Home / ಕವನ / ಕವಿತೆ / ಶ್ರಮಜೀವಿಗಳ ಹಾಡು

ಶ್ರಮಜೀವಿಗಳ ಹಾಡು

ನಾವು ಕಟ್ಟಿದ ಗೆದ್ದಲಗೂಡು
ನಿಮಗಾಯಿತು ಹುತ್ತ.
ನಾವು ಹೊತ್ತ ಮಣ್ಣಿನ ಕನಸು
ನಿಮಗಾಯಿತು ನನಸು.
ನಾವು ನೀರೆರೆದ ಹೂವು ಹಣ್ಣು
ನಮಗಾದವು ಹುಣ್ಣು.

ಮೂಸಿ ನೋಡದ ಕಾಡು ಕಲ್ಗಳ
ಮುದ್ದಾಡಿದೆವು ನಾವು
ಕಲ್ಲು ಕಂದಗಳ ಹೊತ್ತು ತಂದೆವು
ಕೋಟೆ ಕೊತ್ತಲಕೆ ಕಾಯ ಕೊಟ್ಟೆವು
ಕೋಟಿ ಕೈಗಳ ಕೋಟೆಯ ಕೆಳಗೆ
ಲಯವಾಯಿತು ಉಸಿರು
ದಣಿಗಳದೇ ಹೆಸರು.

ಕಲ್ಲಿನಲಿ ನಾವ್ ಕಣ್ಣ ಕಂಡೆವು
ಮೈಯ ಮುಟ್ಟುತ ಮೋದವುಂಡೆವು
ಎಳೆ ಎಳೆ ಬಿಡಿಸುತ ಜೀವ ಕೊಟ್ಟೆವು
ಎದ್ದು ನಿಂತಿತು ದೇವಸ್ಥಾನ
ಕೆಸರು ಗದ್ದೆಯ ಕಾರಸ್ಥಾನ.

ನರನರದಲಿ ಹೆಡೆಯೆತ್ತುತ
ನೀವ್ ಹರಿದಾಡುತ
ಮನ ಮಾರಿದೆವು ನಾವು
ಕರುಳನು ಕಿತ್ತು
ಕೊರಳಲ್ಲಿ ಧರಿಸಿ
ಮೆರೆದಾಡಿದಿರಿ ನೀವು

ಕಂಡ ಕಂಡವರ ಕವಚವಾದವರು
ಸುಖ ತೆತ್ತವರು, ಸಾವ ಕಂಡವರು
ದಾರಿ ಕಾಣುವೆವು ನಾವು
ಗೋರಿಯೊಳಗಡೆಯೆ ಘೋಷಣೆ ಕೂಗಿ
ಸಿಡಿದೇಳುವೆವು ನಾವು.
*****

Tagged:

Leave a Reply

Your email address will not be published. Required fields are marked *

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...