Home / ಕವನ / ಕವಿತೆ / ಸಮಯ ಸಾಕಾಗುವುದಿಲ್ಲ

ಸಮಯ ಸಾಕಾಗುವುದಿಲ್ಲ

ಸಮಯ ಸಾಕಾಗುವುದಿಲ್ಲ
ಎನ್ನುವುದೊಂದು ನೆಪ ಅಷ್ಟೇನೇ|
ತನ್ನೆಲ್ಲಾ ಇಷ್ಟಾರ್ಥಳಿಗಾಗಿ
ಸಮಯ ಸರಿಹೊಂದಿಸಿಕೊಳ್ಳುವ ನಾವು|
ಬೇರೆಲ್ಲಾದರಲ್ಲಿ ಮುಂದು
ಬೇಡವೆನಿಸಿರುವುದಕೆ ಈ ಸೋಗು||

ದೇವಸ್ಥಾನದ ಮಹಾಮಂಗಳಾರತಿ
ಸಮಯಕ್ಕೆ ಸರಿಯಾಗಿ ಹೋಗಲು
ಸಮಯ ಸಾಕಾಗದು|
ಆದರೆ ಸಿನೆಮಾಕ್ಕೆ ಹೋಗಲು
ಎನ್ನೆಲ್ಲಾ ತಯಾರಿ ನಡೆಸಿ
ಅರ್ಧಗಂಟೆ ಮುಂಚೆನೇ ಹಾಜರು|
ವಿಮಾನ ಪ್ರಯಾಣಕ್ಕೆಂದು
ಹೊರಟರೆ ಎರಡು ಗಂಟೆ ಮೊದಲು|
ಯಾರದಾದರು ಮದುವೆಗೆ
ಹೋಗಬೇಕೆಂದರೆ ಅರ್ಧ ದಿನ ಮೊದಲು
ಮಧುಮಗನ ನಾವೇ ಹೋಗಿ ತಯಾರಿ ಮಾಡಲು||

ಮಕ್ಕಳಿಗೆ ಓದಿಕೋ ಎಂದರೆ
ಕೈಕಾಲು ನೋವು, ಹೊಟ್ಟೆ ಹಸಿವು
ಸಮಯವು ತುಂಬಾ ಕಡಿಮೆ|
ಅದೇ ಆಟ‌ಆಡು ಎಂದರೆ ಸಾಕು
ಸಮಯದ ಪರಿವೇ ಇರುವುದಿಲ್ಲ|
ಬೇರೆಯವರದೇನಾದರು ಪುಕ್ಕಟೆ
ಸಾಲ ಪಡೆದರೆ ಹಿಂದಿರುಗಿಸಲು ಬೇಜಾರು
ನಿನ್ನದೇನಾದರೂ ಇತರರಿಗೆ ಸಾಲ
ನೀಡಿದರೆ ಆವರನು ಪದೇಪದೇ ಪೀಡಿಸುವುದು||

ವಠಾರದವರ ತಿಥಿ ಊಟಕೆ
ನಾವೇ ಮೊದಲು
ಭಕ್ಷ ಭೋಜನದ ರುಚಿ ನೋಡಲು|
ಚುನಾವಣೆ ಬಂತೆಂದರೆ ತಾನೇ ಮೊದಲು
ರಾಜಕಾರಣಿಗಳ ಕೈ ಕುಲುಕಲು|
ಕ್ರಿಕೇಟ್ ಇರುವದಿನ ಕೆಲಸಕೆ
ರಜಾ ಬೀಳುತ್ತೆ ಮ್ಯಾಚ್ ನೋಡಲು||

ಹೆಂಗಳೆಯರಿಗಂತೂ ಸಮಯ
ಸಾಕಾಗುವುದಿಲ್ಲ, ಎಲ್ಲಾ
ಧಾರಾವಾಹಿಗಳ ನೋಡಲು|
ರಸ್ತೆ ಅಪಘಾತವಾದರೂ ಅಲ್ಲಿಯೂ ಮೊದಲು
ಊರಲ್ಲೇನಾದರು ಅವಘಡ
ಸಂಭವಿಸಿದರೂ ತಾನೇ ಮೊದಮೊದಲು|
ಬಿಟ್ಟಿ ಯಾವುದಾದರೂ ಸರಿ, ಅದಕೆಲ್ಲಾ
ಅಂಜಿಕೆ ಮುಜುಗರವೇನಿಲ್ಲ
ಎಲ್ಲದಕೂ ಮೊದಮೊದಲು||
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...