Home / ಕವನ / ಕವಿತೆ / ನನಗೆ ಮಾತನಾಡಲು ಬಿಡಿ

ನನಗೆ ಮಾತನಾಡಲು ಬಿಡಿ

ನನ್ನ ಬಂಧುಗಳೇ,
ನಾನು ತಲೆಯೆತ್ತಿ ನಡೆದರೆ,
ನಿಮಗೆ ಅಹಂಕಾರಿಯಂತೆ ಕಾಣುವೆನು

ತಲೆ ಬಗ್ಗಿಸಿ ನಡೆದರೆ,
ಅಬಲೆ, ಅಪರಾಧಿಯಂತೆ ಕಾಣುವೆನು.
ಮೌನವಾಗಿದ್ದರೆ ಮೂಕಿ, ಎನ್ನುವಿರಿ.
ಮಾತನಾಡಿದರೆ ವಾಚಾಳಿ ಎನ್ನುವಿರಿ.
ಹೇಳಿ ನಾನು ಹೇಗೆ ನಡೆದುಕೊಳ್ಳಲಿ ?

ನಿಮ್ಮ ಈ ಅಪಮಾನವನ್ನು ನಾನು
ಎಲ್ಲಿಯವರಿಗೆ ಸಹಿಸಲಿ? ನೀವೇ ಹೇಳಿ.
ಎಲ್ಲಿಯವರೆಗೆ ಎದೆಯಲಿ ಸಹಿಸುವ
ಜ್ವಾಲೆಯನ್ನು ಸಹಿಸಿಕೊಂಡಿರಲಿ?
ಹೇಳಿ? ನೀವೇ ಹೇಳಿ ಬಂಧುಗಳೇ.

ಎಲ್ಲಿಯವರೆಗೆ ನಾನು ನಿಮ್ಮ
ಮಾರಾಟದ ಸರಕುಗಳಿಗೆ
ವಿಜ್ಞಾಪನಾ ವಸ್ತುವಾಗಿರಲಿ?
ಎಲ್ಲ ಸ್ತ್ರೀಯ ಸೌಂದರ್ಯದ ಹಿಂದೆ
ಒಂದಿಲ್ಲೊಂದು ರಹಸ್ಯವಿದೆಯೆಂದು ಹೇಳುವಿರಿ,
ಅದುವೇ ನಿಮ್ಮ “ಫೌಂಡೇಶನ್ ಕ್ರೀಮ್”
ಎಂದು ಪ್ರಚಾರ ಗಿಟ್ಟಿಸುವಿರಿ.
ಹೇಳಿ ನಾನು ಎಲ್ಲಿಯವರೆಗೆ
ಅಗ್ಗದ ಪ್ರಚಾರ ಮಾಧ್ಯಮವಾಗಿರಲಿ?
ಎಲ್ಲಿಯವರೆಗೆ ನೀವು ಸೃಷ್ಟಿಸಿದ
“ಮಿಥಿಕ್” ಬಂಧಿಯಾಗಿರಲಿ?
ಹೇಳಿ ಬಂಧುಗಳೇ ನೀವೇ ಹೇಳಿ.

ನಾನು ಎಲ್ಲಿಯವರೆಗೆ
ನಿಮ್ಮ ಮನೋರಂಜನೆಯ
ಮಾಧ್ಯಮವಾಗಿರಲಿ?
ಹೆಣ್ಣು ದೇವತೆಯೆಂದು ಹೇಳುವಿರಿ.
ಮತ್ತೇ ಅವಳ ವ್ಯಾಪಾರ ಮಾಡುವಿರಿ,
ಇಂತಹ ನಿಮ್ಮ ಭೋಗ ಸಂಸ್ಕೃತಿಯನ್ನು
ಕಂಡ ನಾನು ಇದನ್ನು
ಉಚ್ಚ ಸಂಸ್ಕೃತಿಯೆಂದು
ಹೇಗೆ ಹೇಳಲಿ?
ನೀವೇ ಹೇಳಿ ಬಂಧುಗಳೇ,
ನೀವೇ ಹೇಳಿ,
ಇಲ್ಲ ನೀವು, ಹೇಳುವದಿಲ್ಲ.
ಅದಕ್ಕೆ-
ನಾನೀಗ ಸುಮ್ಮನಿರಲಾರೆ,
ನನ್ನ ಬಾಯಿಯನ್ನು
ಸಂಪ್ರದಾಯಗಳ ಬೇಡಿಯಿಂದ
ಬಿಗಿಯಬೇಡಿ.
ನನಗೆ ಮಾತನಾಡಲು ಬಿಡಿ.

ಶತಮಾನಗಳ
ಭಯಂಕರ ಮೌನವನು
ಮುರಿದು ಮಾತನಾಡಲೇಬೇಕು.
ಬದುಕಿಯೂ ಸತ್ತಂತಿರುವ
ಕ್ರೂರ ಬದುಕನು ಬಹಿಷ್ಕರಿಸಿ
ಬಯಲಿಗೆ ಬರಲೇಬೇಕು.

ಬಿಟ್ಟುಬಿಡಿ ನನ್ನ ಬಂಧಿಸಬೇಡಿ
ನಿಮ್ಮ ಕ್ರೂರ ಕೈಗಳಿಂದ.
ಮೂಕ ಬದುಕನು ಬಿಟ್ಟು
ನಾನು ಮಾತನಾಡಲೇಬೇಕು.
ಸಂಘರ್ಷದ ಹಾದಿಯಲ್ಲಿ ಸಾಗಲೇಬೇಕು
ಬಿಟ್ಟುಬಿಡಿ ನನ್ನ ಬಂಧಿಸಬೇಡಿ
ಸಂಪ್ರದಾಯಗಳ ಶೈಯಿಲೆಯಿಂದ
ಬಿಟ್ಟು ಬಿಡಿ ನನ್ನ ಬಿಟ್ಟು ಬಿಡಿ
ನನಗೆ ವಾತನಾಡಲು ಬಿಡಿ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...