Home / ಕವನ / ಕವಿತೆ / ಎಡವೂರ ವೀರಭದ್ರನ ಸ್ತೋತ್ರ

ಎಡವೂರ ವೀರಭದ್ರನ ಸ್ತೋತ್ರ

ಎಡವೂರ ತಳದಲ್ಲಿ ಏನೇನ ಶಡಗರ
ಎಡಕ ನಂದೀಕೋಲ ಬಲಕ ಪಲ್ಲಕಿ ಪಂಕ
ಶಡಗರದ ಛತ್ತರಕಿ ಎಡಬಲ ಬತಾಗೀರಿ
ಹಾರೂವ ಹೂಬಾಣ ಹೊಬತ್ತಿ ಕಂಡಿಽರಿ
ಗುಗ್ಗಽಳದಾರೂತಿ ಗುಡಿಮುಂದ ಕಂಡಿಽರಿ
ಶರಣಬಂದಯ್ಯಗ ಕರಣ ನೋಡಿ ಪೂಜಿಗೋಳ ಬನ್ನೆ
ಜಯಮಂಗಳಽ ನಿತ್ಯ ಶಿನಮಂಗಳ ||೧||

ಹಣಿಯ ಮ್ಯಾಲಿನ ಗಂಧ ಗಿಣಿರಾಮ ಕುಂತಂಗ
ಕರಿಯ ಕುಂದಲದ್ಹರಳ ಕಿವಿಯಾಗ ಇಟ್ಟಾನ
ಏಸೊಂದು ಶೃಂಗಾರ ಎಡಗೈಲಿ ಹಿಡದಾನ
ಪರವೂತ ಗಿರಿಗುಡ್ಡ ಬಲಗೈಲಿ ಹಿಡದಾನ
ಚಳ್ಳುಂಗ್ರ ಚಿಮ್ಮೂತ ಕ್ವಾರ್‍ಮೀಸಿ ತಿದ್ದೂತ
ಕರಿ ಈರಭದ್ರನ ಕರಣ ನೋಡಿ ಪೂಜಿಗೋಳ ಬನ್ನೆ
ಜಯಮಂಗಳಽ ನಿತ್ಯ ಶಿವಮಂಗಳ ||೨||

ಬಿಳಿಯಂಗಿ ತೊಟ್ಟಾನ ಬಿಗದುಟ್ಟು ನಿಂತಾನ
ಸರಗಂಟಿ ಸರಮಾಲಿ ಕೊರಳೀಗಿ ಹಾಕ್ಯಾನ
ಏಸೊಂದು ರುದ್ರಾಕ್ಷಿ ಸ್ವಾಮಿ ತಾ ಧರಸ್ಯಾನ
ಪಡವಽಲ ದಿಕ್ಕಿಽಗಿ ಒಡೆಯ ತಾ ನೆನೆದಾನ
ತುಂಗಬದ್ರಿ ಕಾಳಿ ಬಾಗಿಽಲ ತೆರೆಯಂದ
ಕರಿ ಈರಭದ್ರನ ಕರಣ ನೋಡಿ ಪೂಜಿಗೋಳ ಬನ್ನೆ
ಜಯಮಂಗಳಽ ನಿತ್ಯ ಶಿನಮಂಗಳ ||೩||

ಮಂಗಳಾರಽ ದಿನ ವೀರ ನಿನ್ನೋಲಗೆ
ಚಿಟ್ಟಿ ಚಿಣಗೀ ಹೂವ ದುಂಡಮಲ್ಲಿಗಿ ಹೂವ
ಕೊಂಡಾಡೊ ದಾಸ್ಯಾಳ ಮಂಡ್ಲೇಸೂರದ್ಹೂವ
ಏಳ ಸಮದುರದಾನ ಪಾರಿಽಜಾತದ ಹೂವ
ಕಂಚಿಽಯ ಈ ಮಗ್ಗಿ ಕಮಳದ ಈ ಮಗ್ಗಿ
ಖ್ಯಾದಿಽಗಿ ಹೊಡಿ ನೂರು ಖ್ಯಾದಿಽಗಿ ಗರಿ ನೂರು
ಎಲ್ಲಽಕ ಹೆಚ್ಚಿಂದು ಬೆಲ್ಲಪತ್ತುರಿ ನೂರು
ಕರಕಿಽಯ ಪತ್ತೂಽರಿ ಕರಿಯ ತುಂಬೀ ಹೂವ
ಕರಿ ಈರಭದ್ರನ ಕರಣ ನೋಡಿ ಪೂಜಿಗೋಳ ಬನ್ನೆ
ಜಯಮುಂಗಳಽ ನಿತ್ಯ ಶಿನಮಂಗಳ ||೪||

