Home / ಕವನ / ಕವಿತೆ / ನನ್ನ ಶಾರದ ಮಾತೆ

ನನ್ನ ಶಾರದ ಮಾತೆ

ನನ್ನ ಶಾರದ ಮಾತೆ
ಪ್ಯೂರ್ ವೆಜಿಟೇರಿಯನ್
ಭಾನುವಾರ ಮಾತ್ರ
ನಾನ್ ವೆಜಿಟೇರಿಯನ್!

ಅವಳ ಕೈಯಲ್ಲಿ ವೀಣೆ| ಈಚೆಗೆ
ಕಲಿತಿಹಳು ಸಹ ತಮಟೆ
ಭರತ ನಾಟ್ಯದ ಜೊತೆಗೆ
ಹುಲಿವ್ಯಾಸದ ಕುಣಿತ

ನನ್ನ ಶಾರದೆಗೆ ಪ್ರೀತಿ
ಕರ್‍ನಾಟಕ ಸಂಗೀತ
ಇಂದು ಅವಳಿಗೆ ಪ್ರೀತಿ
ಕನ್ನಡದ್ದೆಲ್ಲ ಸಂಗೀತ

ಎಲ್.ಕೆ.ಜಿ.ಯ ಹಳೆ ಶಾರದೆಗೆ
ಬೆವರಿಗೆ ಮಿಗಿಲು ಬುದ್ಧಿ
ಯು.ಜಿ.ಸಿ.ಯ ಹೊಸ ಶಾರದೆಗೆ
ಬೆವರಿಗೆ ಸೇವಕ ಬುದ್ಧಿ

ನನ್ನ ಶಾರದೆಗೆ ಪ್ರಿಯವು
ಪ್ರಮಾಣ ಬದ್ಧ ಕನ್ನಡ
ಈಚೆಗೆ ಹೇಗೊ ಪ್ರಿಯವು
ನೂರು ಸೊಗಡಿನ ಕನ್ನಡ

ಬಿಳಿ ಸೀರೆಯ ಆ ದೇವಿ
ಹರಕಲು ಸೀರೆಗೆ ದೂರ
ಇಂದು ಅದಕೆ ಒಲಿದಿಹಳು
ತೋರಿ ಮರುಕ ಅಪಾರ

ಅಪ್ಪನ ಕಾಲದ ಶಾರದೆಗೆ
ಅಪ್ಪ ಬೇಕು ಸೇವೆಗೆ
ನಾನೊಪ್ಪಿದ ಈ ಕಾಲಕ್ಕೆ
ಎಲ್ಲರು ಎಲ್ಲರ ಸೇವೆಗೆ

ತನ್ನ ನೆಲೆ ವಿಸ್ತರಿಸಿ
ಮೆರೆದ ಶಾರದ ಮಾತೆ
ಮಕ್ಕಳೆಲ್ಲರಿಗೂ ಯಾಕೆ
ಅಲ್ಲ ಆದರ್ಶದಾತೆ?
*****

Tagged:

Leave a Reply

Your email address will not be published. Required fields are marked *

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...