Home / ಕವನ / ಕವಿತೆ / ಅಕ್ಕನ ದಾರಿ

ಅಕ್ಕನ ದಾರಿ

ಗೆದ್ದವಳು ನೀನು ಲಿಂಗಮುಖದಿಂದ
ಮನದೊಳು ಭಾವ ಲಿಂಗವ ಅರಳಿಸಿ
ಉಡುತಡಿಯಿಂದ ಕದಳಿಯವರೆಗೆ
ಹರಡಿ ಹಾಸಿದ ಜ್ಞಾನ ಬೆಳದಿಂಗಳು
ಧರೆಯಲ್ಲಾ ಪಸರಿಸಿ ಶರಣಸತಿ ನೀನು.

ಜಗ ನಂಬಿದ ಲಿಂಗದ ಘನವ
ನಿಮ್ಮ ನೆರೆ ನಂಬಿದ ಸದ್ಭಕ್ತರಿಗೆ ತೋರಿ
ಉಭಯ ಸಂಗವ ಅರಿಯದೆ ಪರಿಣಾಮಿಯಾಗಿ
ಅರಿವಿನೊಳಗೆ ಅರಿವ ಬೆಳಕು ಬೆಳಗಿದ ಅಕ್ಕ ನೀನು

ಕಂಗಳ ನೋಟ ಕರುವಿಟ್ಟಭಾವ ಹಿಂಗದ ಮೋಹ
ಎಂದೆಂದೂ ಚೆನ್ನಮಲ್ಲಿಕಾರ್ಜುನನ ಶಿಶು ನೀನು
ಅಗ್ನಿ ಶಿವನ ಆಚಾರ ಸರ್‍ವವ್ಯಾಪಕ ಹರಡಿ ಹಾನಿ
ಆತ್ಮ ಜ್ಞಾನವ ಪ್ರತಿಬಿಂಬಿಸಿ ಅವನೊಡಲ ಪ್ರಾಣ
ನೀನು ಘಮ

ನೀ ಹೆಜ್ಜೆ ಇರಿಸಿದ ಕಡೆಯೆಲ್ಲಾ ಕ್ಯಾದಿಗೆ ಘಮ
ನೆರಳ ತಂಪು ಕತ್ತಲೆಯ ಕರಗಿಸಿ ಬೆಳ್ಳಿ ಚಿಕ್ಕಿಗಳು
ತನ್ನ ತಾನರಿಯೆ ಅಂಗೈಯ ಲಿಂಗಧಾರಣೆ ಮಾಡಿ
ಭೂಲೋಕ ಸಮಸ್ತ ಜೀವಿಗಳಿಗೆ ಪ್ರಸಾದಿ
ಪ್ರಾಣಲಿಂಗಿಯಾದೆ.

ಮಾನವ ಬೆರಗು ನಿಬ್ಬೆರಗು ಆಗಿ ಅವನ ಲೋಕದ
ಶ್ಮದ್ಧ ಅನುಭಾವ ಮಂಟಪದಲಿ ನೀ ಹಾಡಿದ
ವಚನಗಳು ಮಲ್ಲಿಕಾರ್‍ಜುನನ ಮಹಿಮೆ ಅರುಹಿ
ಪರಾತ್ಪರ ಸತ್ಯ ಸದಾಚಾರ ಗುರುಲಿಂಗ ಜಂಗಮಕೆ
ಸಮರ್‍ಪಿಸುವೆ.

ಬಲ್ಲವರೊಡನೆ ಸಂಗಮಾಡಿ ಬೆಣ್ಣೆ ಕಡೆದು
ಕುಲಭ್ರಮೆ, ಜಾತಿ ಭ್ರಮೆ ಸರಿಸಿ ಸರ್‍ವ ಅಲಂಕಾರ ತುಪ್ಪ
ಕಾಯಿಸಿ, ಶಿವಶಕ್ತಿ ಶಿವ ಭಕ್ತಿ, ಶಿವಪ್ರಸಾದ
ಮಾಡಿ ಅಡಿಗಡಿಗೆ ಗುರುಪಾದಕೆ ನೈರ್‍ಮಲ್ಯ ನೀಡಿ ಧನ್ಯವಾದೆ.

ಅಕ್ಕ ಎಂದರೆ ಅಭಿನ್ನ ಜ್ಞಾನ. ಯತ್ರ ಜೀವ ತತ್ರಶಿವ
ಅಕ್ಕ ಎಂದರೆ ಹಿಂಗದ ಅನುಭಾವದ ನೀರಿನ ಭಾವಿ.
ಅಕ್ಕ ಎಂದರೆ ಇಹದಸುಖ ಪರದ ಗತಿಯ ದಾರಿ.
ಅಕ್ಕ ಎಂದರೆ ತನ್ನತಾನರಿತ ಕಂಗಳ ನೋಟ ಮನದ ಸೊಗಸು…..
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...