Home / ಲೇಖನ / ಇತರೆ / ವಚನ ವಿಚಾರ – ಸಾವು?

ವಚನ ವಿಚಾರ – ಸಾವು?

ಕೆಂಡದ ಗಿರಿಯ ಮೇಲೊಂದು ಅರಗಿನ ಕಂಭವಿದ್ದಿತ್ತು.
ನೋಡಾ ಅಯ್ಯಾ
ಅರಗಿನ ಕಂಭದ ಮೇಲೊಂದು ಹಂಸೆ ಇದ್ದಿತ್ತು
ಕಂಭ ಬೆಂದಿತ್ತು ಹಂಸೆ ಹಾರಿತ್ತು
ಗುಹೇಶ್ವರಾ

ಅಲ್ಲಮನ ವಚನ. ಈ ವಚನ ಅನೇಕ ವರ್ಷಗಳ ಹಿಂದೆಯೇ, ಅದು ಅರ್ಥವಾಗುವುದಕ್ಕೆ ಮೊದಲೇ, ಮನಸ್ಸಿನಲ್ಲಿ ಮನೆಮಾಡಿಕೊಂಡ ವಚನ, ಅರ್ಥ ಏನೇ ಇರಲಿ, ಸ್ಪಟಿಕ ಸ್ಪಷ್ಟವಾದ ಚಿತ್ರವೊಂದನ್ನು ಇದು ಕಟ್ಟಿಕೊಡುತ್ತದೆ.

ಒಂದು ಕೆಂಡದ ಬೆಟ್ಟ. ಕೆಂಡದ ಬೆಟ್ಟದ ಮೇಲೆ ಅರಗಿನ ಕಂಭ, ಅರಗಿನ ಕಂಭದ ಮೇಲೆ ಒಂದು ಹಂಸ. ಅರಗಿನ ಕಂಭ ಬೆಂದು ಹೋಯಿತು. ಅದರ ಮೇಲೆ ಕೂತಿದ್ದ ಹಂಸ ಹಾರಿಹೋಯಿತು.

ಈ ವಚನಕ್ಕೆ ಸಾಂಪ್ರದಾಯಿಕವಾಗಿ ಕೆಂಡದ ಗಿರಿ ಎಂದರೆ ಶಿವನೇ ನಾನು ಎಂಬ ಭಾವ, ಅರಗಿನ ಕಂಭ ಎಂದರೆ ಶರಣನ ಭಾವ, ಹಂಸೆ ಎಂದರೆ ಪರಮಹಂಸ ತತ್ವ ಇತ್ಯಾದಿಯಾಗಿ ವಿವರಿಸುವುದುಂಟು.

ಅದನ್ನೆಲ್ಲ ಬಿಟ್ಟರೂ ಈ ವಚನ ಸಾವನ್ನು ಕುರಿತು ಹೇಳುತ್ತಿದೆಯೋ ಅಥವಾ ಸಾವನ್ನು ವಿವರಿಸುವ ನೆಪದಲ್ಲಿ ಬದುಕಿನ ಚಿತ್ರಕೊಡುತ್ತಿದೆಯೋ ನೋಡಿ.

ಹಂಸವನ್ನು ಜೀವವೆಂದೋ ಆತ್ಮವೆಂದೋ ಒಪ್ಪಿಕೊಳ್ಳೋಣ, ದೇಹವೇ ಅರಗಿನ ಕಂಭ, ಇಡೀ ಬದುಕೇ ಕೆಂಡದ ಬೆಟ್ಟ, ಕೆಂಡದ ಬೆಟ್ಟವಾದ್ದರಿಂದ ಪಕ್ವವಾದರೂ, ಆಗದಿದ್ದರೂ; ಜ್ಞಾನಿಯಾದರೂ ಆಗದಿದ್ದರೂ, ಕಂಭ ಕರಗಿಹೋಗುವುದೇ ನಿಶ್ಚಯ. ಹಾಗೆ ದೇಹ ಕರಗಿದಮೇಲೆ ಜೀವ ಎಲ್ಲಿದ್ದೀತು, ಹಾರಿ ಹೋಯಿತು.

ಬದುಕಿನ ಸ್ಥಿತಿಯ, ದೇಹ ಇಲ್ಲವಾಗುವ ಅನಿವಾರ್ಯತೆಯ, ಸಾವಿನ ಅಪರಿಹಾರ್ಯ ಸ್ಥಿತಿಯ ಮಂಡನೆ ಇದು. ಮಾತಿನಲ್ಲಿ ನಾವು ಹೇಳುವಂತೆ `ಸಾವು ಬರುವುದು’ ಅಲ್ಲ, ಜೀವ `ಹೋಗುವುದು’ ಇಲ್ಲಿನ ಚಿತ್ರ. ಅದು ಉರಿದ ಕಂಬದ ಮೇಲಿನಿಂದ ಹಂಸೆ ಹಾರಿದಷ್ಟೇ ಸಹಜ, ಅನಿವಾರ್ಯ!
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...