Home / ಕವನ / ಕವಿತೆ / ಸಮಯ ಸಾಕಾಗುವುದಿಲ್ಲ

ಸಮಯ ಸಾಕಾಗುವುದಿಲ್ಲ

ಸಮಯ ಸಾಕಾಗುವುದಿಲ್ಲ
ಎನ್ನುವುದೊಂದು ನೆಪ ಅಷ್ಟೇನೇ|
ತನ್ನೆಲ್ಲಾ ಇಷ್ಟಾರ್ಥಳಿಗಾಗಿ
ಸಮಯ ಸರಿಹೊಂದಿಸಿಕೊಳ್ಳುವ ನಾವು|
ಬೇರೆಲ್ಲಾದರಲ್ಲಿ ಮುಂದು
ಬೇಡವೆನಿಸಿರುವುದಕೆ ಈ ಸೋಗು||

ದೇವಸ್ಥಾನದ ಮಹಾಮಂಗಳಾರತಿ
ಸಮಯಕ್ಕೆ ಸರಿಯಾಗಿ ಹೋಗಲು
ಸಮಯ ಸಾಕಾಗದು|
ಆದರೆ ಸಿನೆಮಾಕ್ಕೆ ಹೋಗಲು
ಎನ್ನೆಲ್ಲಾ ತಯಾರಿ ನಡೆಸಿ
ಅರ್ಧಗಂಟೆ ಮುಂಚೆನೇ ಹಾಜರು|
ವಿಮಾನ ಪ್ರಯಾಣಕ್ಕೆಂದು
ಹೊರಟರೆ ಎರಡು ಗಂಟೆ ಮೊದಲು|
ಯಾರದಾದರು ಮದುವೆಗೆ
ಹೋಗಬೇಕೆಂದರೆ ಅರ್ಧ ದಿನ ಮೊದಲು
ಮಧುಮಗನ ನಾವೇ ಹೋಗಿ ತಯಾರಿ ಮಾಡಲು||

ಮಕ್ಕಳಿಗೆ ಓದಿಕೋ ಎಂದರೆ
ಕೈಕಾಲು ನೋವು, ಹೊಟ್ಟೆ ಹಸಿವು
ಸಮಯವು ತುಂಬಾ ಕಡಿಮೆ|
ಅದೇ ಆಟ‌ಆಡು ಎಂದರೆ ಸಾಕು
ಸಮಯದ ಪರಿವೇ ಇರುವುದಿಲ್ಲ|
ಬೇರೆಯವರದೇನಾದರು ಪುಕ್ಕಟೆ
ಸಾಲ ಪಡೆದರೆ ಹಿಂದಿರುಗಿಸಲು ಬೇಜಾರು
ನಿನ್ನದೇನಾದರೂ ಇತರರಿಗೆ ಸಾಲ
ನೀಡಿದರೆ ಆವರನು ಪದೇಪದೇ ಪೀಡಿಸುವುದು||

ವಠಾರದವರ ತಿಥಿ ಊಟಕೆ
ನಾವೇ ಮೊದಲು
ಭಕ್ಷ ಭೋಜನದ ರುಚಿ ನೋಡಲು|
ಚುನಾವಣೆ ಬಂತೆಂದರೆ ತಾನೇ ಮೊದಲು
ರಾಜಕಾರಣಿಗಳ ಕೈ ಕುಲುಕಲು|
ಕ್ರಿಕೇಟ್ ಇರುವದಿನ ಕೆಲಸಕೆ
ರಜಾ ಬೀಳುತ್ತೆ ಮ್ಯಾಚ್ ನೋಡಲು||

ಹೆಂಗಳೆಯರಿಗಂತೂ ಸಮಯ
ಸಾಕಾಗುವುದಿಲ್ಲ, ಎಲ್ಲಾ
ಧಾರಾವಾಹಿಗಳ ನೋಡಲು|
ರಸ್ತೆ ಅಪಘಾತವಾದರೂ ಅಲ್ಲಿಯೂ ಮೊದಲು
ಊರಲ್ಲೇನಾದರು ಅವಘಡ
ಸಂಭವಿಸಿದರೂ ತಾನೇ ಮೊದಮೊದಲು|
ಬಿಟ್ಟಿ ಯಾವುದಾದರೂ ಸರಿ, ಅದಕೆಲ್ಲಾ
ಅಂಜಿಕೆ ಮುಜುಗರವೇನಿಲ್ಲ
ಎಲ್ಲದಕೂ ಮೊದಮೊದಲು||
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...