Home / ಲೇಖನ / ಇತರೆ / ನಾಲಿಗೆ ಜಾರಿದರೆ?

ನಾಲಿಗೆ ಜಾರಿದರೆ?

ಪ್ರಿಯ ಸಖಿ,
ಶಿಷ್ಟತೆಯನ್ನು ಮೈಗೂಡಿಸಿಕೊಂಡಿರದ ನೀಚರು ತಮ್ಮದೆನಿಸುವ ಎಲ್ಲ ವಸ್ತುಗಳನ್ನು ಕೆಟ್ಟ ಕೆಲಸಗಳಿಗಾಗಿ, ತಮ್ಮ ಚಟ, ಸ್ವಾರ್ಥಸಾಧನೆಗಾಗಿ ಬಳಸಿಕೊಳ್ಳುತ್ತಾರೆ. ಅದರಲ್ಲಿ ಮುಖ್ಯಪಾತ್ರ ವಹಿಸುವುದು ನಾಲಿಗೆ. ಪುರಂದರದಾಸರ ಈ ಹಾಡನ್ನು ನೀನೂ ಕೇಳಿರಬಹುದು.
ಆಚಾರವಿಲ್ಲದ ನಾಲಿಗೆ
ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ
ವಿಚಾರವಿಲ್ಲದೇ ಪರರ ದೂಷಿವುದಕ್ಕೆ
ಚಾಚಿಕೊಂಡಿರುವಂಥ ನಾಲಿಗೆ
ಎನ್ನುತ್ತಾರೆ. ಕೆಲನೀಚರಿಗೆ ಎಲ್ಲದರಲ್ಲಿಯೂ ತಪ್ಪು ಹುಡುಕುವ, ತಮಗೆ ಸಂಬಂಧವಿರದ ವಿಷಯಕ್ಕೂ ಮೂಗು ತೂರಿಸುವ ಕೆಟ್ಟ ಚಟ. ಇಂಥವರಿಗೆ ಬುದ್ಧಿ ಹೇಳುತ್ತಾ ದಾಸರು ‘ವಿಚಾರವಿಲ್ಲದೆ ಪರರ ದೂಷಿಸುವದಕ್ಕಾಗಿ ನಾಲಿಗೆಯನ್ನು ಚಾಚಬೇಡ’ ಎನ್ನುತ್ತಾರೆ.

Speak little and speak the truth ಕಡಿಮೆ ಮಾತಾಡು ಮತ್ತು ಸತ್ಯವನ್ನೇ ಮಾತಾಡು ಎನ್ನುತ್ತಾನೆ ಷೇಕ್ಸ್‍ಪಿಯರ್. ಎರಡೂ ಕಷ್ಟದ ಕೆಲಸವೇ ಆದರೆ ನಿಜಕ್ಕೂ ಮೌಲ್ಯವುಳ್ಳ ಆದರ್ಶ. ಹೆಚ್ಚು ಮಾತಾಡುವ ವ್ಯಕ್ತಿ ಬುಡಬುಡುಕೆಯಾಗಿ ಬಿಡುವ ಅಪಾಯವಿದೆ. ತನ್ನ ನಾಲಿಗೆಯನ್ನು ಹಿಡಿತದಲ್ಲಿ ಇರಿಸಿಕೊಳ್ಳಲಾರದೇ ಮನಬಂದಂತೆ ಮಾತಾಡುವ ವ್ಯಕ್ತಿ ತನ್ನ ಮಾತಾಡುವ ಚಟದಲ್ಲಿ, ಹುಚ್ಚಿನಲ್ಲಿ ಸುಳ್ಳುಗಳನ್ನು ಸೃಷ್ಟಿಸುತ್ತಾ ಹೋಗುತ್ತಾನೆ. ಬರುಬರುತ್ತಾ ಅದವನಿಗೆ ರೂಢಿಯೂ ಆಗಿ, ಅದೇ ಅವನಿಗೆ ಖುಷಿ ಕೊಡುವ ವಿಷಯವೂ ಆಗಿಬಿಡುತ್ತದೆ. ಆಗ ಆ ವ್ಯಕ್ತಿ ಅಂತರಾಳದಲ್ಲಿ ಜೊಳ್ಳಾಗುತ್ತಾ ಒಂಟಿಯಾಗಿ ಬಿಡುತ್ತಾನೆ. ಏಕೆಂದರೆ ಅವನೇ ಸೃಷ್ಟಿಸಿರುವ ಸುಳ್ಳುಗಳಿಗೆ ಅವನ
ಅಂತರಾತ್ಮಕ್ಕಾದರೂ ಅವನು ಉತ್ತರಿಸಬೇಕಾಗುತ್ತದಲ್ಲವೇ?

ಸಖಿ, ಇದು ಒಳಗಿನ ವಿಚಾರವಾಯ್ತು. ಆದರೆ ಹೊರ ಪ್ರಪಂಚದಲ್ಲಿ ಇಂತಹ ನೀಚರಾಡುವ ಮಾತು ಎಷ್ಟೆಷ್ಟೋ ಘಾತಗಳನ್ನೇ ಸೃಷ್ಟಿಸಿಬಿಡಬಹುದು.  ಕೊನೆಗೊಮ್ಮೆ, ಅಂತಹ ಮಾತು ಆಡಿದವನ ಬುಡಕ್ಕೆ ಕೊಡಲಿಹಾಕಬಹುದು. ಆದರೆ ಅಷ್ಟರಲ್ಲೇ ಕಾಲವೇ ಮೀರಿರಬಹುದು. ಅದಕ್ಕೆಂದೇ ಕವಿ ಫ್ರಾಂಕ್ಲಿನ್ “A slip of the foot you may soon recover, but a slip of the tongue you may never get over” ಕಾಲು ಜಾರಿದರೆ ತಕ್ಷಣ ಸರಿಹೋಗಬಹುದು ಆದರೆ ನಾಲಿಗೆ ಜಾರಿದರೆ ಮತ್ತೆಂದಿಗೂ ಸರಿಹೋಗಲಾರದು ಎನ್ನುತ್ತಾನೆ. ವಿವೇಚನೆಯಿಲ್ಲದೇ ಮಾತನಾಡುವುದಕ್ಕಿಂತಾ ಮೌನವಾಗಿರುವುದು ಲೇಸಲ್ಲವೇ ಸಖಿ?
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...