Home / ಬಾಲ ಚಿಲುಮೆ / ಕವಿತೆ / ಪರಿವರ್ತನೆ

ಪರಿವರ್ತನೆ

ಸಿದ್ಧನ ಅಪ್ಪ
ಅವನು ಬೆಪ್ಪ
ಹಗಲಿಡೀ ಮೈಮುರಿ ದುಡಿಯುವನು
ಹಗಲು ಮಲಗಲು
ಚಂದ್ರನು ನಗಲು
ಗಪ್ಪನೆ ಗಡಂಗಿಗೆ ಹೊರಡುವನು

ಕಂಠ ಪೂರ್ತಿ
ಕುಡಿದು ಭರ್ತಿ
ಓಲಾಡುತ ಮನೆಗೆ ಬರುವನು
ಹೆಂಡತಿ ಮಕ್ಕಳ
ಬಡಿದು ಗೋಳು
ಹೊಯ್ದುಕೊಳುತ ಕೂಗಾಡುವನು

ಗಲಾಟೆ ಗದ್ದಲ
ರಸ್ತೆ ಉದ್ದಗಲ
ಕೇಳುವ ಜನರಿಗೆ ಮೋಜಾಗುವುದು
ಅಕ್ಕ ಪಕ್ಕದ
ಮನ ಮಠದ
ಜನರಿಗದು ಕಿರಿ ಕಿರಿ ಮಾಡುವುದು

ಸಿದ್ಧನು ಶಾಲೆಗೆ
ಹೋಗಲು ಅಲ್ಲಿಗೆ
ಮಕ್ಕಳು ಅವಪ್ಪನ ಛೇಡಿಸಿ ನಗುವರು
ಅವಮಾನಿತ ಸಿದ್ಧ
ಮನೆಗೆ ಬಂದ
ನೊಂದು ತಾಯಿಗೆ ಕೊಡುವನು ದೂರು

ಅಮ್ಮಾ ಅಪ್ಪನು
ಏಕ ಕುಡಿವನು?
ಅದರಿಂದ ಆರೋಗ್ಯ ಕೆಡುವದಂತಲ್ಲ
ಕರುಳಲಿ ತೂತು
ಕಿಡ್ನಿಯು ಕೊಳೆತು
ಬಳಲಿ ಬಳಲಿ ಬೇಗ ಸಾಯುವರಂತಲ್ಲ

ಕುಡಿತದ ಚಟವ
ಬಿಡಿಸೋ ಭಾರವು
ನಿನ್ನದು ಅಪ್ಪನ ಪತ್ನಿಯೇ ನೀ ಕೇಳು
ಅಪ್ಪನು ಸತ್ತರೆ
ದಿಕ್ಕಾರು ಆಸರೆ
ಸನ್ಮಾರ್ಗದಿ ನಡೆಯಲು ನೀ ಹೇಳು

ಸಿದ್ಧನು ಹೇಳಿದ
ವಿಷಯ ಕೇಳಿದ
ಅವನಪ್ಪನು ಕುಡಿತವನು ಬಿಟ್ಟುಕೊಟ್ಟ
ದುಡಿದ ಹಣವನು
ಬ್ಯಾಂಕಲಿ ಅವನು
ಕೂಡಿಡುತ್ತಲೇ ಸಿದ್ಧನನು ಓದಿಸಿಬಿಟ್ಟ.

ಬೆಳೆದನು ಸಿದ್ಧ
ಹಣವನ್ನು ಗಳಿಸಿದ
ಮುಪ್ಪಿನ ಮಾತಾ ಪಿತರನು ಸಾಕಲು
ಆ ದಿನ ನೆನಪು
ಮಗನ ಕದಪು
ನೇವರಿಸುತ ಸೂಸುವ ಹರ್ಷದ ಹೊನಲು
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...