Home / ಲೇಖನ / ಇತರೆ / ಬಾಳಿಕೆ

ಬಾಳಿಕೆ

ಪ್ರಿಯ ಸಖಿ,
ಸಾವು ನಿಶ್ಚಿತವೆಂದು ತಿಳಿದೂ ಮಾನವ ತನ್ನ ಬದುಕಿನ ಕೊನೆಯ ಕ್ಷಣದವರೆಗೂ ತಾನು ಶಾಶ್ವತ. ತನ್ನಿಂದಲೇ ಪ್ರಪಂಚವೆಲ್ಲಾ ಎಂದುಕೊಂಡು ಇರುತ್ತಾನೆ. ಆದರೆ ಅವನು ಸತ್ತು ಹೆಣವಾದ ನಂತರ ಏತಕ್ಕೆ ಉಪಯೋಗಕ್ಕೆ ಬರುತ್ತಾನೆ? ಕವಿ ಜರಗನಹಳ್ಳಿ ಶಿವಶಂಕರ್ ಅವರು ತಮ್ಮ ಬಾಳಿಕೆ ಎಂಬ ಹನಿಗವನದಲ್ಲಿ.
ಹತ್ತಾರು ವರುಷ
ನೆರಳಾಗಿ ನಿಂತ ಮರ
ತೊಲೆಯಾಗಿ ಉಳಿಯಿತು
ನೂರಾರು ವರುಷ.
ನೂರು ವರುಷ
ಆಳಿದ ಅರಸ
ಉಳಿಯಲಿಲ್ಲ ಹೆಣವಾಗಿ
ಮೂರು ದಿವಸ
ಎನ್ನುತ್ತಾರೆ. ಎಷ್ಟು ನಿಜವಾದ ಮಾತಲ್ಲವೇ ಸಖಿ? ಮರ ಇದ್ದರೂ ಉಪಯೋಗಕ್ಕೆ ಬರುತ್ತದೆ. ಸತ್ತರೂ ಉಪಯೋಗಕ್ಕೆ ಬರುತ್ತದೆ. ಮಾನವ ಸತ್ತ ನಂತರವಂತೂ ಯಾವುದಕ್ಕೂ ಉಪಯೋಗಕ್ಕೆ ಬರುವುದಿಲ್ಲ. ಆದರೆ ಬದುಕಿದ್ದಾಗಲಾದರೂ ಇತರರಿಗೆ, ಸಮಾಜಕ್ಕೆ ಉಪಯೋಗವಾಗುವಂತೆ ಬದುಕಿದರೆ ಅದಕ್ಕಿಂತಾ ಧನ್ಯತೆ ಬೇರೆಲ್ಲಿದೆ.

ಈ ಮನುಜ ಜನ್ಮದಲ್ಲಿ ಹುಟ್ಟಿ ಬಂದ ಮೇಲೆ ಅದನ್ನು ಸಾರ್ಥಕಗೊಳಿಸುವಂತೆ ಬದುಕುವುದು ಮನುಜನ ಕರ್ತವ್ಯ. ವ್ಯಕ್ತಿಗಳು ಅಳಿದರೂ ಅವರು ಮಾಡಿದ ಕೆಲಸ ಇತಿಹಾಸದ ಪುಟಗಳಲ್ಲಿ ದಾಖಲಾಗುವುದಂತೂ ಖಂಡಿತಾ. ಹಾಗಾದರೆ ಈ ಸಾವಿನ ಕಬಂಧ ಬಾಹುಗಳಲ್ಲಿ ಸಿಲುಕದೆ ಅವಿನಾಶಿಯಾಗಿ ಉಳಿಯುವುದು ಯಾವುದು? ಕಥೆಗಾರ, ಚಿಂತಕ, ಚದುರಂಗರು ‘ಮಾನವನ ಬದುಕಿನಲ್ಲಿ ಮರಣವೇ ಅತ್ಯಂತ ಪ್ರಮುಖವಾದ ಸತ್ಯವಾದ ಸಂಗತಿ, ಉಳಿದೆಲ್ಲಾ ವಿಷಯಗಳೂ ಗೌಣ. ಈ ಸಾವಿನ ಮರುಳುಗಾಡಿನಲ್ಲಿ ಅವಿನಾಶಿಯಾಗಿ ಉಳಿಯಬಲ್ಲ ಒಂದೇ ಒಂದು ವಸ್ತುವೆಂದರೆ-ಕಲೆ’ ಎನ್ನುತ್ತಾರೆ.

ಹೌದಲ್ಲವೇ ಸಖಿ ಯಾವ ಕಲೆಗೂ ಸಾವೆಂಬುದಿಲ್ಲ. ಅವಿನಾಶಿ ಕಲೆಯ ಹೆಸರಿನೊಂದಿಗೆ, ಕಲೆಗಾರ ಸತ್ತರೂ ಜೀವಂತವಾಗುಳಿಯುತ್ತಾನೆ! ನಿಜವಾದ ಬದುಕಿನ
ಸಾರ್ಥಕತೆ ಇರುವುದೇ ಇಲ್ಲಲ್ಲವೇ?
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...