ಬದುಕು ಮತ್ತು ರಾಜಕೀಯ

ಕಾಳಚಕ್ರ ಉರುಳುತ್ತಿದೆ.
ಹಗಲು ಸರಿದು ಕರಾಳ
ರಾತ್ರಿಯಲ್ಲಿ ನಕ್ಷತ್ರಗಳ
ಕಣ್ಣುಮುಚ್ಚಾಲೆ.
ಆಕಾಶ ನೋಡುತ್ತ
ಅಳುತ್ತಿರುವ ನಾಯಿಗಳು
ದಟ್ಟ ದರಿದ್ರರ
ಕೊಂಪೆ ಗುಡಿಸಲುಗಳು
ಸಿಡಿದೇ ಕರೇ
ಕ್ಷೀಣ ಧ್ವನಿಯಲ್ಲಿ
ಗುಣುಗುಟ್ಟುತ್ತಿವೆ,

ಸಾಲದಿರುವ ಸಂಬಳ
ಏರುತ್ತಿರುವ ದರಗಳ ಕುರಿತು
ನಾವು ಕುಡಿಯುವ
ನೀರನ್ನು ಕೊಳಕಾಗಿಸುವ
ಬಿರ್‍ಲಾನ ಕುರಿತು
ಉಸಿರುಗಟ್ಟಿಸುವ
ವಿಷಗಾಳಿ ಬಿಡುತ್ತಿರುವ
ಕಾರ್ಖಾನೆಗಳ ಕುರಿತು
ನಾನು ಮಾತನಾಡಿದರೆ
ರಾಜಕೀಯವಾಗುತ್ತದಂತೆ.

ರಾಜಕೀಯ ನಿಗೂಢಗಳು
ಶುದ್ಧಗಾಳಿ, ನೀರು ಆಹಾರಗಳು
ಹಸಿರು ಬದುಕುಗಳನ್ನು
ನಮಗೆ ದೊರಕದಂತೆ ಮಾಡಿದ
ಕರಾಳ ಕೈಗಳು-
ಪಂಜಾಬಿನ ಕೊಲೆಗಳು,
ಕಾಶ್ಮೀರ ಕಣಿವೆಗಳಲ್ಲಿ
ಕೊಳೆಯುತ್ತಿರುವ ಹೆಣಗಳು
ಇರಾಕ್‌ನಲ್ಲಿ ಮಾಸಣ ಕಾಣದೇ
ಬಿದ್ದಿರುವ ರಾಶಿ ಹೆಣಗಳು
ಸಾಮ್ರಾಜ್ಯಶಾಹಿ ಪಿತೂರಿಗಳೂ
ವಾಶಿಂಗ್‌ಟನ್ನಿನ ಕ್ರೂರ ಕೈಗಳು.

ನನ್ನ ಆಳದಲ್ಲಿ ನಾನು
ಇಣುಕಿ ನೋಡಿದಾಗ –
ನಾನು ಸತ್ಯವಾಗಿದ್ದೆ.
ಆ ಕ್ರೂರ ಕೈಗಳನ್ನು ಕುಲಕದೇ
ಹೋರಾಟದ ದಾರಿ ಹುಡುಕಿಕೊಂಡಿದ್ದೆ.
ಅದಕ್ಕೀಗ ಸಾಮ್ರಾಜ್ಯಶಾಹಿ ಪಿತೂರಿಗಳು
ತುತ್ತೂರಿ ಊದುತ್ತಿವೆ.
ಬದುಕಿನ ಬಗ್ಗೆ ಮಾತನಾಡದಿರಿ,
ಇಲ್ಲದಿರೆ ಅದು
ರಾಜಕೀಯವಾಗುತ್ತದೆಂದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉದ್ದದೀ ಜೀವನಕೆ ಒಂದು ಉಸಿರು ಸಾಕಾ?
Next post ಸ್ಲೋಗನ್‌ಗಳು

ಸಣ್ಣ ಕತೆ

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…