Home / ಕವನ / ಕವಿತೆ / ಬಡತನ

ಬಡತನ

ಬಡತನವೆಂದು ಬೇಸರವೇ?
ಯಾರಿಗಿಲ್ಲ ಬಡತನ?
ಸುಖ ಕೊಡುವುದಿಲ್ಲ ಸಿರಿತನ
ಸಿರಿವಂತರ ಚಿಂತೆ ಹಲವು
ನಮಗಿಲ್ಲ ಅದರ ಗೊಡವು
ನಮಗೆ ಬರಿಯ ಹೊಟ್ಟೆ ಚಿಂತೆ
ಮಲಗಲಿದೆ ದೊಡ್ಡ ಸಂತೆ
ಯಾರೋ ಉಟ್ಟು ಬಿಟ್ಟ ಬಟ್ಟೆ
ನಮಗಿದ್ದೇ ಇದೆ ಎನ್ನಿ
ಪರರ ಕಷ್ಟ ಸ್ವಲ್ಪ ನೋಡ ಬನ್ನಿ.
ನಮ್ಮ ಭದ್ರ ಕೋಟೆ
ಬಡತನದ ರೇಖೆ
ದಾಟುವ ಸಾಹಸಿ
ಏರಿದ ಗೇಣು, ಜಾರಿದ ಮೊಳ
ಕೊನೆಗೂ ಏರಿದ. ಏರಿ… ಏರಿ… ನರಳಿದ
ಬೇಕು… ಬೇಕು… ಬೇಕು… ಎಂದು ಹಲುಬಿದ
ಕಂಡಲ್ಲೆಲ್ಲ ಕೊಳ್ಳೆ ಹೊಡೆದು ದಾರಿ ತಪ್ಪಿದ.
ಸೈಕಲ್ಕು ಸ್ಕೂಟರ್… ಕಾರು
ಸ್ವಂತ ಸೈಟು, ಮನೆ, ಒಡವೆ ಜೋರು
ಸೋಫ, ಟೀಪಾಯ್, ಡೈನಿಂಗ್ ಟೇಬಲ್
ರೇಡಿಯೋ, ಟೇಪು, ಟಿ.ವಿ., ಕೇಬಲ್
ಫೋನು, ಫ್ಯಾನು, ಫ್ರಿಜ್ಜು ಮಿಕ್ಸಿ
ಗೀಜರ್, ವ್ಯಾಕ್ಯೂಮ್ ಕ್ಲೀನರ್, ಏಸಿ
ವಾಷಿಂಗ್ ಮೆಷಿನ್, ಡಿಶ್ ವಾಷರ್
ಒಂದೇ… ಎರಡೇ… ಆಸೆ ನೂರು
ಕಳ್ಳ ಬಂದ, ನೆಂಟ ಬಂದ,
ಗೆಳೆಯ ಬಂದ, ಅಳಿಯ ಬಂದ
ಕಳ್ಳ ಬಂದ, ನೆಂಟ ಬಂದ,
ಗೆಳೆಯ ಬಂದ, ಅಳಿಯ ಬಂದ
ಉಂಡು ಹೋದ, ಕೊಂಡು ಹೋದ.
ತೆರಿಗೆ ಕಟ್ಟಿ, ಜೂಜು ಕಟ್ಟಿ
ಸಿರಿದೇವಿಗೆ ತಾಳಿ ಕಟ್ಟಿ, ಕೆಟ್ಟ…
ನಿದ್ದೆ ಕೆಡಿಸಿ ಹೊಟ್ಟೆ ಉರಿಸಿ
ಚಿಂತೆ ತುಂಬಿ ತಲೆಯ ಕೆಡಿಸಿ
ನಗಲಾಗದ, ಆಳಲಾಗದ
ನಾಗರಿಕ ಶಿಷ್ಟ ಸೋಗು
ಸಾಕು ಸಾಕು ಸಿರಿಯ ಹುಚ್ಚು.
ನಮಗೆಬೇಡ ಇಂಥ ನರಕ
ಬಡತನ ವಾದರೇನಂತೆ
ಶಾಂತಿ, ಪ್ರೀತಿ, ನೆಮ್ಮದಿಯ
ಬಾಳು ಸಾಕು ಕೊನೆಯವರೆಗೆ.
*****
೧೦-೦೪-೧೯೯೨

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...