Home / ಲೇಖನ / ಇತರೆ / ವಚನ ವಿಚಾರ – ಸಾವು?

ವಚನ ವಿಚಾರ – ಸಾವು?

ಕೆಂಡದ ಗಿರಿಯ ಮೇಲೊಂದು ಅರಗಿನ ಕಂಭವಿದ್ದಿತ್ತು.
ನೋಡಾ ಅಯ್ಯಾ
ಅರಗಿನ ಕಂಭದ ಮೇಲೊಂದು ಹಂಸೆ ಇದ್ದಿತ್ತು
ಕಂಭ ಬೆಂದಿತ್ತು ಹಂಸೆ ಹಾರಿತ್ತು
ಗುಹೇಶ್ವರಾ

ಅಲ್ಲಮನ ವಚನ. ಈ ವಚನ ಅನೇಕ ವರ್ಷಗಳ ಹಿಂದೆಯೇ, ಅದು ಅರ್ಥವಾಗುವುದಕ್ಕೆ ಮೊದಲೇ, ಮನಸ್ಸಿನಲ್ಲಿ ಮನೆಮಾಡಿಕೊಂಡ ವಚನ, ಅರ್ಥ ಏನೇ ಇರಲಿ, ಸ್ಪಟಿಕ ಸ್ಪಷ್ಟವಾದ ಚಿತ್ರವೊಂದನ್ನು ಇದು ಕಟ್ಟಿಕೊಡುತ್ತದೆ.

ಒಂದು ಕೆಂಡದ ಬೆಟ್ಟ. ಕೆಂಡದ ಬೆಟ್ಟದ ಮೇಲೆ ಅರಗಿನ ಕಂಭ, ಅರಗಿನ ಕಂಭದ ಮೇಲೆ ಒಂದು ಹಂಸ. ಅರಗಿನ ಕಂಭ ಬೆಂದು ಹೋಯಿತು. ಅದರ ಮೇಲೆ ಕೂತಿದ್ದ ಹಂಸ ಹಾರಿಹೋಯಿತು.

ಈ ವಚನಕ್ಕೆ ಸಾಂಪ್ರದಾಯಿಕವಾಗಿ ಕೆಂಡದ ಗಿರಿ ಎಂದರೆ ಶಿವನೇ ನಾನು ಎಂಬ ಭಾವ, ಅರಗಿನ ಕಂಭ ಎಂದರೆ ಶರಣನ ಭಾವ, ಹಂಸೆ ಎಂದರೆ ಪರಮಹಂಸ ತತ್ವ ಇತ್ಯಾದಿಯಾಗಿ ವಿವರಿಸುವುದುಂಟು.

ಅದನ್ನೆಲ್ಲ ಬಿಟ್ಟರೂ ಈ ವಚನ ಸಾವನ್ನು ಕುರಿತು ಹೇಳುತ್ತಿದೆಯೋ ಅಥವಾ ಸಾವನ್ನು ವಿವರಿಸುವ ನೆಪದಲ್ಲಿ ಬದುಕಿನ ಚಿತ್ರಕೊಡುತ್ತಿದೆಯೋ ನೋಡಿ.

ಹಂಸವನ್ನು ಜೀವವೆಂದೋ ಆತ್ಮವೆಂದೋ ಒಪ್ಪಿಕೊಳ್ಳೋಣ, ದೇಹವೇ ಅರಗಿನ ಕಂಭ, ಇಡೀ ಬದುಕೇ ಕೆಂಡದ ಬೆಟ್ಟ, ಕೆಂಡದ ಬೆಟ್ಟವಾದ್ದರಿಂದ ಪಕ್ವವಾದರೂ, ಆಗದಿದ್ದರೂ; ಜ್ಞಾನಿಯಾದರೂ ಆಗದಿದ್ದರೂ, ಕಂಭ ಕರಗಿಹೋಗುವುದೇ ನಿಶ್ಚಯ. ಹಾಗೆ ದೇಹ ಕರಗಿದಮೇಲೆ ಜೀವ ಎಲ್ಲಿದ್ದೀತು, ಹಾರಿ ಹೋಯಿತು.

ಬದುಕಿನ ಸ್ಥಿತಿಯ, ದೇಹ ಇಲ್ಲವಾಗುವ ಅನಿವಾರ್ಯತೆಯ, ಸಾವಿನ ಅಪರಿಹಾರ್ಯ ಸ್ಥಿತಿಯ ಮಂಡನೆ ಇದು. ಮಾತಿನಲ್ಲಿ ನಾವು ಹೇಳುವಂತೆ `ಸಾವು ಬರುವುದು’ ಅಲ್ಲ, ಜೀವ `ಹೋಗುವುದು’ ಇಲ್ಲಿನ ಚಿತ್ರ. ಅದು ಉರಿದ ಕಂಬದ ಮೇಲಿನಿಂದ ಹಂಸೆ ಹಾರಿದಷ್ಟೇ ಸಹಜ, ಅನಿವಾರ್ಯ!
*****

Tagged:

Leave a Reply

Your email address will not be published. Required fields are marked *

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...