ಮೌನ

ಮೌನ ಉದ್ದಕ್ಕೆ ಬೆಳೆದಾಗ
ಭೂತ ಬೆಳೆದಂತೆ ಭಯವಾಗುತ್ತದೆ
ಮೌನ ಮನಸ್ಸಿನಲ್ಲಿ ಬೆಳೆದು ಕುಳಿತಾಗ
ತನ್ನವರು ಅನ್ಯರಾದಾಗ
ಜೊತೆಯವರು ಪರರಾಗಿ
ಏಕಾಂತವನ್ನು ಭೋಗಿಸ ಬೇಕಾಗಿ ಬಂದಾಗ
ಮೌನ ಭೀತವಾಗಿರದೆ
ಎಲೆಗಳಿಂದ ಹೊರಟ
ಹವೆಯೂ ರುಂಯೆಂದು
ಶಾಪವಾಗುತ್ತದೆ!
ಮೌನದಿಂದ ದೂರ ಓಡುವವರೆಲ್ಲ
ಚಾದಂಗಡಿಯಲ್ಲಿ
ಶರಾಬುಖಾನೆಯ ಮೇಜಿನಲ್ಲಿ
ಜೊತೆಗೊಬ್ಬರನ್ನು ಹುಡುಕ ತೊಡಗುತ್ತಾರೆ.
ಬೋರು ಹೊಡೆಯುವ ಯಾರದೋ
ಹಾಂಕ್ಕೆ ಹೂಂ ಸೇರಿಸಿ
ಕೇಳಿಸಿ ಕೊಂಡ ಸೋಗು ಹಾಕುತ್ತಾರೆ.
ಕೈಗೆಸಿಕ್ಕ ಒಣ ಕಾದಂಬರಿಯಲ್ಲಿ
ತೊಂಭತ್ತು ಮಿನಿಟುಗಳ ಹಿಂದಿ ಸಿನೇಮಾದಲ್ಲಿ
ಬೀದಿ ಬೀದಿಯ ನುಸುಳಿ
ವಿಂಡೋ ಶೋಪಿಂಗ್ ಮಾಡುತ್ತಾರೆ
ಕವಿಯ ಮನೆಯನ್ನು ಹೊಕ್ಕು
ಬೋರು ಕಾವ್ಯವ ಕೇಳಿ
ಕೇಳದೆಯೆ ವಾಹ! ಎಂದು ಮೆಚ್ಚುತ್ತಾರೆ
ಬಸ್‌ಸ್ಟಾಪಿನಲ್ಲಿ ವ್ಯರ್ಥವೆ ಬಸ್‌ ಬಿಡುತ್ತ
ಮನಸ್ಸು ಚಿಂತೆಯಲ್ಲದ್ದುವ ಮೊದಲೆ
ಸೆರೆಯ ಶರಣು ಹೊಡೆಯುತ್ತಾರೆ
ಯಾವ ಜತನವೂ ನಡೆಯದಿರೆ
ಮನೆಗೆ ಮರಳಿ
ಸತಿ ಸುತರಲ್ಲಿ ಹಿಂದೆ
ಆಡಿದ್ದನ್ನೆ ಆಡಿ
ಕೇಳದ-ಹೇಳದ ಫಾರ್ಮುಲವನ್ನೆ
ಮರುಕಳಿಸಿದಂತಾಗುವುದು
ನಂತರ ಮನೆಯಲ್ಲಿ
ಮನೆಯ ಮುಂದಿರುವ
ಸ್ಮಶಾನದಂತಹ,
ಒಂದು ದೀರ್ಘ ಮೌನ ಹರಡುವುದು
ಈ ಮೌನವನ್ನು ಬಿಗಿದಪ್ಪಿ
ಎಲ್ಲರು ಮಲಗುವರು
ನಿದ್ದೆಯಲ್ಲಿ ಬಡ ಬಡಿಸುವರು
ನನ್ನ ತೆರೆದಿದ್ದ ಕಣ್ಣಿಗೆ
ಬಾಲ್ಕನಿಯಲ್ಲಿ ತೂಗುವ
ಒಣವಸ್ತ್ರ ಕಾಣುವುದು
ನಮ್ಮ ಅಗಸ ಬರಲಿಲ್ಲ?
ನನ್ನ ಲುಂಗಿ ನೀನೆ ಒಗೆದದ್ದು ಲೇಸಾಯಿತು
ರಾತ್ರಿಯಲ್ಲಿ ಅದು….
ನಾನು ನನ್ನಷಕ್ಕೆಂಬಂತೆ
ಅವಳಿಗೆ ಹೇಳುತ್ತೇನೆ
ಕೋಮಿಕ್ಸ್ ಓದುತ್ತಿದ್ದ
ನನ್ನ ಮಗಳ ಮುಖ ಅರಳುತ್ತದೆ
ಅಪ್ಪ, ಮಾತು ಲುಂಗಿಯದಾದರೂ
ನಿನ್ನ ಮೌನ ಮುರಿಯಿತಲ್ಲ!
ಎಂದು ನಗೆ ಕಿಸಕ್ಕೆಂದು ಹೊರಡುತ್ತದೆ.
*****
ಮೂಲ: ಪ್ರೀತಮ್ ಬೇಲಿ
(ಹಿಂದಿ)

Tagged:

Leave a Reply

Your email address will not be published. Required fields are marked *

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...