Home / ಕವನ / ಕವಿತೆ / ಮಲಾಲಾಳ ಮನದಾಳ (ಕಾಬೂಲಿವಾಲಾ ನೆನಪಿಸಿ)

ಮಲಾಲಾಳ ಮನದಾಳ (ಕಾಬೂಲಿವಾಲಾ ನೆನಪಿಸಿ)

ಹೊಟ್ಟೆಪಾಡಿಗೆ ದೂರದೇಶ ತಿರುಗಿ
ಮಿಠಾಯಿ ಮಾರಿ ಮಕ್ಕಳಿಗೆ ಕಥೆ ಹೇಳಿ
ನಗಿಸಿ ಅವರೊಳಗೆ ನನ್ನ ಕಂಡು
ಮಗಳು ಹೇಗಿದ್ದಾಳೋ ಎಂದಂದು
ಕರುಳು ಕತ್ತರಿಸಿದನುಭವಕೆ ಕಣ್ಣೀರು ಸುರಿಸಿ
ಭಾವನೆಗಳನ್ನೊತ್ತಿ ಗಂಟಲು ಬಿಗಿದದ್ದು…

ಅದೊಂದು ಸುಂದರ ಬೆಳಗು ನಮಗಾಗಿ
ಹಿಂದಿರುಗಿ ಬಂದೆಯಲ್ಲಪ್ಪ ನಮ್ಮೂರಿಗೆ

ದ್ರಾಕ್ಷಿ ಬದಾಮು ಖರ್ಜೂರು ಮಾರುವ
ಕೈಗೇತಕ್ಕೆ ಈಗ ಬಂದೂಕು ಗುಂಡುಗಳ ಸರಮಾಲೆ
ಯಾಕಿಷ್ಟೊಂದು ಕಠೋರ; ಅಪ್ಪಾ ಹೆದರಿ ಗುಬ್ಬಚ್ಚಿಯಾಗಿದ್ದೇನೆ.
ಸಿಹಿಯಾಗಿರುವ ನೀನು ಯಾಕಿಷ್ಟೊಂದು ವಿಷವಾದೆ.

ಈ ಹಾದಿ ಈ ಅಟ್ಟಹಾಸ ಬೇಡವೆಂದೆ
ಪ್ರಯತ್ನಿಸಿದೆ ಬಂದೂಕು ಕಿತ್ತೆಸೆಯಲು
ದೇವರೇ ನನ್ನಪ್ಪನಿಗೆ ಬುದ್ಧಿ ಕೊಡೆಂದೆ
ಪ್ರಾರ್ಥಿಸಿದ ಮೊಳಕಾಲೂರಿ ಬೇಡಿಕೊಂಡೆ
ಬದಲಾಗಿ ನನಗೆ ಓದಿಸಪ್ಪ; ಹಲುಬಿ ಹಂಬಲಿಸಿದೆ.

ಹಾಳು ಹೆಣ್ಣಿಗೆ ಅಕ್ಷರ ಓದು ಕೇಡೆಂದು
ನನ್ನೆದೆಗೆ ಗುಂಡಿಟ್ಟೆಯಲ್ಲಪ್ಪ…

ಬದುಕಿದ್ದೇನೆ ಇನ್ನೂ ಕನಸುಗಳ ಹೊತ್ತು
ಬಾಪ್ಪ ಮತ್ತೊಮ್ಮೆ ಮಿಠಾಯಿ ಮಾರು ಬಾ
ಬಂದೂಕು ಚೆಲ್ಲು ಮಾನವೀಯತೆ ಮೆರೆ
ನೋಡಪ್ಪ ನಾನು ನಿನ್ನ ಮಗಳು ಮಲಾಲಾ
ನನ್ನೊಂದಿಗೆ ನೀನು ನಿನ್ನೊಂದಿಗೆ ನಾನಿದ್ದು
ವಿಶ್ವಶಾಂತಿಗೆ ಕೈಜೋಡಿಸೋಣ ಬಾಪ್ಪ
ಬಾ ಬಾ ನನ್ನಪ್ಪ ಹೃದಯವಂತನಾಗು ಅಪ್ಪಾ.
*****
(ವಿಶ್ವಶಾಂತಿಗಾಗಿ ನೊಬೆಲ್ ಪ್ರಶಸ್ತಿ ಪಡೆದ ಅತೀ ಚಿಕ್ಕವಯಸ್ಸಿನ ಹುಡುಗಿ ಪಾಕಿಸ್ತಾನ (ಅಪಘಾನಿಸ್ತಾನ)ದವಳು. ಹೆಣ್ಣುಮಕ್ಕಳಿಗೆ ಸ್ವಾತಂತ್ರ್ಯ ಮತ್ತು ಶಿಕ್ಷಣಕ್ಕೆ ವಿರೋಧವಿರುವ ಉಗ್ರರಿಂದ ಗುಂಡೇಟಿಗೆ ಬಲಿಯಾಗಿ ಬದುಕಿ ಉಳಿದು ಹೆಣ್ಣುಮಕ್ಕಳ ಹಕ್ಕಿಗಾಗಿ ಹೋರಾಡುತ್ತಿದ್ದಾಳೆ.)

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...