Home / ಕವನ / ಅನುವಾದ / ಮಿಸ್ಟರ್ ಕಾಗಿಟೋ ನರಕದ ಬಗ್ಗೆ ಹೀಗೆಂದುಕೊಳ್ಳುತ್ತಾನೆ

ಮಿಸ್ಟರ್ ಕಾಗಿಟೋ ನರಕದ ಬಗ್ಗೆ ಹೀಗೆಂದುಕೊಳ್ಳುತ್ತಾನೆ

ನರಕದ ತಳಾತಳದಲ್ಲಿರುವ ಸೀಮೆ. ಎಲ್ಲರೂ ಅಂದುಕೊಂಡಂತೆ ಅಲ್ಲಿ
ನಿರಂಕುಶಾಧಿಕಾರಿಗಳಿಲ್ಲ. ಮಾತೃಹಂತಕರು, ಮಾತೃಗಾಮಿಗಳು, ಹೆಣಗಳನ್ನು ದರದರ
ಎಳೆದಾಡಿದವರು, ದೇಶದ್ರೋಹಿಗಳು ಯಾರೂ ಇಲ್ಲ. ನರಕದ ತಳಾತಳ ಕಾಲವಿದರ
ಆಶ್ರಯತಾಣ, ಎಲ್ಲೆಲ್ಲೂ ಕನ್ನಡಿಗಳು, ಸಂಗೀತ ವಾದ್ಯಗಳು, ವರ್ಣಚಿತ್ರಗಳು. ಸುಮ್ಮನೆ
ನೋಡಿದರೆ ಇದು ನರಕದ ಡಿಲಕ್ಸ್ ಡಿಪಾರ್ಟ್ಮೆಂಟು ಅನ್ನಿಸುತ್ತದೆ; ಕುದಿಯುವ ಎಣ್ಣೆ
ಕೊಪ್ಪರಿಗೆ ಇಲ್ಲ. ಮೈ ಕೊಯ್ಯುವ ಗರಗಸವಿಲ್ಲ. ಧಗಧಗ ಉರಿಯುವ ಬೆಂಕಿ
ನಾಲಗೆಗಳಿಲ್ಲ.
ವರ್‍ಷ ಪೂರ್ತಿ ಕಾವ್ಯ ಸ್ಪರ್ಧೆ, ಸಂಗೀತೋತ್ಸವ, ಕಲಾ ಮೇಳಗಳೇ. ಇವಕ್ಕೆ ಕ್ಲೈಮಾಕ್ಸ್
ಎಂಬುದಿಲ್ಲ. ಶಾಶ್ವತವಾಗಿ, ಬಹುಮಟ್ಟಿಗೆ ಅನಂತವಾಗಿ ಅಖಂಡವಾದ ಕ್ಲೈಮಾಕ್ಸೇ
ಯಾವಾಗಲೂ. ತಿಂಗಳಿಗೊಂದು ಹೊಸ ಪಂಥ, ಹೊಸ ಶೈಲಿಯ ಅವಿಷ್ಕಾರ.
ಅಗ್ರಗಾಮಿ ಕವಿ ಕಲಾವಿದರ ಮುನ್ನೆಡೆಯನ್ನು ತಡೆಯುವವರೇ ಇಲ್ಲ.
ನರಕದೊಡೆಯ ಬೇಲ್ಸೆಬಬ್‍ನಿಗೆ ಕಲೆಯನ್ನು ಕಂಡರೆ ತುಂಬ ಪ್ರೀತಿ. ನರಕದ ಮೇಳ,
ನರಕದ ಕವಿಗಳು, ನರಕದ ಸಂಗೀತಗಾರರು ಇವರೆಲ್ಲ ಸ್ವರ್ಗದಲ್ಲಿರುವ ಇಂಥವರಿಗಿಂತ
ತುಂಬ
ಅತ್ಯುತ್ತಮ ಎಂದು ಜಂಬಕೊಚ್ಚಿಕೊಳ್ಳಲು ಶುರುಮಾಡಿದ್ದಾನೆ. ಅತ್ಯುತ್ತಮ ಕಲೆ ಇದ್ದರೆ
ಅತ್ಕುತ್ತಮ ಸರ್ಕಾರವಿರುತ್ತದೆ. ಸತ್ಯ, ಪರಮ ಸತ್ಯ. ಸದ್ಯದಲ್ಲೆ ನರಕದ ಕಲಾವಿದರಿಗೂ
ಸ್ವರ್ಗದವರಿಗೂ ನಡುವೆ ಒಂದು ಸ್ಪರ್ಧೆ ಇದೆ, ಎರಡು ವಿಶ್ವಗಳ ಮಹಾ ಸರ್ಧೆ.
ಡಾಂಟೆ, ಫ್ರಾ ಏಂಜಲಿಕೋ, ಬಾಖ್ ಎಷ್ಟು ಮಟ್ಟಿಗೆ ಉಳಿದುಕೊಳ್ಳುತಾರೋ ನೋಡಬೇಕು.
ನರಕದೊಡೆಯ ಕಲೆಗೆ ಸಾಹಿತ್ಯಕ್ಕೆ ತುಂಬ ಪ್ರೋತ್ಸಾಹ ಕೊಡುತ್ತಾನೆ. ಕಲಾವಿದರಿಗೆ
ಶಾಂತಿ, ಅತ್ಯುತ್ತಮ ಆಹಾರ, ನರಕದ ಬದುಕಿನ ತಳಮಳ ತಾಗದಂಥ ಪ್ರತ್ಯೇಕ ಪರಿಪೂರ್ಣ
ಏಕಾಂತ ಒದಗಿಸಿದ್ದಾನೆ.
*****
ಮೂಲ: ಝ್ಬಿಗ್ನ್ಯೂ ಹರ್‍ಬರ್‍ಟ್ / Zbigniew Herbert

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...