ಬೆತ್ತಲೆ ಕಿರೀಟ

ಹಗಲು ಅಂಬಾರಿಯ ಮೇಲೆ
ಮೆರವಣಿಗೆ ಹೊರಟಿತ್ತು ಬೀದಿಯಲಿ
ಹೆಗಲು ಕೊಟ್ಟವರ ಎದೆಯ ಮೇಲೆ
ಬಹುಪರಾಕು ಬರೆದಿತ್ತು ನೆತ್ತರಲ್ಲಿ.

ದಾರಿ ಬಿಡಿರೊ ಅಣ್ಣ ದಾರಿ ಬಿಡಿರೊ
ಹಗಲು ರಾಜನಿಗೆ ದಾರಿ ಬಿಡಿರೊ
ಬಾಯಿ ಬಿಡಿರೊ ಅಣ್ಣ ಬಾಯಿ ಬಿಡಿರೊ
ನಗಲು ನೀವೆಲ್ಲ ತೆರಿಗೆ ಕೊಡಿರೊ.

ಇಲ್ಲಿ ಬೀದಿಗಳೆಲ್ಲ ಬೆವರ ಬಂದೀಖಾನೆ
ಹಗಲು ರಾಜನಿಗೆ ಬೆತ್ತಲೆ ಕಿರೀಟ
ಎತ್ತ ನೋಡಿದರತ್ತ ಚಿತ್ತಾದ ಬದುಕು
ಬಯಲು ಬೆಳಕಿಗೆ ಇಲ್ಲಿ ಕತ್ತಲೆ ಕಾಟ.

ಕದ್ದು ಕೂತಿರುವ ಕತ್ತಲ ತೋಳ
ಹಾರಿ ಬಂದೀತು ಹೆಗಲ ಮೇಲೆ
ಜಿದ್ದು ಜೀವನವಾಗಿ ಸ್ಪರ್ಧೆ ಹುಟ್ಟಿದೆ ಇಲ್ಲಿ
ನೆಗೆದು ಕೂತೀತು ಹೆಗಲ ಮೇಲೆ.

ಹಗಲ ಹಾದರದಲ್ಲಿ ಹುಟ್ಟಿಬಂದವರ
ಕತ್ತಲಿನ ಕಾಮಕ್ಕೆ ತುತ್ತಾದ ಬಾಂಧವರೆ
ಸುಟ್ಟು ಕರುಕಾದ ಹೊಟ್ಟೆ ಹೊತ್ತವರೆಲ್ಲ
ಒಂದಾಗಿ ಬದುಕುವುದೇ ಬೇವು ಬೆಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇಂದಿನ ಮಕ್ಕಳೇ ಮುಂದಿನ ಜನಾಂಗ
Next post ಬದುಕ ಬೆಳವಣಿಗೆಯ

ಸಣ್ಣ ಕತೆ

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…