ಇರುವೆ

ಇರುವೆ ಇರುವೆ ಎಲ್ಲಿರುವೆ?
ನೆಲದಲಿ ಹುತ್ತದಲಿ ನಾನಿರುವೆ

ಸಣ್ಣನೆ ಕಪ್ಪನೆ ಇರುವೆ
ನಿನಗೆ ಆಪರಿ ವೇಗವೇ?
ಮೈಯಲಿ ಬುಳು ಬುಳು ಓಡುವೆ
ಕಚ್ಚದೆ ಕರುಣೆಯ ತೋರುವೆ

ರಾಜ ರಾಣಿ ಜೊತೆಗೆ ಸವಾರಿ
ಅನ್ನವ ಅರಸುತ ಹೊರಡುವಿರಿ
ಶಿಸ್ತಿನ ಶಿಪಾಯಿ ತರಹ ನಿಮ್ ಪರಿ
ನೋಡಿ ಅರಗಾಗುವವು ವೈರಿ ಪಡೆ

ನಿಮ್ಮಯ ತೂಕಕ್ಕಿಂತ ಹೆಚ್ಚಿನ ಭಾರ
ಹೊತ್ತು ನೀವು ಎಲ್ಲಿಗೋ ನಡೆವಿರಿ
ನಿಮ್ಮಯ ಬದುಕು ಮೂರು ತಿಂಗಳು
ಆರು ತಿಂಗಳಿನ ಅನ್ನದ ತಿರುಳು?

ನಿಮ್ಮಯ ಬುದ್ಧಿ ನಮಗಿದ್ದಿದ್ದರೆ
ಫೇಲು ಮಾತು ನಮ್ಮಲ್ಲಿರಲಿಲ್ಲ
ಸತತೋದ್ಯೋಗ ನಮದಾಗಿದ್ದರೆ
ನಮ್ಮ ದೇಶ ಹೀಗಿರುತ್ತಿರಲಿಲ್ಲ

ಕೆಂಪು ಕೆಂಪನೇ ಕಂಜಿರುವ
ತಲೆ ತಗ್ಗಿಸಿಯೇ ನೀ ನಡೆವೆ
ಶಿಸ್ತು ಸಂಯಮ ನಿಮಗಿಲ್ಲವೇ?
ಸುಮ್ಮನೇ ಕಚ್ಚಿ ನೋಯಿಸುವೆ

ಕಪ್ಪನೆಯ ಗೊದ್ದ, ಕಟ್ಟಿರುವೆ
ಎರೆಮಣ್ಣಲ್ಲವೇ ನಿನ್ನಯ ಠಾವು?
ದಪ್ಪನೆ ಕಣ್ಣು ಉದ್ದ ಮೀಸೆಯ
ಮುಟ್ಟಲು ಖಂಡಿತ ಹೆದರುವೆನು

ಬಿದ್ದರೆ ಸಾಕು ಬೆಲ್ಲದ ವಾಸನೆ
ನುಗ್ಗಿ ಬರುವಿರಿ ಆನೆಯೋಪಾದಿ
ಮೀಸ ಕುಣಿಸುತ ಮುಕುರುವಿರಿ
ಮಕರಂದವ ಹೀರಿ ಸಾಯುವಿರಿ

ಮುಟ್ಟಿದರೆ ಮುನಿಗಳೇ ನೀವು
ಕಚಕ್ಕನೆ ಕಚ್ಚಲು ಭಾರಿ ನೋವು
ಬೇರ್ಪಟ್ಟರೂ ರುಂಡ ಮುಂಡಗಳು
ನಂದವು ನಿಮ್ಮಯ ಸೇಡಿನ ಕಿಡಿಗಳು

ಹಾರುವ ಹೋರುವ ಪುಕ್ಕದ ಇರುವೆ
ಗಿಡಗಳಲಲ್ಲವೇ ನಿಮ್ಮಯ ಇರವು
ಹಾರುತಲೇ ಮೇಲೆ ಕೆಳಗೆ ಬೀಳುವೆ
ಆ ಕೋಪಕೆ ನಮ್ಮನು ಕಚ್ಚಿಬಿಡುವೆ

ಸತ್ತ ವಾಸನೆ ಬಡಿದರೆ ನಿಮಗೆ
ಜಾತ್ರೆ-ಸಂತೆಗಳ ನೆನಪಾಗುವುದು
ನಿಮ್ಮಯ ಆ ಗುಣ ನಮಗೇಕಿಲ್ಲವೋ
ಇದ್ದರೆ ದಾರಿದ್ರ್ಯ ಇರಲಿಲ್ಲವೇನೋ
*****

Tagged:

Leave a Reply

Your email address will not be published. Required fields are marked *

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...