Home / ಲೇಖನ / ಇತರೆ / ವಚನ ವಿಚಾರ – ಇಬ್ಬರಿಗೂ ಒಂದೇ ಬಾಣ

ವಚನ ವಿಚಾರ – ಇಬ್ಬರಿಗೂ ಒಂದೇ ಬಾಣ

ಇಬ್ಬರಿಗೊಂದಂಬ ತೊಡುವೆ ಗಡ ಕಾಮಾ
ಅರಿದರಿದು
ಬಿಲುಗಾರನಹೆಯೋ
ಎಸೆದಿಬ್ಬರು ಒಂದನೀ ಹರು ಗಡ
ಇದು ಹೊಸತು
ಚೋದ್ಯವೀ ಸರಳ ಪರಿ ನೋಡಾ
ಎನಗೆಯೂ ಉರಿಲಿಂಗದೇವಗೆಯೂ ತೊಟ್ಟೆಸು
ನಾವಿಬ್ಬರೊಂದಾಗೆ ಬಿಲ್ಲಾಳಹೆ
ಎಸೆಯಲೋ ಕಾಮ

[ಚೋದ್ಯ-ಆಶ್ಚರ್ಯ, ಹರು – ತೆಗೆದುಕೊ, ಸೆರೆಹಿಡಿ, ಸರಳ ಪರಿ-ಬಾಣದ ಪರಿ]

ಉರಿಲಿಂಗದೇವನ ವಚನ. ಮನ್ಮಥ ಬಲು ದೊಡ್ಡ ಬಿಲ್ಲಾಳು. ನನಗೂ ನನ್ನ ನಲ್ಲನಾದ ದೇವರಿಗೂ ಇಬ್ಬರಿಗೂ ಒಂದೇ ಬಾಣದಲ್ಲಿ ಹೊಡೆಯುವುದಕ್ಕೆ ಸಾಧ್ಯವಾದರೆ ಮಾತ್ರ ನೀನು ನಿಜವಾದ ಬಿಲ್ಲಾಳು. ನಮ್ಮಿಬ್ಬರಿಗೂ ನಾಟುವಂತೆ ಒಂದೇ ಬಾಣವನ್ನು ತೊಟ್ಟು ಎಸೆದರೆ ಆಗ ನಾನೂ ಅವನೂ ಒಂದೇ ಆಗಿಬಿಡುತ್ತೇವೆ. ಆಗ ಮಾತ್ರ ನೀನು ಬಿಲ್ಲಾಳು ಆಗುವೆ ಎಂದು ಉರಿಲಿಂಗದೇವ ಕಾಮನಿಗೆ ಸವಾಲೆಸೆದಿದ್ದಾನೆ.

ಉತ್ಕಟವಾದ ದೈವಭಕ್ತಿಯು ಕಾಮದಷ್ಟೇ ತೀವ್ರವಾದ ಭಾವ, ಇರಬಹುದು. ಆದರೆ ಅದು ಭಕ್ತ / ಭಕ್ತೆಗೆ ಮಾತ್ರ, ಕಣ್ಣಿಗೆ ಕಾಣದ ನಲ್ಲ ದೇವರಿಗೂ ಆ ಭಾವ ಬರಬೇಡವೇ! ಅಂತೆಯೇ ತಪಸ್ಸಿನಲ್ಲಿ ತೊಡಗಿದ್ದ ಶಿವನ ಮೇಲೆ ಬಾಣ ಎಸೆದ ಕಾಮ ನನ್ನನ್ನೂ ನನ್ನ ದೈವವನ್ನೂ ಒಂದಾಗಿಸುವಂತೆ ಬಾಣತೊಡಲಿ ಎಂಬ ಕೋರಿಕೆ. ಹಾಗೆ ಒಂದುವೇಳೆ ಬಾಣ ತೊಟ್ಟರೆ ಕೊನೆಗೆ ಕಾಮನೇ ಸುಟ್ಟುಹೋಗ ಬೇಕಲ್ಲವೇ! ಕಾಮದ ಮೂಲಕವೇ ಕಾಮದ ನಿರಾಕರಣೆಯನ್ನೂ ಮಾಡುವ ಪರಿ ಹೊಸತಾಗಿದೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...