕರ ಗಂಗಾಬಾಯಿಯ ಮನೆಗೆ ಹೋದನು. . ಗಂಗಾಬಾ ಯಿಯು ಪಾಠಶಾಲೆಗೆ. ಹೋಗಿದ್ದಳು, ಮಾಧವನೊಬ್ಬನೇ ಮನೆಯ ಲ್ಲಿದ್ದನು. ಮಾಧವನಿಗೂ ರಾಮರಾಯನಿಗೂ ಕುಶಲಪ್ರಶ್ನೆಗಳು ನಡೆದ ಬಳಿಕ ರಾಮರಾಯನು, ಶಂಕರರಾಯನ ಕಾಗದವನ್ನು ತೆಗೆದು ಮಾಧವನ ಕೈಲಿಟ್ಟನು. ಅದನ್ನು ನೋಡಿದಕೂಡಲೆ ಮಾಧವನು “ಸ್ವಾಮೀ ! ನಮ್ಮ ತಂದೆಗಳ ಮಾತಿಗೆ ನಾನುಯಾವಾಗಲೂ ಪ್ರತಿ ಹೇಳುದುದಿಲ್ಲ. ಇದರಲ್ಲಿ ನನಗೆ ಅಭಿಪ್ರಾಯವು ಅನ್ಯಥಾ ಇದ್ದಾಗ್ಗೂ ಅವರ ಅಪ್ಷಣೆಯಾದರೆ ನನ್ನ ಯತ್ನವೇನಿದೆ” ಎಂದನು. ಅದಕ್ಕೆ ರಾಮರಾಯನು –“ಹಾಗಲ್ಲ, ನಮ್ಮ ಮನೆಗೆ ಬಂದು ಕನ್ಯೆಯನ್ನು ನೋಡಿಕೊಂಡು. ಹೋಗುವುದು ಈಗಿನ ಕಾಲದ ಪದ್ಬತಿ. ದಯ ವಿಟ್ಟು ಬಂದು ನೋಡಿಕೊಂಡು ಹೋಗಬೇಕು“ ಎಂದನು. ಮಾಧ ವನು ‘ಮಧ್ಯಾಹ್ನ ಒಂದು ತಮ್ಮ ದರ್ಶನ ತೆಗೆದು ಕೊಳ್ಳುತ್ತೇನೆ“` ಎಂದು ಹೇಳಿ ರಾಮರಾಯನನ್ನು ಕಳುಹಿಸಿಕೊಟ್ಟನು.

ಗಂಗಾಬಾಯಿ ಪಾಠಶಾಲೆಯಿಂದ ಬಂದಕೂಡಲೆ ಮಾಧ ವನ್ನು ಆಕೆಗೆ. ಈ ವೃತ್ತಾಂತವನ್ನು ತಿಳಿಸಿದನು. ಅವಳು –“ಅಪ್ಪಾ ಕಮಲೆಯು ಗರ್ವಿತಳು, ನಿನಗೆ ತಕ್ಕವಳಲ್ಲ, ನಿಮ್ಮ ತಂದೆಯು ರಾಮ ರಾಯನ ಭಾಗ್ಯಕ್ಕೆ ಬೆರಗಾಗಿ ಬಂಧುತ್ವ ಬಳೆಸಬೇಕೆಂದು ಇಷ್ಟ ಪಟ್ಟಿರಬಹುದು,, ಮಧ್ಯಾಹ್ನ ಹೋಗಿ ನೋಡಿಕೊಂಡ್ಲು. ಬಾ. ಮುಂದಿನ ಕೆಲಸ ನೋಡೋಣ” ಎಂದಳು.

ಮಧ್ಯಾಹ್ನ ರಾಮರಾಯನು ಬಂದು ಮಾಧವನನ್ನು ಮನೆಗೆ ಕರೆದುಕೊಂಡು ಹೋಗಿ ಉಪ್ಪರಿಗೆಯಮೇಲೆ “ಸೋಫಾ”ದ ಮೇಲೆ ಕುಳ್ಳಿರಿಸಿದನು. ಅನಂತರ ಹೆಂಡತಿಯನ್ನು ಕರೆದು “ನಿನ್ನ ಅಳಿಯನನ್ನು ನೋಡು ಬಾ” ಎಂದನು. ಆಕೆಯು ಎಷ್ಟಾವೃತ್ತಿ ನೋಡಿದರೂ ತೃಪ್ತಿಯಾಗದೆ ನೆರೆಹೊರೆಯವರನ್ನು ಕರೆದುಕೊಂಡು ಬಂದಳು. ಹಾಗೆಯೆ ಕಮಲೆಯನ್ನು ಮಾಧವನ ಬಳಿ ನಿಲ್ಲಿಸಿ ಅನಂ ತರ ಸೋಘಾದ ಮೇಲೆ ಕುಳ್ಳಿರಿಸಿದರು. ಮಾಧವನಿಗೆ, ಅವಳನ್ನು ನೋಡಿದೊಡನೆಯೆ ಜಿಗುಪ್ಸೆಯುಂಟಾಯಿತು. ಅವಳ ರೂಪಲಾವ ಣ್ಯವೆಲ್ಲವೂ ಉಡಿಗೆ, ತೊಡಿಗೆಗಳನ್ನು ಸೇರಿದ್ದಿತೇ ಹೊರತು ಅವಳಲ್ಲಿ ನೈಜವಾದ ಸೊಬಗಾವುದೂ ಕಂಡುಬರಲಿಲ್ಲ, ಅಲ್ಲದೆ ಮುಖದಲ್ಲಿ ಗರ್ವವು ಉಕ್ಕಿ ಬರುವಂತಿದ್ದಿತು. ಕೂಡಲೆ ಮಾಧವನಿಗೆ ಸುಭದ್ರೆಯ ಜ್ಞಾಪಕವು ಬಂದಿತು. ಆವಳಿಗೂ ಇವಳಿಗೂ ಇರುವ ತಾರತಮ್ಯ ವನ್ನು ಮನಸ್ಸಿನಲ್ಲೆ ಗಣಿಸುತ್ತಿದ್ದನು.

ನೆರಹೊರಿಯ ಹೆಂಗಸರಲ್ಲರೂ ಬಂದು ನೋಡಿ ವರಸಾಮ್ಯ ವನ್ನು ಬಹಳ ಶ್ಲಾಘನೆಮಾಡಿದರು. ಕಮಲೆಯ ತಾಯಿಯ ಸಂ ತೋ ಷವೆಷ್ಟೆಂದು ಹೇಳಬೇಕಾದುದೇ ಇಲ್ಲ. ಬಂದಿದ್ದವರೆಲ್ಲರಿಗೂ ಯಥೋಚಿತವಾಗಿ ಸತ್ಕಾರಮಾಡಿ ಕಳುಹಿಸಿದಳು.. ಮಾಧವನೂ ರಾಮರಾಯನ ಅಪ್ಪಣೆ ತೆಗೆದುಕೊಂಡು. ಹೊರಟುಹೋದನು.
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...