Home / ಕವನ / ಕವಿತೆ / ನರ-ವಾನರ

ನರ-ವಾನರ

ಕಾಡಿನ ಕೋತಿ ಬಿದುರಿನ ಚದುರೆ ಖಾಸ ಬಂಗ್ಲಿ ಬೋನಲ್ಲಿ……….
ವಿಕಾರ! ವಿಕಟ! ನಗೆಗೇಡೆಂದು ಹಳಿವರು ನಾವು ಮಾನವರು!
ಗಡವಮಂಗ, ಬಾಲದಕೋತಿ, ಮೊಂಡು ಬಾಲ, ನೀಲಮೂಗು,
ಈ ಪರಿಯುಂಟು ಮಂಗಗಳು ಹಣ್ಣೆ ತಿಂದು ಜೀವಿಪವು;
ಸಂಶಯ ಬಂತು ಆಕೆಗೆ! ನೀವೇ ನೆಂಬಿರಿ ಉತ್ತಮರೆ?
ಮಾನವರು ನಾವು! ವಾನರರು ಅವು! ಯಾರು ಹೇಳಿ ನಗೆಗೀಡು?
ಕೂದಲು ಉದುರೆ, ಹಲ್ಲು ಕಳಚೆ, ಗುಳ್ಳೆಗಣ್ಣು ಗಜ್ಜುಗವಾಗೆ!
ಚರ್ಮವೊಂದೇ ವ್ಯತ್ಯಾಸ! ವಸ್ತ್ರವೊಂದೇ ವ್ಯತ್ಯಾಸ!
ಎಂಥ ವಿಕಾರ ಅಡಗಿದೆ ಇಲ್ಲಿ ಮಾನವ ದೇಹದಲ್ಲಿ……..!
ಪರಿಯಿಷ್ಟೆ ಇನ್ನೂ ಸೂಕ್ಷ್ಮ ತೋರಿಸಬಲ್ಲೆ -ತೋರಿಸಿ ನಿಮ್ಮ ನೋಯಿಸಲೊಲ್ಲೆ!
ಆದರೆ, ನೋಡಿ, ಒಮ್ಮಾತಿನಲ್ಲಿ ಇದ್ದರೆ ಬೋನಿನ ಒಳಗಡೆ ನಾವು
ಕಾಣುವವೆಷ್ಟೋ ಅವಕಿಂತ ಅ-ವ-ಲ-ಕ್ಷ-ಣ!…………….
ತುಸುವೂ ಇಲ್ಲ ವ್ಯಾಯಾಮ! ಯೌವ್ವನ ಕಳೆಯಲು ಪರಿತಾಪ!
ನುಂಗುವುದಂತೂ ಲಾಡು, ಚಿರೋಟಿ ತಿಂದರೆ ಅರಗದು ನಮಗೇ ಗೊತ್ತು!
ಗುಡ್ಡದ ಗಾತ್ರ, ತಂಬಾಕು ಸೇದಲು ಸಾಲದು ನಿತ್ಯ ನಿತ್ಯ!
ಸಾಗರದಷ್ಟು ಸಾರಾಯಿ ಕುಡಿಯದೆ ತೃಪ್ತಿ ನಮಗೆಲ್ಲಿ?
ಯಾಕೋ ಏನೋ ಯಾರಿಗೆ ಗೊತ್ತು ಮಾನವರೆಲ್ಲರ ಪರಿಯಷ್ಟೆ!
ಕಾಯಗಳನ್ನು ಕಸುವಾಗಿಡಲು ಹಣ್ಣೇತಿಂದು ಇರಬಹುದಲ್ಲ?
ಆದರೆ ನೋಡಿ ಹಣ್ಣೆಲ್ಲ ವಾನರರಾಹಾರ!

ಹಣ್ಣು ಎಂದರೆ ಸಾಮಾನ್ಯ ಅಲ್ಲವು ಕೇಳಿ ನಿವೆಲ್ಲ!
ಬೇಸಿಗೆ ಬಿಸಿಲು, ಮಾಗೀ ಗಾಳೀ, ಭೂಮೀ ಸಾರ, ಜಡಿಮಳೆಯು
ಎಲ್ಲ ಸೇರಿ ಹಣ್ಣಿನ ರೂಪ ತಿಳಿಯದೆ? ನಿಮಗೆ? ಈ ಗುಟ್ಟು?
ದೇಹವ ಶೋಧಿಸಿ, ಮಿದುಳನು ತೊಳೆದು,
ದ್ವೇಷದ ದೋಷದ, ಇಲ್ಲಣ ತೊಡೆದು
ಮಾನವ ದೇಹವ ದೇವರ ಭಾವಕೆ ಸರಿಸಮನೆನಿಸಲು ಹಣ್ಣೇ ಬೇಕು!
ಆದರೆ, ನಾವು ದೇವರ ನೋಡಿಸಿ ಹಾ-ಯಾ-ಗಿ-ಹೆ-ವು!…………….
ಅದಕೇ ತಾನೇ, ಅವು ತಾವಾಗಿ ಕಾಣುತ ನಮ್ಮನುಹರಿದೂ ಹಾರೀ,
ಹತ್ತೀ, ಕುಣಿದೂ!…………..
ಬೆಳಗೂ ಬೈಗೂ, ತಲೆಕೆಳಗಾಗಿ ನೇತುಬಿದ್ದಿವೆ ಬೋನಲ್ಲಿ!
ಮಾಡುತಿಹನೆ ಅಪಹಾಸ್ಯ? ಮಾಡುತಿಹವೆ ನೀತಿಬೋಧೆ?
ನಗರದ ನರರ ಪರಿಮಿಷ್ಟೆ! ಬೋನಿನ ವಾನರರರಿವಷ್ಟೆ
ಅದು ನೋಡಿದರೆ ದೈವತ್ವ! ಅದರ ವಿಕಾರವೆ ನಮಗೆ ಮಹತ್ವ!
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...