Home / ಲೇಖನ / ಇತರೆ / ನಾಲಿಗೆ ಜಾರಿದರೆ?

ನಾಲಿಗೆ ಜಾರಿದರೆ?

ಪ್ರಿಯ ಸಖಿ,
ಶಿಷ್ಟತೆಯನ್ನು ಮೈಗೂಡಿಸಿಕೊಂಡಿರದ ನೀಚರು ತಮ್ಮದೆನಿಸುವ ಎಲ್ಲ ವಸ್ತುಗಳನ್ನು ಕೆಟ್ಟ ಕೆಲಸಗಳಿಗಾಗಿ, ತಮ್ಮ ಚಟ, ಸ್ವಾರ್ಥಸಾಧನೆಗಾಗಿ ಬಳಸಿಕೊಳ್ಳುತ್ತಾರೆ. ಅದರಲ್ಲಿ ಮುಖ್ಯಪಾತ್ರ ವಹಿಸುವುದು ನಾಲಿಗೆ. ಪುರಂದರದಾಸರ ಈ ಹಾಡನ್ನು ನೀನೂ ಕೇಳಿರಬಹುದು.
ಆಚಾರವಿಲ್ಲದ ನಾಲಿಗೆ
ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ
ವಿಚಾರವಿಲ್ಲದೇ ಪರರ ದೂಷಿವುದಕ್ಕೆ
ಚಾಚಿಕೊಂಡಿರುವಂಥ ನಾಲಿಗೆ
ಎನ್ನುತ್ತಾರೆ. ಕೆಲನೀಚರಿಗೆ ಎಲ್ಲದರಲ್ಲಿಯೂ ತಪ್ಪು ಹುಡುಕುವ, ತಮಗೆ ಸಂಬಂಧವಿರದ ವಿಷಯಕ್ಕೂ ಮೂಗು ತೂರಿಸುವ ಕೆಟ್ಟ ಚಟ. ಇಂಥವರಿಗೆ ಬುದ್ಧಿ ಹೇಳುತ್ತಾ ದಾಸರು ‘ವಿಚಾರವಿಲ್ಲದೆ ಪರರ ದೂಷಿಸುವದಕ್ಕಾಗಿ ನಾಲಿಗೆಯನ್ನು ಚಾಚಬೇಡ’ ಎನ್ನುತ್ತಾರೆ.

Speak little and speak the truth ಕಡಿಮೆ ಮಾತಾಡು ಮತ್ತು ಸತ್ಯವನ್ನೇ ಮಾತಾಡು ಎನ್ನುತ್ತಾನೆ ಷೇಕ್ಸ್‍ಪಿಯರ್. ಎರಡೂ ಕಷ್ಟದ ಕೆಲಸವೇ ಆದರೆ ನಿಜಕ್ಕೂ ಮೌಲ್ಯವುಳ್ಳ ಆದರ್ಶ. ಹೆಚ್ಚು ಮಾತಾಡುವ ವ್ಯಕ್ತಿ ಬುಡಬುಡುಕೆಯಾಗಿ ಬಿಡುವ ಅಪಾಯವಿದೆ. ತನ್ನ ನಾಲಿಗೆಯನ್ನು ಹಿಡಿತದಲ್ಲಿ ಇರಿಸಿಕೊಳ್ಳಲಾರದೇ ಮನಬಂದಂತೆ ಮಾತಾಡುವ ವ್ಯಕ್ತಿ ತನ್ನ ಮಾತಾಡುವ ಚಟದಲ್ಲಿ, ಹುಚ್ಚಿನಲ್ಲಿ ಸುಳ್ಳುಗಳನ್ನು ಸೃಷ್ಟಿಸುತ್ತಾ ಹೋಗುತ್ತಾನೆ. ಬರುಬರುತ್ತಾ ಅದವನಿಗೆ ರೂಢಿಯೂ ಆಗಿ, ಅದೇ ಅವನಿಗೆ ಖುಷಿ ಕೊಡುವ ವಿಷಯವೂ ಆಗಿಬಿಡುತ್ತದೆ. ಆಗ ಆ ವ್ಯಕ್ತಿ ಅಂತರಾಳದಲ್ಲಿ ಜೊಳ್ಳಾಗುತ್ತಾ ಒಂಟಿಯಾಗಿ ಬಿಡುತ್ತಾನೆ. ಏಕೆಂದರೆ ಅವನೇ ಸೃಷ್ಟಿಸಿರುವ ಸುಳ್ಳುಗಳಿಗೆ ಅವನ
ಅಂತರಾತ್ಮಕ್ಕಾದರೂ ಅವನು ಉತ್ತರಿಸಬೇಕಾಗುತ್ತದಲ್ಲವೇ?

ಸಖಿ, ಇದು ಒಳಗಿನ ವಿಚಾರವಾಯ್ತು. ಆದರೆ ಹೊರ ಪ್ರಪಂಚದಲ್ಲಿ ಇಂತಹ ನೀಚರಾಡುವ ಮಾತು ಎಷ್ಟೆಷ್ಟೋ ಘಾತಗಳನ್ನೇ ಸೃಷ್ಟಿಸಿಬಿಡಬಹುದು.  ಕೊನೆಗೊಮ್ಮೆ, ಅಂತಹ ಮಾತು ಆಡಿದವನ ಬುಡಕ್ಕೆ ಕೊಡಲಿಹಾಕಬಹುದು. ಆದರೆ ಅಷ್ಟರಲ್ಲೇ ಕಾಲವೇ ಮೀರಿರಬಹುದು. ಅದಕ್ಕೆಂದೇ ಕವಿ ಫ್ರಾಂಕ್ಲಿನ್ “A slip of the foot you may soon recover, but a slip of the tongue you may never get over” ಕಾಲು ಜಾರಿದರೆ ತಕ್ಷಣ ಸರಿಹೋಗಬಹುದು ಆದರೆ ನಾಲಿಗೆ ಜಾರಿದರೆ ಮತ್ತೆಂದಿಗೂ ಸರಿಹೋಗಲಾರದು ಎನ್ನುತ್ತಾನೆ. ವಿವೇಚನೆಯಿಲ್ಲದೇ ಮಾತನಾಡುವುದಕ್ಕಿಂತಾ ಮೌನವಾಗಿರುವುದು ಲೇಸಲ್ಲವೇ ಸಖಿ?
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...