ಮೌನ

ಮೌನ ಉದ್ದಕ್ಕೆ ಬೆಳೆದಾಗ
ಭೂತ ಬೆಳೆದಂತೆ ಭಯವಾಗುತ್ತದೆ
ಮೌನ ಮನಸ್ಸಿನಲ್ಲಿ ಬೆಳೆದು ಕುಳಿತಾಗ
ತನ್ನವರು ಅನ್ಯರಾದಾಗ
ಜೊತೆಯವರು ಪರರಾಗಿ
ಏಕಾಂತವನ್ನು ಭೋಗಿಸ ಬೇಕಾಗಿ ಬಂದಾಗ
ಮೌನ ಭೀತವಾಗಿರದೆ
ಎಲೆಗಳಿಂದ ಹೊರಟ
ಹವೆಯೂ ರುಂಯೆಂದು
ಶಾಪವಾಗುತ್ತದೆ!
ಮೌನದಿಂದ ದೂರ ಓಡುವವರೆಲ್ಲ
ಚಾದಂಗಡಿಯಲ್ಲಿ
ಶರಾಬುಖಾನೆಯ ಮೇಜಿನಲ್ಲಿ
ಜೊತೆಗೊಬ್ಬರನ್ನು ಹುಡುಕ ತೊಡಗುತ್ತಾರೆ.
ಬೋರು ಹೊಡೆಯುವ ಯಾರದೋ
ಹಾಂಕ್ಕೆ ಹೂಂ ಸೇರಿಸಿ
ಕೇಳಿಸಿ ಕೊಂಡ ಸೋಗು ಹಾಕುತ್ತಾರೆ.
ಕೈಗೆಸಿಕ್ಕ ಒಣ ಕಾದಂಬರಿಯಲ್ಲಿ
ತೊಂಭತ್ತು ಮಿನಿಟುಗಳ ಹಿಂದಿ ಸಿನೇಮಾದಲ್ಲಿ
ಬೀದಿ ಬೀದಿಯ ನುಸುಳಿ
ವಿಂಡೋ ಶೋಪಿಂಗ್ ಮಾಡುತ್ತಾರೆ
ಕವಿಯ ಮನೆಯನ್ನು ಹೊಕ್ಕು
ಬೋರು ಕಾವ್ಯವ ಕೇಳಿ
ಕೇಳದೆಯೆ ವಾಹ! ಎಂದು ಮೆಚ್ಚುತ್ತಾರೆ
ಬಸ್‌ಸ್ಟಾಪಿನಲ್ಲಿ ವ್ಯರ್ಥವೆ ಬಸ್‌ ಬಿಡುತ್ತ
ಮನಸ್ಸು ಚಿಂತೆಯಲ್ಲದ್ದುವ ಮೊದಲೆ
ಸೆರೆಯ ಶರಣು ಹೊಡೆಯುತ್ತಾರೆ
ಯಾವ ಜತನವೂ ನಡೆಯದಿರೆ
ಮನೆಗೆ ಮರಳಿ
ಸತಿ ಸುತರಲ್ಲಿ ಹಿಂದೆ
ಆಡಿದ್ದನ್ನೆ ಆಡಿ
ಕೇಳದ-ಹೇಳದ ಫಾರ್ಮುಲವನ್ನೆ
ಮರುಕಳಿಸಿದಂತಾಗುವುದು
ನಂತರ ಮನೆಯಲ್ಲಿ
ಮನೆಯ ಮುಂದಿರುವ
ಸ್ಮಶಾನದಂತಹ,
ಒಂದು ದೀರ್ಘ ಮೌನ ಹರಡುವುದು
ಈ ಮೌನವನ್ನು ಬಿಗಿದಪ್ಪಿ
ಎಲ್ಲರು ಮಲಗುವರು
ನಿದ್ದೆಯಲ್ಲಿ ಬಡ ಬಡಿಸುವರು
ನನ್ನ ತೆರೆದಿದ್ದ ಕಣ್ಣಿಗೆ
ಬಾಲ್ಕನಿಯಲ್ಲಿ ತೂಗುವ
ಒಣವಸ್ತ್ರ ಕಾಣುವುದು
ನಮ್ಮ ಅಗಸ ಬರಲಿಲ್ಲ?
ನನ್ನ ಲುಂಗಿ ನೀನೆ ಒಗೆದದ್ದು ಲೇಸಾಯಿತು
ರಾತ್ರಿಯಲ್ಲಿ ಅದು….
ನಾನು ನನ್ನಷಕ್ಕೆಂಬಂತೆ
ಅವಳಿಗೆ ಹೇಳುತ್ತೇನೆ
ಕೋಮಿಕ್ಸ್ ಓದುತ್ತಿದ್ದ
ನನ್ನ ಮಗಳ ಮುಖ ಅರಳುತ್ತದೆ
ಅಪ್ಪ, ಮಾತು ಲುಂಗಿಯದಾದರೂ
ನಿನ್ನ ಮೌನ ಮುರಿಯಿತಲ್ಲ!
ಎಂದು ನಗೆ ಕಿಸಕ್ಕೆಂದು ಹೊರಡುತ್ತದೆ.
*****
ಮೂಲ: ಪ್ರೀತಮ್ ಬೇಲಿ
(ಹಿಂದಿ)

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...