Home / ಕವನ / ಕವಿತೆ / ಅಕ್ಕನ ದಾರಿ

ಅಕ್ಕನ ದಾರಿ

ಗೆದ್ದವಳು ನೀನು ಲಿಂಗಮುಖದಿಂದ
ಮನದೊಳು ಭಾವ ಲಿಂಗವ ಅರಳಿಸಿ
ಉಡುತಡಿಯಿಂದ ಕದಳಿಯವರೆಗೆ
ಹರಡಿ ಹಾಸಿದ ಜ್ಞಾನ ಬೆಳದಿಂಗಳು
ಧರೆಯಲ್ಲಾ ಪಸರಿಸಿ ಶರಣಸತಿ ನೀನು.

ಜಗ ನಂಬಿದ ಲಿಂಗದ ಘನವ
ನಿಮ್ಮ ನೆರೆ ನಂಬಿದ ಸದ್ಭಕ್ತರಿಗೆ ತೋರಿ
ಉಭಯ ಸಂಗವ ಅರಿಯದೆ ಪರಿಣಾಮಿಯಾಗಿ
ಅರಿವಿನೊಳಗೆ ಅರಿವ ಬೆಳಕು ಬೆಳಗಿದ ಅಕ್ಕ ನೀನು

ಕಂಗಳ ನೋಟ ಕರುವಿಟ್ಟಭಾವ ಹಿಂಗದ ಮೋಹ
ಎಂದೆಂದೂ ಚೆನ್ನಮಲ್ಲಿಕಾರ್ಜುನನ ಶಿಶು ನೀನು
ಅಗ್ನಿ ಶಿವನ ಆಚಾರ ಸರ್‍ವವ್ಯಾಪಕ ಹರಡಿ ಹಾನಿ
ಆತ್ಮ ಜ್ಞಾನವ ಪ್ರತಿಬಿಂಬಿಸಿ ಅವನೊಡಲ ಪ್ರಾಣ
ನೀನು ಘಮ

ನೀ ಹೆಜ್ಜೆ ಇರಿಸಿದ ಕಡೆಯೆಲ್ಲಾ ಕ್ಯಾದಿಗೆ ಘಮ
ನೆರಳ ತಂಪು ಕತ್ತಲೆಯ ಕರಗಿಸಿ ಬೆಳ್ಳಿ ಚಿಕ್ಕಿಗಳು
ತನ್ನ ತಾನರಿಯೆ ಅಂಗೈಯ ಲಿಂಗಧಾರಣೆ ಮಾಡಿ
ಭೂಲೋಕ ಸಮಸ್ತ ಜೀವಿಗಳಿಗೆ ಪ್ರಸಾದಿ
ಪ್ರಾಣಲಿಂಗಿಯಾದೆ.

ಮಾನವ ಬೆರಗು ನಿಬ್ಬೆರಗು ಆಗಿ ಅವನ ಲೋಕದ
ಶ್ಮದ್ಧ ಅನುಭಾವ ಮಂಟಪದಲಿ ನೀ ಹಾಡಿದ
ವಚನಗಳು ಮಲ್ಲಿಕಾರ್‍ಜುನನ ಮಹಿಮೆ ಅರುಹಿ
ಪರಾತ್ಪರ ಸತ್ಯ ಸದಾಚಾರ ಗುರುಲಿಂಗ ಜಂಗಮಕೆ
ಸಮರ್‍ಪಿಸುವೆ.

ಬಲ್ಲವರೊಡನೆ ಸಂಗಮಾಡಿ ಬೆಣ್ಣೆ ಕಡೆದು
ಕುಲಭ್ರಮೆ, ಜಾತಿ ಭ್ರಮೆ ಸರಿಸಿ ಸರ್‍ವ ಅಲಂಕಾರ ತುಪ್ಪ
ಕಾಯಿಸಿ, ಶಿವಶಕ್ತಿ ಶಿವ ಭಕ್ತಿ, ಶಿವಪ್ರಸಾದ
ಮಾಡಿ ಅಡಿಗಡಿಗೆ ಗುರುಪಾದಕೆ ನೈರ್‍ಮಲ್ಯ ನೀಡಿ ಧನ್ಯವಾದೆ.

ಅಕ್ಕ ಎಂದರೆ ಅಭಿನ್ನ ಜ್ಞಾನ. ಯತ್ರ ಜೀವ ತತ್ರಶಿವ
ಅಕ್ಕ ಎಂದರೆ ಹಿಂಗದ ಅನುಭಾವದ ನೀರಿನ ಭಾವಿ.
ಅಕ್ಕ ಎಂದರೆ ಇಹದಸುಖ ಪರದ ಗತಿಯ ದಾರಿ.
ಅಕ್ಕ ಎಂದರೆ ತನ್ನತಾನರಿತ ಕಂಗಳ ನೋಟ ಮನದ ಸೊಗಸು…..
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...