Home / ಲೇಖನ / ವಿಜ್ಞಾನ / ಮಾನವ ಜೀವ ಸೃಷ್ಠಿಯಾದದ್ದೂ ಸಮುದ್ರ ಬಂಡೆಯ ನಡುವೆ

ಮಾನವ ಜೀವ ಸೃಷ್ಠಿಯಾದದ್ದೂ ಸಮುದ್ರ ಬಂಡೆಯ ನಡುವೆ

ಜೀವಾಣುಗಳ ಸಂಗಮಿಕೆಯಿಂದ ಈ ಜೀವ ಭೂಮಿಯ ಮೇಲೆ ಸೃಷ್ಠಿಯಾಯಿತೆಂದು ಅನೇಕರ ವಾದ. ಆದರೆ ಈ ಜೀವಸೃಷ್ಟಿ ಮಹಾಸಾಗರದ ತಳದಲ್ಲಿ ಕಾಣಿಸಿಕೊಂಡಿದ್ದ ಬಿರುಕುಗಳಿಂದ ಬರುವ, ಕರಗಿದ ಬಂಡೆಗಳಿಂದ ಕುದಿಯುವ ನೀರಿನಲ್ಲಿ ಈ ಜೀವ ಸೃಷ್ಟಿಗೊಂಡಿತೆಂದು ಇತ್ತೀಚೆಗೆ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಈ ನೀರಿನಲ್ಲಿ ಪ್ರಾಣವಾಯು ಏನೂ ಇರಲಿಲ್ಲ. ಅದರಲ್ಲಿ ಜಲಜನಕ ಸಲ್ಪ್ರೇಡ್ ಇತ್ತು. ಇಂಧನವು ಕೊಳೆತ ಮೊಟ್ಟೆಯಂತೆ ದುರ್ವಾಸನೆಯಿಂದ ಕೂಡಿತ್ತು ಈ ನೀರಿನಿಂದ ಅಲ್ಲಿಯ ಕಲ್ಲಿನಿಂದ ಅಗ್ನಿದಿಕ್ಷೆಯಾಗಿ ಆ ಬಂಡೆಯಲ್ಲಿ ಗಂಧಕ ಇದ್ದುದರಿಂದ ತಳವು ಗಂಧಕ ಮಯವಾಗಿತ್ತು. ಈ ಸ್ಥಳದಲ್ಲಿ ಪ್ರಥಮ ಜೀವಾಣು ರೂಪುಗೊಂಡಿತು.

ಆರಂಭದ ಕಾಲದಲ್ಲಿ ಜೀವರಾಶಿಗಳು ತಮ್ಮ ಶಕ್ತಿ ಅವಶ್ಯಕತೆಗಳನ್ನು ಜಲಜನಕ ಸೆಲ್ಫೈಡ್‌ಗಳಿಂದ ಪಡೆದುಕೊಂಡವು. ಈ ಕಾಲದ ಹಸಿರು ಸಸ್ಯಗಳು ಅದೇ ರೀತಿ ತಾವು ಬದುಕುವುದಕ್ಕೆ ಬೇಕಾದ ಸಕ್ಕರೆಯನ್ನು ನಿರ್ಮಿಸಿಕೊಳ್ಳುತ್ತವೆ. ನೀರು ಹೈಡ್ರೋಜನ್ ಆಕ್ಸೈಡ್‌ನಿಂದ ಕೂಡಿತ್ತು ಜತೆಗೆ ಕಾರ್ಬನ್ ಡೈ ಆಕ್ಸೈಡ್ ಕೂಡ ಇತ್ತು. ಜೀವನಿರ್ಮಾಣಗೊಳ್ಳುವುದಕ್ಕೆ ಹೆಚ್ಚು ಅತ್ಯಾಧುನಿಕವಾದ ರಸಾಯನದ ಕ್ರಿಯೆ ಬೇಕಾಗುತ್ತದೆ. ಅದು ಯುಗಗಳಿಂದ ಯುಗಗಳವರೆಗೆ ನಡೆದುಕೊಂಡು ಬಂದಿರುತ್ತದೆ. ಜೀವರಾಶಿಯು ೩೮೦ ಕೋಟಿ ವರ್ಷಗಳ ಹಿಂದೆ ಈ ಭೂಮಿಯ ಮೇಲೆ ಕಾಣಿಸಿಕೊಂಡ ಕಾಲದಿಂದಲೂ ಇಲ್ಲಿಯ ಜೀವ ಪರಿಸ್ಥಿತಿಯು ನಾಟಕೀಯ ರೀತಿಯಿಂದ ಬದಲಾವಣೆಗೊಂಡಿದೆ. ಆದರೆ ಜೀವ ಇಂದಿಗೂ ಸಮುದ್ರ ಕೆಳಗೆ ಜ್ವಾಲಾಮುಖಿಗಳಿಂದ ಬದುಕಿ ಉಳಿದಿದೆ. ಜೀವವನ್ನು ಪೋಷಣೆ ಮಾಡುವ ಕ್ರಿಮಿಗಳಿಗೆ ಭಾರಿ ಹೆಚ್ಚಿನ ಉಷ್ಣತಾಮಾನ ಬೇಕಾಗುತ್ತದೆ. ಅದು ಬಂಡೆಗಳ ರಾಸಾಯನಿಕ ಶಕ್ತಿಯಲ್ಲಿದೆ ಎಂದು ವಿಜಾನಿಗಳು ಹೇಳುತಾರೆ.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...