Home / ಕವನ / ಕವಿತೆ / ಗಣಪತಿಯ ಸ್ತೋತ್ರ

ಗಣಪತಿಯ ಸ್ತೋತ್ರ

ಗಂಧ ಕಸ್ತುರಿ ಪುನಗಽ |
ಗೌರವ್ವನ | ಕಂದಗ ಧರಿಸಿದರಽ |
ಅಂದದ ಬಿಳಿ‌ಎಲಿ ಆಡಕಿ ಕಾಚವು ಸುಣ್ಣ |
ಮುಂದ ಮಡೆಚಿನಿಟ್ಟು ಮಲ್ಲಿಽಗಿ ಮಳೆಗರೆದ |
ಮತಿಯ ಪಾಲಿಸೊ ಎನಗಽ |
ಶ್ರೀಗಣರಾಯಾ | ಸ್ತುತಿಮಾಡಿ ಉಣಿಸುಽವೆನೊ ||೧||

ರಾಜಾನ್ನ ಕೆನೆಮಸರಽ |
ರುಚಿಗಾಯಿ | ಭೋಜನಕ ಸವಿಮಜ್ಜಿಗೆಽ |
ಸಾಜನಾಗಿ ಬಂದು ಸೆಳೆಮಂಚದಲಿ ಕುಳಿತು |
ಮತಿಯ ಪಾಲಿಸೊ ಎನಗಽ |
ಶ್ರೀಗಣರಾಯಾ | ಸ್ತುತಿಮಾಡಿ ಉಣಿಸುಽವೆನೊ ||೨||

ಹಣ್ಣ ಹಪ್ಪಳ ಶೆಂಡಿಽಗಿ |
ಎಳಸಾದ | ಸಣ್ಣ ಶಾವಿಗಿ ಬಸೆದಽ |
ಉಂಡ ಮಗಿ ನೊರೆಹಾಲ ಉದರ-ಸಕ್ಕರಿ ತುಪ್ಪ |
ಮತಿಯ ಪಾಲಿಸೊ ಎನಗಽ |
ಶ್ರೀಗಣರಾಯಾ | ಸ್ತುತಿಮಾಡಿ ಉಣಿಸುಽವೆನೊ ||೩||

ಚಿಗುಳಿ ಚಿನ್ಪಾಲ್ ಬಚ್ಚೇವಽ |
ಚಿಟುಬಾಳಿ | ಅಗಲೋಳು ಗರಿಕಾಣೆನಽ |
ಪರಿಪರಿ ಸೋಬಸ್ತ ಪರಿಮಽಳನೇರಸ್ತ |
ಮತಿಯ ಪಾಲಿಸೊ ಎನಗಽ |
ಶ್ರೀಗಣರಾಯಾ | ಸ್ತುತಿಮಾಡಿ ಉಣಿಸುಽವೆನೊ ||೪||

ಸುರ ಹರಿ ನಮ ದೇವರ ಕಾಳಿಽ |
ಧೊರಿಪೂಜಿ | ಧೊರಿಪೂಜಿ ಮಾಽಡುನಽ |
ಪರಿಪರಿ ಸೋಬಸ್ತ ಪರಿಮಽಳನೇರಸ್ತ |
ಮತಿಯ ಪಾಲಿಸೊ ಎನಗಽ |
ಶ್ರೀಗಣರಾಯಾ | ಸ್ತುತಿಮಾಡಿ ಉಣಿಸುಽವೆನೊ ||೫||
*****

ಈ ಹಾಡಿನ ಮೊದಲನೆಯ ನುಡಿಯಲ್ಲಿ ಪೂಜೆಯ ಪರಿಯೂ ಮುಂದಿನ ಮೂರು ನುಡಿಗಳಲ್ಲಿ ನೈವೇದ್ಯದ ವಿಸ್ತಾರವೂ ವರ್ಣಿಸಲ್ಪಟ್ಟಿವೆ. ಕೊನೆಯ ನುಡಿಯು ಸಾಂಪ್ರದಾಯಿಕವಾಗಿದೆ.

ಛಂದಸ್ಸು: ಐದೈದು ಮಾತ್ರೆಯ ಗಣಗಳಿವೆ. ಮೊದಲನೆಯ ನುಡಿಯಲ್ಲಿ ಒಂದು ಡೊಡ್ಡ ಚರಣವು ಹೆಚ್ಚಿಗೆ ಬಿದ್ದಿದೆ.

ಶಬ್ದ ಪ್ರಯೋಗಗಳು: ಸಾಜ=ಶೃಂಗಾರ. ಸೆಳೆಮಂಚ=ತೂಗುಮಣೆ. ಸೋಬಸ್ತ=ಶೋಭಿಸುತ್ತ. ಏರಸ್ತ=ಏರಿಸುತ್ತೇನೆ. ಧೊರಿಪೂಜಿ=ವೈಭವದ ಪೂಜೆ. ಸೆಂಡೆಗಿ, ಹೆಪ್ಪಳ, ಶಾಂವಗಿ, ಚಿಗುಳಿ ಇವು ಭೋಜನದ ಪದಾರ್ಥಗಳು. ಚಿನ್ಪಾಲ್‌ ಮತ್ತು ಬಚ್ಚೇವ ಎಂಬವುಗಳೂ ಅವೇ. ಆದರೆ ಇವೆರಡರ ಸರಿಯಾದ ಕಲ್ಪನೆ ಮಾತ್ರ ಬರುವಂತಿಲ್ಲ.

“ಚಿಟುಬಾಳಿ ಅಗಲೋಳು ಗರಿ ಕಾಣೆನ” ಎಂದರೆ ಕಿರಿಬಾಳಿಯ ಎಲೆಯ ಮೇಲೆ ಎಡೆಬಡಿಸಿದ ಸಾಮಗ್ರಿಗಳು, ಎಲೆಯ ನಡುವಿನ ಗರಿ ಕಾಣದಷ್ಟು ತುಂಬಿದ್ದನೆಂದು ಅರ್‍ಥ.

ಈ ಹಾಡು ಪಾಂಚಾಲ ಜಾತಿಯವರಲ್ಲಿ ಪ್ರಚಾರವುಳ್ಳದ್ದಾಗಿರುವುದರಿಂದ ಅವರ ಆರಾಧ್ಯದೈವತವಾದ ಕಾಲೀದೇವಿಯ ಉಲ್ಲೇಖವು ಕೊನೆಯ ನುಡಿಯಲ್ಲಿದೆ.

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...