ಮೌನ

ಮೌನ ಉದ್ದಕ್ಕೆ ಬೆಳೆದಾಗ
ಭೂತ ಬೆಳೆದಂತೆ ಭಯವಾಗುತ್ತದೆ
ಮೌನ ಮನಸ್ಸಿನಲ್ಲಿ ಬೆಳೆದು ಕುಳಿತಾಗ
ತನ್ನವರು ಅನ್ಯರಾದಾಗ
ಜೊತೆಯವರು ಪರರಾಗಿ
ಏಕಾಂತವನ್ನು ಭೋಗಿಸ ಬೇಕಾಗಿ ಬಂದಾಗ
ಮೌನ ಭೀತವಾಗಿರದೆ
ಎಲೆಗಳಿಂದ ಹೊರಟ
ಹವೆಯೂ ರುಂಯೆಂದು
ಶಾಪವಾಗುತ್ತದೆ!
ಮೌನದಿಂದ ದೂರ ಓಡುವವರೆಲ್ಲ
ಚಾದಂಗಡಿಯಲ್ಲಿ
ಶರಾಬುಖಾನೆಯ ಮೇಜಿನಲ್ಲಿ
ಜೊತೆಗೊಬ್ಬರನ್ನು ಹುಡುಕ ತೊಡಗುತ್ತಾರೆ.
ಬೋರು ಹೊಡೆಯುವ ಯಾರದೋ
ಹಾಂಕ್ಕೆ ಹೂಂ ಸೇರಿಸಿ
ಕೇಳಿಸಿ ಕೊಂಡ ಸೋಗು ಹಾಕುತ್ತಾರೆ.
ಕೈಗೆಸಿಕ್ಕ ಒಣ ಕಾದಂಬರಿಯಲ್ಲಿ
ತೊಂಭತ್ತು ಮಿನಿಟುಗಳ ಹಿಂದಿ ಸಿನೇಮಾದಲ್ಲಿ
ಬೀದಿ ಬೀದಿಯ ನುಸುಳಿ
ವಿಂಡೋ ಶೋಪಿಂಗ್ ಮಾಡುತ್ತಾರೆ
ಕವಿಯ ಮನೆಯನ್ನು ಹೊಕ್ಕು
ಬೋರು ಕಾವ್ಯವ ಕೇಳಿ
ಕೇಳದೆಯೆ ವಾಹ! ಎಂದು ಮೆಚ್ಚುತ್ತಾರೆ
ಬಸ್‌ಸ್ಟಾಪಿನಲ್ಲಿ ವ್ಯರ್ಥವೆ ಬಸ್‌ ಬಿಡುತ್ತ
ಮನಸ್ಸು ಚಿಂತೆಯಲ್ಲದ್ದುವ ಮೊದಲೆ
ಸೆರೆಯ ಶರಣು ಹೊಡೆಯುತ್ತಾರೆ
ಯಾವ ಜತನವೂ ನಡೆಯದಿರೆ
ಮನೆಗೆ ಮರಳಿ
ಸತಿ ಸುತರಲ್ಲಿ ಹಿಂದೆ
ಆಡಿದ್ದನ್ನೆ ಆಡಿ
ಕೇಳದ-ಹೇಳದ ಫಾರ್ಮುಲವನ್ನೆ
ಮರುಕಳಿಸಿದಂತಾಗುವುದು
ನಂತರ ಮನೆಯಲ್ಲಿ
ಮನೆಯ ಮುಂದಿರುವ
ಸ್ಮಶಾನದಂತಹ,
ಒಂದು ದೀರ್ಘ ಮೌನ ಹರಡುವುದು
ಈ ಮೌನವನ್ನು ಬಿಗಿದಪ್ಪಿ
ಎಲ್ಲರು ಮಲಗುವರು
ನಿದ್ದೆಯಲ್ಲಿ ಬಡ ಬಡಿಸುವರು
ನನ್ನ ತೆರೆದಿದ್ದ ಕಣ್ಣಿಗೆ
ಬಾಲ್ಕನಿಯಲ್ಲಿ ತೂಗುವ
ಒಣವಸ್ತ್ರ ಕಾಣುವುದು
ನಮ್ಮ ಅಗಸ ಬರಲಿಲ್ಲ?
ನನ್ನ ಲುಂಗಿ ನೀನೆ ಒಗೆದದ್ದು ಲೇಸಾಯಿತು
ರಾತ್ರಿಯಲ್ಲಿ ಅದು….
ನಾನು ನನ್ನಷಕ್ಕೆಂಬಂತೆ
ಅವಳಿಗೆ ಹೇಳುತ್ತೇನೆ
ಕೋಮಿಕ್ಸ್ ಓದುತ್ತಿದ್ದ
ನನ್ನ ಮಗಳ ಮುಖ ಅರಳುತ್ತದೆ
ಅಪ್ಪ, ಮಾತು ಲುಂಗಿಯದಾದರೂ
ನಿನ್ನ ಮೌನ ಮುರಿಯಿತಲ್ಲ!
ಎಂದು ನಗೆ ಕಿಸಕ್ಕೆಂದು ಹೊರಡುತ್ತದೆ.
*****
ಮೂಲ: ಪ್ರೀತಮ್ ಬೇಲಿ
(ಹಿಂದಿ)

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...