Home / ಕವನ / ಕವಿತೆ / ಕಾವಲುಗಾರ

ಕಾವಲುಗಾರ

ಜಗದ ಕಾವಲುಗಾರ
ನಿದ್ರಿಸಿದ್ದಾನೆ-
ಕುಂಭಕರ್ಣನಂತೆ!
ಇಲ್ಲಿಗೆ ಯಾರೂ ಬರಬಹುದು
ಇಲ್ಲಿಂದ ಯಾರೂ ಹೋಗಬಹುದು
ಇಲ್ಲಿ ಏನೂ ನಡೆಯಬಹುದು
ಕಾವಲುಗಾರ ನಿದ್ರಿಸಿದ್ದಾನೆ-
ಕುಂಭಕರ್ಣನಂತೆ!
ಕನ್ನ ಹಾಕಬಹುದು,
ಎಲ್ಲ ದೋಚಬಹುದು
ಕೊಚ್ಚಿ ಹಾಕಬಹುದು
ದಂಗೆ ಎಬ್ಬಿಸ ಬಹುದು
ಅತ್ಯಾಚಾರ ಮಾಡಬಹುದು
ಬಲಾತ್ಕಾರ ಮಾಡಬಹುದು
ಕಾವಲುಗಾರ ನಿದ್ರಿಸಿದ್ದಾನೆ-
ಕುಂಭಕರ್ಣನಂತೆ!
ಅವನಿಗೆ
ಕಿವಿ ಕೇಳಿಸುವುದಿಲ್ಲ.
ಕಣ್ಣು ಕಾಣಿಸುವುದಿಲ್ಲ
ಹೃದಯ ಮಿಡಿಯುವುದಿಲ್ಲ
ಇಲ್ಲೇನಾದರೂ ಯೋಚನೆಯಿಲ್ಲ
ನಿಶ್ಚಿಂತನಾಗಿ ನಿದ್ರಿಸಿದ್ದಾನೆ-
ಕುಂಭಕರ್ಣನಂತೆ!
ಜಗವ ಕಾಯುವವರಿಲ್ಲ
ಮಲಗಿರುವ ಕಾವಲುಗಾರನ
ಎಬ್ಬಿಸುವವರಿಲ್ಲ.
ಕಾವಲುಗಾರ ಎಚ್ಚರಿದ್ದರೆ ತಾನೆ
ಜೀವನದಲ್ಲಿ ಭದ್ರತೆ.
ಸುಖ, ಶಾಂತಿ, ನೆಮ್ಮದಿ?
ಕಾವಲುಗಾರ ನಿದ್ರಿಸಿದ್ದಾನೆ
ನಿಶ್ಚಿಂತೆಯಿಂದ
ಕುಂಭಕರ್ಣನಂತೆ!
*****

Tagged:

Leave a Reply

Your email address will not be published. Required fields are marked *

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...