ಹೆಗ್ಗಾಳಿ ಚಿನಕಾಳಿ ದೊಡ್ಡ ರಂಗಿನ ಕಾಳಿ
ಊದುಽಸು ನೆಽಪೇರಿ ಬಾರಿಸು ನಗಾರಿ
ಆಡು ಪಾತರ ಮ್ಯಾಳ ಗುಡಿಮುಂದ ಕಂಡಿಽರಿ
ಗುಗ್ಗಽಳದಾರೂತಿ ಗುಡಿಮುಂದ ಕಂಡಿಽರಿ
ಶರಣಬಂದಯ್ಯಗ ಕರಣ ನೋಡಿ ಪೂಜಿಗೋಳ ಬನ್ನೆ
ಜಯಮಂಗಳಽ ನಿತ್ಯ ಶಿವಮಂಗಳ ||೫||
*****

ಮೊದಲನೆಯ ನುಡಿಯಲ್ಲಿ ಮೂರ್ತಿಯ ಅಲಂಕಾರವರ್ಣನೆ, ಎರಡನೆಯದರಲ್ಲಿ ಗುಡಿಯೊಳಗಿನ ಭಜನೆಯ ಮೇಳದ ವರ್ಣನೆ, ಮೂರನೆಯದರಲ್ಲಿ ಕ್ಷೇತ್ರ ವರ್ಣನೆ, ನಾಲ್ಕನೆಯದರಲ್ಲಿ ಭಕ್ತಿಯ ಬಯಕೆ, ಹೀಗೆ ಕ್ರಮವಿದೆ.

ಛಂದಸ್ಸು:- ಮೂರು ಮೂರು ಮಾತ್ರೆಯ ಗಣಗಳಿವೆ. ಉತ್ಸಾಹ ರಗಳೆ.

ಶಬ್ದಪ್ರಯೋಗಗಳು:- ಇಟ್ಟಗಿ=ಇಟ್ಟಂಗಿ. ನಿಂತಾನ=ನಿಂತಿದ್ದಾನೆ. ಮಂದೀಲ=ಮುಂಡಾಸ. ಗೋಮ=ಪವಿತ್ರ. ಟೊಂಕ=ಸೊಂಟ. ಹೃದಯದಲ್ಲಿ ಲತ್ತಿಪೆಟ್ಟು=ದೇವರಾಯನ ಎದೆಗೆ ಆತನ ಸತಿಯಾದ ಶ್ರೀಲಕ್ಷ್ಮಿಯ ಬಲವಾದ ಏಟು ಕೊಟ್ಟಿದ್ದಾಳೆ ಎಂದು ಒಂದು ಪೌರಾಣಿಕ ಕಥೆ. ಮಾಳಿ=ಮಾಲೆ. ಬುಕ್ಕಿಟ್ಟು=ಕಪ್ಪು ಗಂಧದ ಪುಡಿ. ಔಂದೇ ಅಂಸ=ಅವನದೇ ವಂಶ. ಭಜನೆಗೋಳು=ಭಜನೆಗಳು. ಲಿಂಗಾಕಾರ=ಲಿಂಗದಾಕಾರ. ಟಿಳಕಬಟ್ಟ=ತಿಲಕದ ಬೊಟ್ಟು. ಪುಂಡಲೀಕ=ವಿಠ್ಠಲರಾಯನ ಒಬ್ಬ ಮಹಾಭಕ್ತ. ಬೌದ್ಧ್ಯ ರೂಪ=ವಿಠೋಬನು ಬೌದ್ಧವತಾರನೆಂದು ಜನರೂಢಿ.

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...