ಪಾಠ ಕೇಳುವ ಪ್ರಾಣಗಳು

ಬೆರಳು ಕತ್ತರಿಸಿ
ಕರುಳ ಕದ್ದವರು
ಮರುಳು ಮಾಡಿದರು ಮಾತನ್ನು
ನಡೆದ ಕಡೆಯೆಲ್ಲ
ನೆರಳ ನೆಟ್ಟವರು
ಮಸುಕು ಮಾಡಿದರು ಮನಸನ್ನು.

ಬೆರಳು ಕೊಟ್ಟವರೆ ಕರುಳ ಕೇಳುವ
ಕಾಲ ಬಂತೆ ಈಗ!
ಬೆರಳು-ಕರುಳುಗಳ ರಾಜಕೀಯದಲಿ
ಬತ್ತಿಹೋಯಿತೆ ರಾಗ!

ಆರ್‍ಜುನ ದೇವನ ಬಿಲ್ಲಿನ ತುದಿಗೆ
ಕೊಳ್ಳಿ ಕಾರುವ ಬಾಣಗಳು
ಏಕಲವ್ಯನ ಬೆನ್ನಿನ ಮೇಲೆ
ಪಾಠ ಕೇಳುವ ಪ್ರಾಣಗಳು!

ಸ್ವಂತ ಸಸಿಗಳಿಗೆ ಜೋಗುಳ ಹಾಡಿ
ಸಂತರಾದವರು ಎಲ್ಲಿ?
ಕೊಳ್ಳಿದೆವ್ವಗಳ ಕಾಲ ಕುಣಿತಕೆ
ಮೌನವಾದವರು ಎಲ್ಲಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post Recineನ Phaedra ವ್ಯಾಮೋಹ ಒದಗಿಸಿದ ದುರ್‍ಗತಿ
Next post ಅನ್ನ ಬ್ರಹ್ಮ ಅನ್ನ ಬ್ರಹ್ಮ

ಸಣ್ಣ ಕತೆ

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಎಪ್ರಿಲ್ ಒಂದು

    ಒಮ್ಮೆಲೇ ಅವನಿಗೆ ಮದುವೆಯಾಗಿಬಿಡಬೇಕೆಂಬ ವಿಚಾರ ಬಂತು. ಮದುವೆಯಾಗುವದೆಂದರೆ ಒಂದು ಸಹಜವಾದ ವಿಚಾರವೆಂದು ಕೆಲವರಿಗೆ ಅನಿಸಬಹುದು. ಆದರೆ ಅವನದು ಮಾತ್ರ ಹಾಗಿರಲಿಲ್ಲ. ಎಲ್ಲರೂ ಅವನಿಗೆ ‘ಆಜನ್ಮ ಬ್ರಹ್ಮಚಾರಿ’ ಎಂಬ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…