Home / ಕವನ / ಕವಿತೆ / ನೆಲದ ಬೆಲೆ ಉಳಿಸೋಣ

ನೆಲದ ಬೆಲೆ ಉಳಿಸೋಣ

ಅಟ್ಟೋಣ, ಮೆಟ್ಟೋಣ ಕೆಚ್ಚೆದೆಯ ಮಿಂಚಿನಲಿ
ತಟ್ಟೋಣ ದವಡೆಯನೆ ಧಾಂಡಿಗರ ಸಂಚಿನಲಿ….

ನಮ್ಮುಸಿರ ಬಿಸಿಯು ಆರುವ ಮುನ್ನ
ನಮ್ಮೆದೆಯ ಅಸುವು ನೀಗುವ ಮುನ್ನ
ನಾಡಿಗರ ಹಸಿರಕ್ತ ಬರಿದೆ ಹೋಗುವ ಮುನ್ನ
ಕ್ರೋಧದುರಿ ಮೈತಾಳಿ ನಮ್ಮನೇ ಸುಡುವ ಮುನ್ನ…
ಅಟ್ಟೋಣ ದ್ರೋಹಿಗಳ, ಮೆಟ್ಟೋಣ ಬನ್ನಿ
ಕಟ್ಟಳೆಯ ಬದಿಗಿಟ್ಟು ಉರಿವ ಬೆಂಕಿಯ ತನ್ನಿ

ನಮ್ಮಳಲು ನಮಗಿರಲಿ
ಕೆಂಪಿರುಳು ಬೇಡ
ಸ್ವಾತಂತ್ರ್ಯ ಉಳಿದಿರಲಿ
ದಾಸ್ಯದಳು ಬೇಡ….

ನಮ್ಮೂರು ಕನಸಿನ ನಾಕ
ನಮ್ಮವರು ಉಸಿರಿತ್ತು
ಸಾವನ್ನೆ ಮುತ್ತಿಟ್ಟು
ನಮಗಿತ್ತ ಸುರಲೋಕ….

ನಮ್ಮೊಡಲ ಒಡೆಯರು ನಾವು
ಒಮ್ಮನದಿ ವೈರಿಗಳ ಹೊಡೆದು
ಜೀವ-ಭಾವೈಕ್ಯದ ಸಿಡಿಲ-ಮಳೆಗರೆದು
ದೇಶಕಂಟಕರ ಕೆಡಿಸುವೆವು….. ಇಲ್ಲವೆ ಸಾವು!

ಕಾಳರಾತ್ರಿಯ ಭಯವ ತಡೆದು
ಹಾಳು ಪ್ರಭುತನದ ಬೇಡಿ ಒಡೆದು
ಹೊಸತೇಜ-ಓಜಗಳ ಮೆರಗಿಂದ
ರಸಭರಿತ ಬೀಡಕಟ್ಟಿಹೆವು ನಾವು….

ನಮ್ಮ ನೆಲ ಚಂದನದ ಕಂಪಿನದು
ನಮ್ಮ ಹೊಲ ಹಸುರುಮಯ ಸೊಂಪಿನದು
ಶಾಂತಿದೂತರ, ಕ್ರಾಂತಿವೀರರ
ನಮ್ಮಕುಲ ಇಳೆಯಲತಿ ಪೆಂಪಿನದು…

ರಣಕಹಳೆ ನಾಡಿಗಳ ಹೊಕ್ಕು ನೆತ್ತರಿನ
ಕಣಕಣದಿ ಹೊಸ ಬಿರುಸನಿತ್ತು
ಕೆಣಕುತಿದೆ ನಮ್ಮ ನೆಲದಭಿಮಾನವನಿಂದು
ಹೋಗೋಣ ಬನ್ನಿ, ಮಾತೆಯ ಮಾನ ಉಳಿಸೋಣ

ಭಾರತಾಂಬೆಯ ವೀರ ಪುತ್ರರು
ಮೇರುಗಿರಿಯ ಹಿಮಖಂಡದಲಿ
ನೆತ್ತರಿನ ಕುಯಿಲು ಹರಿಸುತಿರೆ
ಭೀತರಾಗದೆ ನಾವು ನೆಗೆಯೋಣ, ಬಗೆಯೋಣ….

ಹೊನ್ನು ಮಣ್ಣಿನ ಕಲಹ ಬೇಡ ನಮಗಿಂದು
ಕುನ್ನಿಗಳ ಕೆಂಗಣ್ಣ ಕಿಡಿಯಿಹುದು ಮುಂದು
ನನ್ನಿಯಲಿ ನಮ್ಮೊಲವು
ಚಿನ್ನಿಗಳ ಕಣ್ಣುಗಳೆ ನಮಗೆ ಕುಂದು

ಇಂದು ಬನ್ನಿ ಒಂದಾಗೋಣ
ಮುಂದೆ ಎದೆಸೆಟೆದು ಸಾಗೋಣ
ಕಡೆಯುಸಿರು ಇರುವನಕ
ನೆಲದ ಬೆಲೆ ಉಳಿಸೋಣ…

(ಅಡಿಗರನ್ನು ನೆನೆದು)
*****

Tagged:

Leave a Reply

Your email address will not be published. Required fields are marked *

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...