Home / ಕವನ / ಕವಿತೆ / ಗುಹೇಶ್ವರ

ಗುಹೇಶ್ವರ

ಆದಿ ಅನಾದಿ ಇಲ್ಲದ ಬಟ್ಟ ಬಯಲಿನ
ಹೂವಿನ ಕಂಪನ ನೀರಿನ ಕಂಪನ ಮನಸ್ಸಿನ
ಕಂಪನ ದೇಹದ ಕಂಪನ ಎಲ್ಲವನ್ನೂ ಸಮೀಕರಿಸಿ,
ಉಂಟು ಇಲ್ಲ ಎಂಬವರ ಲೆಕ್ಕಕ್ಕೆ ಚುಕ್ತಾ ಮಾಡುವ
ಮಿಂಚು ಕತ್ತಲೆಗಳ ನಡುವೆ ಸೆಳೆವ ಹೊಸ ಪದ
ಪ್ರಯೋಗ ಗುಹೇಶ್ವರ.

ದೇಶ ಕಾಲಗಳ ಇತಿಹಾಸದ ಪುಟಗಳ ಸರಿಸಿ,
ಇದ್ದ ಬಯಲಿನ ಘಮ ಘಮ ಆಕಾಶಕ್ಕೆ
ಪಸರಿಸಿ, ಎಲ್ಲಾ ದಿಕ್ಕುಗಳಲ್ಲಿ ಬೆಳಕ ಕಿರಣಗಳ
ಹರಡಿ ಹಾಸಿ ಇದು ಕಾಣಿ ನಿಜದ ನೆರಳು
ಪದಗಳ ಅರ್ಥಗಳ ಗಂಟು ಕಟ್ಟಿ ಮಾಯೆಯ
ಗೆಜ್ಜೆಯ ಹೊಸ ರಿಂಗಣ ಗುಹೇಶ್ವರ.

ಉರಿದ ಶರೀರದ ಬೂದಿ ಚೆಲ್ಲಿ ಹರಡಿ ಹಾಸಿದ
ಬಯಲು ಅಣು ಅಣುವಿನಲಿ ಲೋಕದ ತುಂಬ
ಮೊಗ್ಗುಗಳು ಹೂಗಳಾಗಿ ಅರಳಿ ಘಮ ಹರಡಿ,
ಅವನ ಪ್ರಜೆಯ ಒಳಗೂಡಿದ ಒಳ ಹರವು
ಮೋಹ ಮರುಳದ ಲಯವಾಗಿ ಕರಗಿದ ಜಂಗಮ
ಸರಸವಾದ ಗುಹೇಶ್ವರ.

ಕಣ್ಣು ಕಕ್ಷೆ ಮೀರಿ ಅರಳಿದ ಆಂತರ್ಯದ ಚೆಲುವು
ಮಾಯೆಯ ಮುಸಕ ಎಳೆದು ಆ ಮಾತು ಈ
ಮಾತ ಜಗದ ಸಂತೆಯ ತುಂಬ ಶರಣ
ಸತಿ ಲಿಂಗಪತಿ, ಭವದ ದಾವತಿ, ಶರೀರದ
ಅವಸ್ಥೆ ಅಭೇಧ್ಯನರಿಯವರ ಮರಳು ಮಾಡಿದ
ಗುಹೇಶ್ವರ ನಿರಂತರ ಸಾವಧಾನಿ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...